![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 4, 2020, 8:49 AM IST
ಯಾದಗಿರಿ: ಜಿಲ್ಲೆಯಲ್ಲಿ ಜು.3ರಂದು 7 ವರ್ಷದ ಬಾಲಕ ಸೇರಿ ಒಟ್ಟು 14 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 970ಕ್ಕೆ ಏರಿಕೆಯಾಗಿದೆ.
ಹುಣಸಗಿ ತಾಲೂಕಿನ ಬ್ಯಾಲದಗಿಡ ತಾಂಡಾದ 90 ವರ್ಷದ ಪುರುಷ (ಪಿ-18392) ಅದೇ ತಾಂಡಾದ 19 ವರ್ಷದ ಯುವತಿ (ಪಿ-18393), ಯಾದಗಿರಿ ತಾಲೂಕಿನ ಅಚ್ಚೋಲಾ ಗ್ರಾಮದ 25 ವರ್ಷದ ಪುರುಷ (ಪಿ-18394), ಅದೇ ಗ್ರಾಮದ 22 ವರ್ಷದ ಮಹಿಳೆ (ಪಿ-18395), ಯಾದಗಿರಿ ತಾಲೂಕಿನ ಅಬ್ಬೆತುಮಕೂರ ಗ್ರಾಮದ 35 ವರ್ಷದ ಪುರುಷ (ಪಿ-18396), ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ 32 ವರ್ಷದ ಪುರುಷ (ಪಿ-18397), 28 ವರ್ಷದ ಮಹಿಳೆ (ಪಿ-18398) ಮತ್ತು ಶಹಾಪುರ ತಾಲೂಕಿನ ಕರಣಗಿ ಗ್ರಾಮದ 7 ವರ್ಷದ ಬಾಲಕ (ಪಿ-18399), ಅನಪುರ ಗ್ರಾಮದ 40 ವರ್ಷದ ಪುರುಷ (ಪಿ-18400), ಕರಣಗಿ ಗ್ರಾಮದ 60 ವರ್ಷದ ಪುರುಷ (ಪಿ-18401)ಸೇರಿದಂತೆ ಅಬ್ಬೆತುಮಕೂರ ಗ್ರಾಮದ 70 ವರ್ಷದ ಪುರುಷ (ಪಿ-18402), ಸುರಪುರ ತಾಲೂಕಿನ ದಿವಳಗುಡ್ಡದ 37 ವರ್ಷದ ಮಹಿಳೆ (ಪಿ-18403), 19 ವರ್ಷದ ಯುವಕ (ಪಿ-18404) ಸುರಪುರ ಬಸ್ ಡಿಪೋದ 44 ವರ್ಷದ ಪುರುಷ (ಪಿ-18405) ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಬ್ಯಾಲದಗಿಡ ತಾಂಡಾದ ವೃದ್ಧ ಮತ್ತು ಯುವತಿ ಪಿ-11265ರ ಸಂಪರ್ಕದ ಹಿನ್ನೆಲೆ ಹೊಂದಿದ್ದು, ದಿವಳಗುಡ್ಡದ ವ್ಯಕ್ತಿಗಳು 10659ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ಸುರಪುರ ಬಸ್ ಡಿಪೋದ ವ್ಯಕ್ತಿ 10660ರ ಸಂಪರ್ಕ ಹೊಂದಿದ್ದು, ಅಚ್ಚೋಲಾ ಮತ್ತು ಅಬ್ಬೆತುಮಕೂರ ಗ್ರಾಮದ ವ್ಯಕ್ತಿಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ 5 ಜನ ತೆಲಂಗಾಣ ರಾಜ್ಯದ ಹೈದ್ರಾಬಾದ್ ಹಾಗೂ ಗುಜರಾತ್ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಜಿಲ್ಲಾಡಳಿತ ಕೋರಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.