ಮುಂಬೈಯಿಂದ ಯಾದಗಿರಿಗೆ ಬಂದಿಳಿದ ಜನ
Team Udayavani, Jun 2, 2020, 7:13 AM IST
ಯಾದಗಿರಿ: ಮುಂಬೈಯಿಂದ ಸೋಮವಾರ ಬೆಳಗ್ಗೆ ಬಿಟ್ಟಿದ್ದ ಉದ್ಯಾನ್ ರೈಲು ರಾತ್ರಿ 8:30ರ ಸುಮಾರಿಗೆ ನಗರದ ನಿಲ್ದಾಣಕ್ಕೆ ಬಂದು ತಲುಪಿತು.
ರೈಲಿನ ಮೂಲಕ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿದ್ದ ಜಿಲ್ಲೆಯ 120ಕ್ಕೂ ಹೆಚ್ಚು ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ರೈಲು ಇಳಿಯುವುದಕ್ಕೂ ಮುನ್ನ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವಂತೆ ಎಚ್ಚರಿಕೆ ಮೂಡಿಸಲಾಯಿತು. ರೈಲಿನಿಂದ ಇಳಿದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಸ್ಕ್ರೀನಿಂಗ್ ಮಾಡಿ ಕೈಗೆ ಶೀಲ್ ಹಾಕಲಾಯಿತು. ಪ್ರಯಾಣಿಕರ ವಿವರ ನೋಂದಾಯಿಸಿಕೊಂಡು ರೈಲು ನಿಲ್ದಾಣದ ಆವರಣಲ್ಲಿ ನಿಲ್ಲಿಸಿದ್ದ 3 ಸಾರಿಗೆ ಬಸ್ಗಳ ಮೂಲಕ ನೇರವಾಗಿ ಕ್ವಾರಂಟೈನ್ ಗೆ ಕರೆದುಕೊಂಡು ತೆರಳಲಾಯಿತು. ಎಲ್ಲರನ್ನು ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ 14 ದಿನಗಳ ಕಾಲ ಇರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಎಸ್ಪಿ ಋಷಿಕೇಶ ಸೋನಾವಣೆ ನಿಲ್ದಾಣದಲ್ಲಿದ್ದು ಪ್ರಯಾಣಿಕರ ಸ್ಕ್ರೀನಿಂಗ್, ವಿವಿರ ನೋಂದಣಿ ಹಾಗೂ ಸ್ಟಾಂಪಿಂಗ್ ಕಾರ್ಯ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.