ರೈತರಿಂದ ರಸ್ತೆ ತಡೆದು ಪ್ರತಿಭಟ®; ಡಿಸಿ ಭರವಸೆಗೆ ತಣಿದ ರೈತರು

ಕಾಲುವೆ ನೀರಿನ ಹಕ್ಕನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು ಎಂದು ಕಳವಳ

Team Udayavani, Jan 23, 2021, 5:46 PM IST

ರೈತರಿಂದ ರಸ್ತೆ ತಡೆದು ಪ್ರತಿಭಟ®; ಡಿಸಿ ಭರವಸೆಗೆ ತಣಿದ ರೈತರು

ಸಿರವಾರ: ತಾಲೂಕಿನ ಜಕ್ಕಲದಿನ್ನಿ, ಗಣದಿನ್ನಿ,  ಭಾಗ್ಯನಗರ ಕ್ಯಾಂಪ್‌, ಜಾಲಾಪೂರು ಕ್ಯಾಂಪ್‌ಗ್ಳಿಗೆ ಸೇರಿದಂತೆ ತುಂಗಾಭದ್ರಾ ಎಡದಂಡೆ ನಾಲೆಯ 92ನೇ
ಡಿಸ್ಟ್ರಿಬ್ಯೂಟರ್‌ನ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಕೆಳಭಾಗದ ರೈತರು ಪಟ್ಟಣವನ್ನು ಸಂಪೂರ್ಣ ಬಂದ್‌ ಮಾಡಿ ರಸ್ತೆ ತಡೆದು
ಶುಕ್ರವಾರ ಪ್ರತಿಭಟಿಸಿದರು.

ಗಂಗಾಧರ ನಾಯಕ ಮಾತನಾಡಿ, ತುಂಗಾಭದ್ರಾ ಅಣೆಕಟ್ಟಿನಲ್ಲಿ ಅಗತ್ಯ ನೀರು ಸಂಗ್ರಹ ಹಾಗೂ ಎಡದಂತೆ ನಾಲೆಗಳಗೆ ಸಮರ್ಪಕ ನೀರು ಹರಿಸಲಾಗುತ್ತಿದ್ದರೂ ಕೊನೆ ಭಾಗದ ಉಪ ಕಾಲುವೆಗಳಿಗೆ ಇನ್ನು ನೀರು ಹರಿಯುತ್ತಿಲ್ಲ ಎಂದು ದೂರಿದರು.

ಪಟ್ಟಣ ಸೇರಿದಂತೆ ಜಕ್ಕಲದಿನ್ನಿ, ಭಾಗ್ಯನಗರ ಕ್ಯಾಂಪ್‌, ಗಣದಿನ್ನಿ ರೈತರು ಬೆಳೆದಿರುವ ಹತ್ತಿ, ಮೆಣಸಿನಕಾಯಿ , ಜೋಳದ ಬೆಳೆಗಳು ಒಣಗುತ್ತಿವೆ.
ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿದ್ದು, ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ರೈತರು ಆರೋಪಿಸಿದರು. ಮಾಜಿ ಶಾಸಕ ಹಂಪಯ್ಯ ನಾಯಕ ಮಾತನಾಡಿ, ಹಾಲಿ ಶಾಸಕರು ಇಷ್ಟೆಲ್ಲ ಹೋರಾಟ ನಡೆದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷÂವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಧಿಕಾರಿ ಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ನೀಡುವವರೆಗೂ ಪ್ರತಿಭಟನೆಹಿಂಪಡೆಯುವುದಿಲ್ಲ ಎಂದರು.

