ಗಣಿಗಳಲ್ಲಿ ನೀರು ಪತ್ತೆಗೆ ಪರದಾಟ!
Team Udayavani, May 31, 2019, 1:18 PM IST
ವಾಡಿ: ಬಳವಡಗಿ ಗ್ರಾಮದಲ್ಲಿ ಕುಡಿಯುವ ಹಾಹಾಕಾರ ಭುಗಿಲೆದ್ದಿದ್ದು, ಜನರು ದೂರದ ಕಲ್ಲು ಗಣಿಗಳಿಂದ ನೀರು ಹೊತ್ತು ತರುತ್ತಿದ್ದಾರೆ.
ವಾಡಿ: ಅತ್ತ ಉರಿ ಬಿಸಿಲಿನ ತಾಪ. ಇತ್ತ ಕೊಡ ನೀರಿಗಾಗಿ ಪರದಾಡುವ ತಾಪತ್ರಯ. ಅಡವಿ, ಅರಣ್ಯ ತಿರುಗಿ ನೀರು ಪತ್ತೆ ಮಾಡುತ್ತಿರುವ ವಿವಿಧ ಗ್ರಾಮಗಳ ಜನರು, ಜಲದಾಹ ನೀಗದೆ ಸಂಕಟ ಅನುಭವಿಸುತ್ತಿದ್ದಾರೆ.
ಪಟ್ಟಣ ಸಮೀಪದ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ಬಳವಡಗಿ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದು ಎರಡು ತಿಂಗಳು ಕಳೆದಿದೆ. ಜಿಲ್ಲಾಡಳಿತ ನೀಡಿದ ಟ್ಯಾಂಕರ್ ನೀರಿನ ಭರವಸೆ ಹುಸಿಯಾಗಿದೆ. ಜನರ ನೆರವಿಗೆ ನಿಲ್ಲಬೇಕಿದ್ದ ಗ್ರಾಪಂ ಆಡಳಿತ ಚುನಾವಣೆಯಲ್ಲಿ ಕಾಲಹರಣ ಮಾಡಿದೆ. ಅಧಿಕಾರಿಗಳು ಜನರ ಗೋಳು ಕೇಳಲು ಮುಂದಾಗಿಲ್ಲ. ಗ್ರಾಮದಿಂದ 2 ಕಿಮೀ ದೂರದಲ್ಲಿ ಪಾಳುಬಿದ್ದ ಕಲ್ಲು ಗಣಿಗಳಲ್ಲಿ ಖಾಲಿ ಕೊಡಗಳೊಂದಿಗೆ ಅಲೆದು ನೀರಿನ ಹೊಂಡಗಳನ್ನು ಪತ್ತೆ ಮಾಡುತ್ತಿರುವ ಮಹಿಳೆಯರು, ಚೀಪುಗಲ್ಲುಗಳ ಮಧ್ಯೆ ಸಂಗ್ರಹವಾಗಿದ್ದ ಪಾಚಿ ನೀರು ಹೊತ್ತು ತರುತ್ತಿದ್ದಾರೆ.
ಗ್ರಾಮದಲ್ಲಿ ಹಳೆಯ ಬಾವಿಗಳಿದ್ದು ಅಂತರ್ಜಲ ಬತ್ತಿದೆ. ಗ್ರಾಪಂ ನೀಡಿರುವ ನಳಗಳ ಸೌಲಭ್ಯದಲ್ಲಿ ಹನಿ ನೀರೂ ಜಿನುಗುತ್ತಿಲ್ಲ. ಟ್ಯಾಂಕರ್ ನೀರಿನ ಬೇಡಿಕೆಯಿಟ್ಟರೂ ಗ್ರಾಪಂ ಆಡಳಿತ ಕ್ಯಾರೆ ಎಂದಿಲ್ಲ. ಇಡೀ ದಿನ ಕಲ್ಲು ಗಣಿಗಳಲ್ಲಿ ಕೂಲಿ ಮಾಡಿ ಬದುಕು ನಡೆಸುತ್ತಿರುವ ಬಡ ಕುಟುಂಬಗಳು, ಬೆಳಗ್ಗೆ 6ರಿಂದ 8ರವರೆಗೆ ಹಾಗೂ ಸಂಜೆ 4ರಿಂದ 7ರವರೆಗೆ ಗಣಿಗಳನ್ನು ತಿರುಗಿ ನೀರು ಹುಡುಕುತ್ತಿದ್ದಾರೆ. ಕಲ್ಲಿನ ಗುಂಡಿಗಳಲ್ಲಿ ನಿಂತ ನೀರನ್ನು ಲೋಟಗಳಿಂದ ಕೊಡಗಳಿಗೆ ತುಂಬಬೇಕಾದ ದುಸ್ಥಿತಿ ಎದುರಾಗಿದೆ. ಮಕ್ಕಳು, ಮಹಿಳೆಯರು, ವಯಸ್ಕರು ಕೊಡಗಳನ್ನು ಹಿಡಿದು ದೂರದ ಗಣಿಗಳತ್ತ ನಡೆದರೆ, ಯುವಕರು ಬೈಕ್ಗಳ ಮೇಲೆ ನೀರು ಸಾಗಿಸುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಬಳವಡಗಿ ಗ್ರಾಮ ನೀರಿಗಾಗಿ ತತ್ತರಿಸುತ್ತದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ನಮ್ಮೂರಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಒದಗಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಳವಡಗಿ ಗ್ರಾಮದ ಸುತ್ತಲೂ ಕಲ್ಲು ಗಣಿಗಳಿವೆ. ಗ್ರಾಮದಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ ಗಣಿಗಳಲ್ಲಿ ನಿಂತ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಮ್ಮೂರಿನ ಪರಸ್ಥಿತಿ ನೋಡಿದರೆ ಜಿಲ್ಲಾಧಿಕಾರಿಗಳೇ ದಂಗಾಗುತ್ತಾರೆ.
• ಶಿವಪ್ಪ ಕೊದ್ದಡಗಿ,
ಗ್ರಾಮ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.