Brutal; 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಂದ ಮಲತಾಯಿ!
ಆಸ್ತಿಗಾಗಿ ವಡಗೇರಾದ ಬಬಲಾದದಲ್ಲಿ ಕೃತ್ಯ
Team Udayavani, Sep 2, 2023, 12:00 AM IST
ಯಾದಗಿರಿ: ತನ್ನ ಗಂಡನ ಆಸ್ತಿ ಇನ್ನೊಬ್ಬ ಹೆಂಡತಿಯ ಮಕ್ಕಳ ಪಾಲಾಗುತ್ತದೆ ಎನ್ನುವ ಕಾರಣಕ್ಕೆ 5 ತಿಂಗಳ ಹಸುಗೂಸನ್ನು ಹಾಲಿಗೆ ವಿಷ ಬೆರೆಸಿ ಕುಡಿಸಿ ಹತ್ಯೆ ಮಾಡಿರುವ ಘಟನೆ ವಡಗೇರಾ ತಾಲೂಕಿನ ಬಬಲಾದದಲ್ಲಿ ನಡೆದಿದೆ.
ಘಟನೆಯಲ್ಲಿ ಸಂಗೀತಾ (5 ತಿಂಗಳು) ಎಂಬ ಹಸುಗೂಸು ಮೃತಪಟ್ಟಿದೆ. ಬಬಲಾದ ಗ್ರಾಮದ ಸಿದ್ದಪ್ಪಚೆಟ್ಟಿಗೇರಿಗೆ ದೇವಮ್ಮ ಚೆಟ್ಟಿಗೇರಿ ಮತ್ತು ಶ್ರೀದೇವಿ ಚೆಟ್ಟಿಗೇರಿ ಎಂಬ ಇಬ್ಬರು ಹೆಂಡತಿಯರು. ಇರುವ ಆಸ್ತಿಯಲ್ಲಿ ಪಾಲಾಗುತ್ತದೆ. ಶ್ರೀದೇವಿ ಮಗಳಿಗೂ ಆಸ್ತಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ದೇವಮ್ಮ ಹಸುಗೂಸಿನ ಹತ್ಯೆ ಮಾಡಿದ್ದಾಳೆ.
ಹಾಲಿನಲ್ಲಿ ವಿಷ ಬೆರೆಸಿದಳು
ಆ.30ರಂದು ಬೆಳಗ್ಗೆ ಮಗುವಿಗೆ ಹಾಲುಣಿಸಲು ಕುಳಿತಿದ್ದ ಶ್ರೀದೇವಿ ಕೈಯಿಂದ ದೇವಮ್ಮ ಮಗುವನ್ನು ಬಲವಂತವಾಗಿ ತೆಗೆದುಕೊಂಡಿದ್ದಾಳೆ. ಕೋಣೆಗೆ ಕರೆದೊಯ್ದು ಮಗುವಿಗೆ ವಿಷಬೆರೆಸಿದ ಹಾಲುಣಿಸಿದ್ದಾಳೆ. ಬಳಿಕ ಮಗು ವಾಂತಿ ಮಾಡಿದೆ. 3 ಗಂಟೆಯ ಬಳಿಕ ಮಗುವಿನ ಬಾಯಿಯಲ್ಲಿ ನೊರೆ ಬರುತ್ತಿರುವಾಗ ಗಾಬರಿಗೊಂಡ ಶ್ರೀದೇವಿ, ದೇವಮ್ಮ ತನ್ನ ಮಗುವಿಗೆ ಹಾಲಿನಲ್ಲಿ ವಿಷ ಬೆರೆಸಿದ್ದಾಳೆಂದು ಕೂಗಾಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾಳೆ. ಆ ವೇಳೆಗಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀದೇವಿ ನೀಡಿದ ದೂರಿನ ಮೇರೆಗೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್ ಅಸಮಾಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.