ಶರಣರ ವಿಚಾರಧಾರೆ ಬದುಕಿಗೆ ಸ್ಫೂರ್ತಿ


Team Udayavani, Dec 28, 2020, 4:26 PM IST

ಶರಣರ ವಿಚಾರಧಾರೆ ಬದುಕಿಗೆ ಸ್ಫೂರ್ತಿ

ಶಹಾಪುರ: ವೈಜ್ಞಾನಿಕ ವಿಚಾರಧಾರೆ ಹೊಂದಿದ ಶರಣ ಸಾಹಿತ್ಯ, ಶರಣ ಸಂಸ್ಕೃತಿಯ ಪ್ರತೀಕವಾದ ಕಾಯಕ,ನಿಷ್ಠೆ ಹಾಗೂ ಬಸವಾದಿ ಶರಣರ ತತ್ವಾದರ್ಶಗಳೇ ನನ್ನ ಬದುಕಿಗೆ ಸ್ಫೂರ್ತಿ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.

ನಗರದ ಕುಂಬಾರ ಓಣಿಯ ಕಾಯಕ ನಿಲಯದಲ್ಲಿ ಸಗರದ ಕಲಾ ನಿಕೇತನ ಟ್ರಸ್ಟ್‌ ವತಿಯಿಂದಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.ಬರೀ ಶರಣರ ಅನುಯಾಯಿ ಎಂದು ಮಾತಿಗೆ ಭಾಷಣದಲ್ಲಿ ಅಂದರೆ ಸಾಲದು. ಬದುಕಿನಲ್ಲಿ ಅದರಂತೆ ನಡೆದುಕೊಳ್ಳಬೇಕು. ಅಂದಾಗ ಮಾತ್ರಶರಣರಿಗೆ ಗೌರವ ಸಲ್ಲಿಸದಂತಾಗಲಿದೆ. ಬದುಕು ಸಹ ಸುಂದರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ,ಶಿವಣ್ಣ ಇಜೇರಿ ನೇರಾನೇರ ಮಾತನಾಡುವವ್ಯಕ್ತಿತ್ವ ಹೊಂದಿದವರು. ನಿಷ್ಟುರವಾದಿ. ಇದ್ದದ್ದನ್ನುಇದ್ದ ಹಾಗೇ ಹೇಳುವ ವ್ಯಕ್ತಿ. ಶರಣರ ನಡೆ-ನುಡಿ ಮೈಗೂಡಿಸಿಕೊಂಡು ಬೆಳೆದವರು. ಕಳೆದ 40ವರ್ಷದಿಂದ ಒಂದೇ ಅಂಗಡಿಯಲ್ಲಿ ಗುಮಾಸ್ತನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ. ಕಾಯಕದಲ್ಲಿ ಅವರಿಗಿರುವ ನಂಬಿಕೆ ವಿಶ್ವಾಸವೇ ಅವರನ್ನು ಇಲ್ಲಿವರೆಗೆ ತಂದಿದೆ ಎಂದರು.

ಹಿರಿಯ ಸಾಹಿತಿ ಡಾ| ಅಬ್ದುಲ್‌ ಕರೀಂ ಕನ್ಯಾಕೋಳೂರ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಉಪನ್ಯಾಸಕರಾದ ಡಾ|ರವೀಂದ್ರನಾಥ ಹೊಸ್ಮನಿ, ವಿಮರ್ಶಕರಾದ ಸಿ.ಎಸ್‌.ಭೀಮರಾಯ, ಪ್ರಾಂಶುಪಾಲ ಮಲ್ಲಿಕಾರ್ಜುನಆವಂಟಿ, ಶಿಕ್ಷಕ ಹಾಗೂ ಸಾಹಿತಿ ಪಂಚಾಕ್ಷರಯ್ಯಹಿರೇಮಠ ಅವರು ಕೇಳಿದ ಪ್ರಶ್ನೆಗಳಿಗೆ ಶಿವಣ್ಣಇಜೇರಿ ಅವರು ಸಮರ್ಪಕವಾಗಿ ಉತ್ತರಿಸಿದರು. ಈ ಸಂದರ್ಭದಲ್ಲಿ ಡಾ| ಗೋವಿಂದರಾಜ ಆಲ್ದಾಳ, ಕಲಾ ನಿಕೇತನ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಸಿನ್ನೂರ ಉಪಸ್ಥಿತರಿದ್ದರು. ಶಿವಪ್ರಸಾದ್‌ ಕರದಳ್ಳಿ ನಿರೂಪಿಸಿದರು. ಮಲ್ಲಿಕಾರ್ಜುನ ಸಜ್ಜನ್‌ ಸ್ವಾಗತಿಸಿದರು. ಮಹಾಂತೇಶ ಗಿಂಡಿ ವಂದಿಸಿದರು.

