![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 2, 2022, 2:58 PM IST
ಶಹಾಪುರ: ಪ್ರತಿಯೊಬ್ಬ ವಿದ್ಯಾರ್ಥಿ ಹೆಚ್ಚು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಜ್ಞಾನ ಪಡೆಯಬೇಕು ಎಂದು ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯದರ್ಶಿ ನಾರಾಯಣಾಚಾರ್ಯ ಸಗರ ಹೇಳಿದರು.
ನಗರದ ಹಳೆಪೇಟೆಯಲ್ಲಿ ಆಯೋಜಿಸಿದ್ದ ಸರಳ ರೀತಿಯ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ವರ್ಷ ಎಂದಾಕ್ಷಣ ಕೇವಲ ಸಂಭ್ರಮಿಸುವುದಲ್ಲ, ಪ್ರತಿಯೊಬ್ಬರು ಗಟ್ಟಿ ಸಂಕಲ್ಪ ಮಾಡಿ, ಶಾಲೆ-ಮನೆ-ಸಮಾಜಕ್ಕೆ ಕೀರ್ತಿ ತರುವಂಥ ಮಕ್ಕಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪೂರಕರ್ ಚಾಲನೆ ನೀಡಿದರು. ಸಂಸ್ಥೆ ಅಧ್ಯಕ್ಷ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮುರಳಿಧರ ಕುಲಕರ್ಣಿ, ಪ್ರಮುಖರಾದ ಶಿವರಾಜ ಹಾಲಗೇರಾ, ಬಸವರಾಜ ಕಂದಳ್ಳಿ, ಪತ್ರಕರ್ತರಾದ ವೆಂಕಟೇಶ ಆಲೂರ, ಚಂದ್ರಶೇಖರ ಕಟ್ಟಿಮನಿ ಸೇರಿದಂತೆ ರವಿಚಂದ್ರ ಚಟ್ನಳ್ಳಿ, ಸೋಮಶೇಖರ ಸಗರ, ಸಾಗರ್ ಹೋತಪೇಟೆ ಇದ್ದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪೂಜೆ ಸಲ್ಲಿಸಿ ಹೊಸ ವರ್ಷವನ್ನು ಸ್ವಾಗತಿಸಿದರು. ಪರಸ್ಪರ ಸಿಹಿ ತಿಂಡಿ ಹಂಚಿಕೊಂಡು ಸಂಭ್ರಮಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.