ಸರ್ಕಾರಿ ಶಾಲೆಯಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮ
Team Udayavani, Dec 21, 2021, 2:43 PM IST
ಸೈದಾಪುರ: ಮಕ್ಕಳ ಗುಣಮಟ್ಟದ ಕಲಿಕೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮುಖ್ಯಗುರು ಸತೀಶ ಡಿ ಅಭಿಪ್ರಾಯಪಟ್ಟರು.
ಸಮೀಪದ ಆನೂರು ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಒತ್ತಡದ ಜೀವನ ಮತ್ತು ಬದಲಾದ ಆಹಾರ ಪದ್ಧತಿಯಿಂದಜನರು ಮತ್ತು ಮಕ್ಕಳು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇವುಗಳಿಂದತಪ್ಪಿಸಿಕೊಳ್ಳಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಯೋಗಸಾನ, ಪ್ರಾಣಾಯಾಮ ಅಭ್ಯಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಆರೋಗ್ಯವಂತ ದೇಶವನ್ನು ನಿರ್ಮಿಸಲುಪ್ರಧಾನಿ ಮೋದಿಯವರು ಫಿಟ್ ಇಂಡಿಯಾ(ಸದೃಢ ಭಾರತ) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ದೇಶವನ್ನುಆರೋಗ್ಯದತ್ತ ತೆಗೆದುಕೊಂಡು ಹೋಗಲುಈ ಅಭಿಯಾನ ನಮಗೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಹರ್ಷವರ್ಧನ ಶಿಕ್ಷಕರುಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಕಲಿಸಿಕೊಟ್ಟರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ವೆಂಕಟರೆಡ್ಡಿ, ಸದಸ್ಯರಾದ ಅಬ್ದುಲ್ ಕರೀಂ, ಕಲ್ಲಮ್ಮ, ನಿಂಬೆಮ್ಮ, ಕಲ್ಲಪ್ಪ, ಶಿಕ್ಷಕರಾದ ರಮೇಶ, ಕೊಟ್ರಮ್ಮ, ಗೀತಾ,ಹಣಮಂತ್ರಾಯ, ಶಂಭುಲಿಂಗಪ್ಪ, ಮಂಗಳಗೌರಮ್ಮ, ಹಣಮಂತ, ರುದ್ರಪ್ಪಗೌಡ,ಮಲ್ಲಪ್ಪ, ಬೆಟ್ಟಯ್ಯ ಸ್ವಾಮಿ, ಬಂದಪ್ಪಗೌಡ,ಸೋಮನಾಥ ರೆಡ್ಡಿ, ಲಿಂಗಯ್ಯ ಸ್ವಾಮಿ,ಫಕೀರಸಾಬ, ಕಲ್ಲಪ್ಪ, ಪರ್ವರೆಡ್ಡಿ,ನಬೀಚಾಂದ್, ಶಂಕ್ರಪ್ಪ, ಯಲ್ಲಪ್ಪ, ಚಾಹುಸೇನ್ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.