ಸಹಕಾರ ಸಂಘದ ವಾರ್ಷಿಕ ಸಭೆ  :

ಸುರಪುರ: ಶೇರುದಾರ ಸದಸ್ಯರು ಮತ್ತು ಸಾಲಗಾರರು ಸಹಕಾರಿ ಸಂಘಕ್ಕೆ ಶಕ್ತಿ. ಅವರು ತೆಗೆದುಕೊಂಡಿರುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಸಂಘಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ ಎಂದು ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ವಗ್ಗರ್‌ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಪಿಯು ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದಜೀವನಜ್ಯೋತಿ ಸಹಕಾರ ಸಂಘದಮೂರನೇ ವಾರ್ಷಿಕ ಮಹಾಸಭೆಯಲ್ಲಿಅವರು ಮಾತನಾಡಿ, ಕೆಲವೇ ಸದಸ್ಯರಸಹಕಾರದೊಂದಿಗೆ ಆರಂಭಿಸಿದ ಸಂಘ ಇಂದು 2,69,835 ಶೇರು ಬಂಡವಾಳಹೊಂದಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 1,74,950 ಆವರ್ತ ಠೇವಣಿಯೊಂದಿಗೆ ಪ್ರಸಕ್ತ ಸಾಲಿನಲ್ಲಿ 64,432 ನಿವ್ವಳ ಲಾಭ ಗಳಿಸಿದೆ. ಜನರ ವಿಶ್ವಾಸ ಗಳಿಸಿ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಸಾಗುವ ಮೂಲಕಬೃಹತ್ತಾಗಿ ಬೆಳೆಯುತ್ತಿರುವುದು ನೆಮ್ಮದಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಪನ್ಯಾಸಕ ವಿಜಯಕುಮಾರ ಬಣಗಾರ ಮತ್ತು ಕಾನೂನು ಸಲಹೆಗಾರ ಬಿ.ಕೆ. ದೇಸಾಯಿ ಮಾತನಾಡಿ, ಶ್ರಮಿಕರು ಮತ್ತು ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರಸ್ಥರಿಗೆಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಸಂಘತನ್ನ ಧ್ಯೇಯೋದ್ದೇಶದೊಂದಿಗೆ ಮುನ್ನಡೆಸಾಗುತ್ತಿರುವುದು ಸಂತಸ ತಂದಿದೆ. ಸಹಕಾರಿವಲಯದಲ್ಲಿ ಸಾಕಷ್ಟು ಸೌಲಭ್ಯಗಳಿಗೆ ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವೆಕಟೇಶ ಅಮ್ಮಾಪುರ ಮಾತನಾಡಿದರು. ನಿರ್ದೇಶಕ ಶಶಿಕುಮಾರ ಲಕ್ಕಿಮಾರಸಂಘದ ವಾರ್ಷಿಕ ವರದಿ ವಾಚನ ಮಾಡಿ ಅನುಮೋದನೆ ಪಡೆದರು. ನಿರ್ದೇಶಕರಾದಲಿಂಗಪ್ಪ ಹೂಗಾರ, ಮಲ್ಲಪ್ಪ ಕರೇಗಾರ, ಸುರೇಶ ಯಾದಗಿರಿ, ನಾಗಪ್ಪ ದೊಡ್ಮನಿ, ಶಿವರಾಜ ಜಯಶ್ರೀ ವೇದಿಕೆಯಲ್ಲಿದ್ದರು. ವಿಶ್ವರಾಧ್ಯ ಯಾದಗಿರಿ ಸ್ವಾಗತಿಸಿದರು. ದೇವಿಂದ್ರಪ್ಪ ದೇಶಪಾಂಡೆ ನಿರೂಪಿಸಿದರು. ಮಲ್ಲಪ್ಪ ಕರೇಗಾರ ವಂದಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadgir: ಬಸ್ ಪಲ್ಟಿ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadgir: ಬಸ್ ಅಪಘಾತ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

13-yadgiri

Yadgir: ಬೈಕ್‌ -ಬಸ್‌ ಭೀಕರ ಅಪಘಾತ‌; ಮೂವರು ಮಕ್ಕಳು ಸೇರಿ ಬೈಕ್‌ ನಲ್ಲಿದ್ದ ಐವರ ದುರ್ಮರಣ

Miscreants set fire to the idol of Goddess Mariyamma at Yadagiri

Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Yadagiri: Worm found in hostel food

Yadagiri: ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.