ಬೇಡಿಕೆ ಈಡೇರಿಕೆಗೆ ಆಗ್ರಹ
ಟಿ. ಬೊಮ್ನಳ್ಳಿ ಗ್ರಾಮದ ರೈತರಿಗೆ ಏತ ನೀರಾವರಿ ಕಲ್ಪಿಸಲು ಒತ್ತಾಯ
Team Udayavani, Jan 11, 2020, 3:33 PM IST
ಸುರಪುರ: ತಾಲೂಕಿನ ಟಿ. ಬೊಮ್ನಳ್ಳಿ ಗ್ರಾಮಕ್ಕೆ ಏತ ನೀರಾವರಿ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶೋಷಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರನ್ನು ಭೇಟಿ ಮಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ, ಗ್ರಾಮದ ಕೆರೆ ಸುಮಾರು 50 ಎಕರೆ ವಿಸ್ತಾರ ಇದೆ. ವರ್ಷ ಇಡೀ ನೀರಿನಿಂದ ತಂಬಿರುತ್ತದೆ. ಇತ್ತೀಚೆಗೆ ಕರೆ ಹೂಳು ಮತ್ತು ಗಿಡಗಂಟೆ ಬೆಳೆದು ವ್ಯರ್ಥವಾಗಿ ಹಾಳಾಗುತ್ತಿದೆ. ಇದನ್ನು ಸ್ವಚ್ಛಗೊಳಿಸಿ ಏತ ನೀರಾವರಿ ಕಲ್ಪಿಸುವುದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮದ ಪಕ್ಕದಲ್ಲಿಯೇ ಕಾಲುವೆ ಹಾದು ಹೋಗಿದೆ. ಆದರೆ ಕೆಲ ಜಮೀನುಗಳಿಗೆ ನೀರಾವರಿ ಇಲ್ಲ. ಕೆರೆಯನ್ನು ಏತ ನೀರಾವರಿಗೆ ಒಳಪಡಿಸದಲ್ಲಿ ನೀರಾವರಿ ವಂಚಿತ ರೈತರಿಗೆ ಹೆಚ್ಚಿನ ನೆರವಾಗಲಿದೆ. ಕಾರಣ ಸ್ಥಳ ಪರಿಶೀಲಸಿ ಏತ ನೀರಾವರಿ ಯೋಜನೆಗೆ ಒಳಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಇದೆ. ಕೆಲ ವಾರ್ಡ್ಗಳಿಗೆ ನೀರು ಸರಬರಾಜು ಆಗುವುದೇ ಇಲ್ಲ. ನೀರು ಶುದ್ಧೀಕರಣ ಮಾಡುತ್ತಿಲ್ಲ. ಶುದ್ಧೀಕರಣ ಯಂತ್ರಗಳು ಕೆಟ್ಟು ಹೋಗಿ ಸುಮಾರು ವರ್ಷ ಕಳೆದಿವೆ. ನಗರಸಭೆಯವರು ಕಲುಷಿತ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರೋಗ ಆವರಿಸುವ ಸಾಧ್ಯತೆ ಇದೆ. ಕಾರಣ ಕೂಡಲೇ ಈ ಸಮಸ್ಯೆ ನಿವಾರಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಂಚಿಕೆ ಕಾರ್ಯ ಸರಿಯಾಗಿ ಆಗಿಲ್ಲ. ಪಿಡಿಒಗಳು ತಮಗೆ ಇಷ್ಟ ಬಂದವರಿಗೆ ಮನೆ ಹಂಚಿಕೆ ಮಾಡಿ ಅರ್ಹ ಬಡವರಿಗೆ ವಂಚನೆ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ನಿಯಮಾನುಸಾರ ಪೌಷ್ಟಿಕ ಆಹಾರ
ವಿತರಿಸುತ್ತಿಲ್ಲ. ಬ್ಯಾಂಕ್ಗಳು ರೈತರಿಗೆ ಸೌಲಭ್ಯ ನೀಡುತ್ತಿಲ್ಲ, ಡಿಸಿಸಿ ಮತ್ತು ವಿಎಸ್ಎಸ್ ಸೊಸೈಯಿಟಿಗಳಲ್ಲಿ ಸಾಲ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ. ಈ ಎಲ್ಲಾ ಬೇಡಿಕೆಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಪಾಲ ಬಾಗಲಕೋಟೆ, ಬಸವರಾಜಗೌಡ ಯಂಕೋಬ ನಾಯಕ, ಭೀಮರಾಯ ಸಾಹು, ಪರಮಣ್ಣಗೌಡ ಪಾಟೀಲ, ಸಿದ್ದಪ್ಪ ಪೂಜಾರಿ, ಸಣ್ಣ ಬೀರಪ್ಪ, ಭೀಮರಾಯ ತಿಪನಟಗಿ, ದೇವಿಂದ್ರಪ್ಪ ನಾಯಕ, ಕೃಷ್ಣ ದೊರೆ, ದೇವಿಂದ್ರ ರತ್ತಾಳ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru Dasara ವೇದಿಕೆ ರಾಜಕೀಯಕ್ಕೆ ಸಲ್ಲ: ಛಲವಾದಿ ನಾರಾಯಣ ಸ್ವಾಮಿ ಕಿಡಿ
Yadgiri ನಗರಸಭೆ ಅಧ್ಯಕ್ಷರಾಗಿ ಕು.ಲಲಿತಾ ಆಯ್ಕೆ
ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ
Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ ಇದ್ದಾರೆ… ಸಚಿವ ಮಧು ಬಂಗಾರಪ್ಪ
Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.