![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jun 1, 2022, 2:59 PM IST
ಕೆಂಭಾವಿ: ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಮತ್ತು ವ್ಯಾಪಾರ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ನವ ನಿರ್ಮಾಣ ಸೇನೆಯ ಪದಾಧಿಕಾರಿಗಳು ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕನಸೇ ಜಿಲ್ಲಾ ಸಂಚಾಲಕ ಸೋಮನಾಥ ಬಡಿಗೇರ, ಪಟ್ಟಣದಲ್ಲಿ ಹಲವು ವಾಣಿಜ್ಯ ಅಂಗಡಿಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ. ಇದಲ್ಲದೇ ಹಲವು ಬಡಾವಣೆಗಳಲ್ಲಿ ಬೇರೆ ರಾಜ್ಯದ ಭಾಷೆಗಳು ಎದ್ದು ಕಾಣುತ್ತಿದ್ದು, ಇವೆಲ್ಲವನ್ನು ವಾರದೊಳಗೆ ತೆರವುಗೊಳಿಸಿ ಕನ್ನಡ ನಾಮಫಲಕಗಳನ್ನು ಹಾಕದಿದ್ದರೆ ನಮ್ಮ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಅನ್ಯ ಭಾಷೆ ನಾಮಫಲಕಗಳನ್ನು ತೆಗೆದು ಹಾಕಿ ಕನ್ನಡದ ನಾಮಫಲಕಗಳನ್ನು ಹಾಕಲು ಮುಂದಾಗುತ್ತೇವೆ ಎಚ್ಚರಿಸಿದರು.
ನರಸಿಂಗಪ್ಪ ಗೌಡೂರ, ಕೃಷ್ಣಪ್ಪ ತಳವಾರ, ಶಿವು ಸಾಸನೂರ, ಎಂ.ಕೆ. ಪೂಜಾರಿ, ವಿಜಯ ನಾಯಕ, ಮೌನೇಶ ತಳವಾರ, ಮಾಳಪ್ಪ, ಮಲ್ಲಿಕಾರ್ಜುನ, ಮೋಹನ ಬಡಿಗೇರ ಇದ್ದರು.
You seem to have an Ad Blocker on.
To continue reading, please turn it off or whitelist Udayavani.