Kanahosahalli: ಹೋಬಳಿಯಾದ್ಯಂತ ಭಾರಿ ಮಳೆ; ಹಳ್ಳದಲ್ಲಿ ಕೊಚ್ಚಿಹೋದ ಮಿನಿ ಲಾರಿ
ಜನ ಜೀವನ ಅಸ್ತವ್ಯಸ್ತ
Team Udayavani, Oct 5, 2024, 10:22 AM IST
ಕಾನಾಹೊಸಹಳ್ಳಿ (ವಿಜಯನಗರ): ಕಾನಾಹೊಸಹಳ್ಳಿ, ಹುಲಿಕೆರೆ, ಬಯಲ ತುಂಬರಗುದ್ದೆ, ಕಾನಾಮಡುಗು, ಆಲೂರು, ಹಿರೇಕುಂಬಳಗುಂಟೆ, ಇಮಡಾಪುರ, ಸೇರಿದಂತೆ ಹೋಬಳಿಯಾದ್ಯಂತ ಆ.4ರ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪಿಚಾರಹಟ್ಟಿಯಿಂದ ಕೆಂಚಮಲ್ಲನಹಳ್ಳಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನವೊಂದು ಪಿಚಾರಹಟ್ಟಿ ಹೊರಹೊಲಯದ ಹಳ್ಳ ದಾಟುವ ಸಂದರ್ಭದಲ್ಲಿ ಕೊಚ್ಚಿ ಹೋಗಿದ ಘಟನೆ ನಡೆಯಿತು.
ಮಿನಿ ಗೂಡ್ಸ್ ಚಾಲಕ ದಾದಪಿರ್ ವಾಹನ ಚಲಾಯಿಸುತ್ತಿದ್ದು, ಆತನ ಸಮಯಪ್ರಜ್ಞೆಯಿಂದ ವಾಹನದಲ್ಲಿದ್ದ 10ಕ್ಕೂ ಹೆಚ್ಚು ಜನರನ್ನು ಕೆಳಗಡೆ ಇಳಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಳಿದಂತೆ ಕಾನಾಹೊಸಹಳ್ಳಿಯಲ್ಲಿನ ಗುಜುರಿ ಅಂಗಡಿಗೆ ನೀರು ನುಗ್ಗಿ, ಗುಜರಿ ಕಬ್ಬಿಣದ ಚೀಲಗಳು ಬಸ್ ನಿಲ್ದಾಣಕ್ಕೆ ಬಂದಿವೆ.
ರಾಷ್ಟ್ರೀಯ ಹೆದ್ದಾರಿ 50ರ ದಲಿತ ಕಾಲೋನಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಬಂದ್ ಆಗಿದೆ. ಸಿದ್ದಾಪುರದ ದೊಡ್ಡಹಳ್ಳ, ಹುಡೇಂ, ತಾಯಕನಹಳ್ಳಿಯ ಚಿನ್ನಹಗರಿ ತುಂಬಿ ಹರಿಯುತ್ತಿದೆ ಹಾಗೂ ಹುಲಿಕೆರೆ, ಕಾನಾಹೊಸಹಳ್ಳಿ ಕೆರೆಗಳಿಗೆ ಅರ್ಧದಷ್ಟು ನೀರು ಬಂದಿದ್ದು ಮತ್ತಷ್ಟು ನೀರು ಹರಿದು ಬರುತ್ತಿದೆ.
ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಹಾಗೂ ಸಜ್ಜೆ, ಸೂರ್ಯಕಾಂತಿ ಬೆಳೆಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tungabhadra ಡ್ಯಾಂನ ಎಲ್ಲ 33 ಗೇಟ್ ಬದಲಿಸಲು ತಜ್ಞರ ಸಲಹೆ
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Huvina Hadagali: ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
TungabhadraDam ಚೈನ್ ಲಿಂಕ್ ಮುರಿತ;ತಾತ್ಕಾಲಿಕ ತಡೆಗೇಟ್ ನಿರ್ಮಾಣಕ್ಕೆ ಜಮೀರ್ ಅಹ್ಮದ್ ಪೂಜೆ
Upper Krishna: ನೀರಾವರಿ ಇಲಾಖೆ ಭೂಸ್ವಾಧೀನ ಹೆಚ್ಚಳದ ಬಗ್ಗೆ ಸಮಗ್ರ ತನಿಖೆ : ಡಿಸಿಎಂ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bengaluru: ಮೆಡಿಕಲ್ ಸೀಟು ಕೊಡಿಸುವುದಾಗಿ 1.57 ಕೋಟಿ ರೂ. ವಂಚನೆ!
ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ
Bengaluru: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದೋಷಾರೋಪ ಪಟ್ಟಿ ಸಲ್ಲಿಕೆ
Bengaluru: 2.5 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ
Threats: ವಡೋದರಾ, ರಾಜ್ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.