ಜೆ. ಶರಣಪ್ಪಗೌಡ ಮಾತನಾಡಿ, ಸಂಗ್ರಹ ನೀರು ಹೆಚ್ಚಿದ್ದರೂ ನಮಗೆ ತಲುಪುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮುಂದೆ ನಾವು ಕಾಲುವೆ ನೀರಿನ ಹಕ್ಕನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಸಂಪೂರ್ಣ ಬಂದ್‌: ಪ್ರತಿಭಟನೆಗೆ ಬೆಂಬಲಿಸಿ ವರ್ತಕರು ಅಂಗಡಿ-ಮುಂಗಟ್ಟು ಬಂದ್‌ ಮಾಡಿದ್ದರು. ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಸಂಪೂರ್ಣ ಅ ಸ್ತವ್ಯಸ್ತಗೊಂಡು ಬಸ್‌, ಖಾಸಗಿ, ದ್ವಿಚಕ್ರ ಸವಾರರು ಪರದಾಡುವಂತಾಯಿತು.
ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್‌, ಸಿಂಧನೂರು ಸಿಪಿಐ  ಜಿ. ಚಂದ್ರಶೇಖರ ನೇತೃತ್ವದಲ್ಲಿ ಬಂದೋಬಸ್ತ್
ಒದಗಿಸಲಾಗಿತ್ತು.

ಪ್ರತಿಭಟನೆಯಲ್ಲಿ ಚುಕ್ಕಿ ಸೂಗಪ್ಪ ಸಾಹುಕಾರ,ಶಂಕರಗೌಡ ಹರವಿ, ಶಿವಶರಣಗೌಡ ಲಕ್ಕಂದಿನ್ನಿ, ಜಕ್ಕಲದಿನ್ನಿ ಮಲ್ಲಿಕಾರ್ಜುನ, ಜೆ. ದೇವರಾಜಗೌಡ,
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಮೇಟಿ, ಜಿ. ಲೋಕರೆಡ್ಡಿ, ಚಂದ್ರು ಕಳಸ, ಎನ್‌.ಉದಯಕುಮಾರ,
ಚುಕ್ಕಿ ಶಿವಕುಮಾರ, ಬ್ರಿಜೇಶ ಪಾಟೀಲ್‌, ಅರಿಕೇರಿ ಶಿವಶರಣ, ಪಿ.ಅಮರೇಶ ಚಾಗಭಾವಿ, ರಮೇಶ ದರ್ಶನಕರ್‌, ಕಲ್ಲೂರು ಬಸವರಾಜ, ಎಸ್‌.
ದಾನನಗೌಡ, ರಾಜಪ್ಪಗೌಡ ಭಾಗ್ಯನಗರ, ಎಂ. ರಾಧಾಕೃಷ್ಣ, ಕಡದಿನ್ನಿ ಬೀರಪ್ಪ, ನಾಗನಗೌಡ ಅತ್ತನೂರು, ರಮೇಶ ಚಿಂಚಿರಕಿ, ಚಾಗಭಾವಿ
ಉದಯಕುಮಾರ, ಚನ್ನೂರು ಚನ್ನಪ್ಪ, ಎಂ. ಪ್ರಕಾಶ, ಕರವೇ ರಾಘವೇಂದ್ರ, ಡಿ. ಯಮನೂರಪ್ಪ, ಎಂ. ಶ್ರೀನಿವಾಸ, ವೈ. ಶ್ರೀನಿವಾಸ, ಗಣೇಕಲ್‌ ವೀರೇಶ,
ಪತ್ತಾರ ನಾಗಪ್ಪ, ನೀಲಗಲ್‌ ವಿರುಪಾಕ್ಷಪ್ಪ, ಬಸವರಾಜ ದಳಪತಿ ಜಾಲಾಪುರ, ನೀಲಗಲ್‌ ಚಂದ್ರಶೇಖರ, ರಮೇಶ್‌ ಅಂಗಡಿ, ನಾಗರಾಜ ಬೊಮ್ಮನಾಳ
ಇತರರಿದ್ದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadgir: ಬಸ್ ಪಲ್ಟಿ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadgir: ಬಸ್ ಅಪಘಾತ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

13-yadgiri

Yadgir: ಬೈಕ್‌ -ಬಸ್‌ ಭೀಕರ ಅಪಘಾತ‌; ಮೂವರು ಮಕ್ಕಳು ಸೇರಿ ಬೈಕ್‌ ನಲ್ಲಿದ್ದ ಐವರ ದುರ್ಮರಣ

Miscreants set fire to the idol of Goddess Mariyamma at Yadagiri

Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Yadagiri: Worm found in hostel food

Yadagiri: ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.