Karnataka By Poll 2024: ಟಿಕೆಟ್‌ ಘೋಷಣೆ ಮೊದಲೇ ರಂಗೇರಿದ ಶಿಗ್ಗಾವಿ ಕಣ

ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಂಗ್ರೆಸ್‌ ತಂತ್ರಕ್ಕೆ ಪ್ರತಿತಂತ್ರ ಹೂಡಲು ಮುಂದಾಗಿದೆ.

Team Udayavani, Oct 19, 2024, 5:06 PM IST

Karnataka By Poll 2024: ಟಿಕೆಟ್‌ ಘೋಷಣೆ ಮೊದಲೇ ರಂಗೇರಿದ ಶಿಗ್ಗಾವಿ ಕಣ

ಉದಯವಾಣಿ ಸಮಾಚಾರ
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಕ್ಷೇತ್ರದಲ್ಲಿ ಎರಡು ಪಕ್ಷಗಳ ತಂತ್ರ, ಪ್ರತಿತಂತ್ರಗಳ ಸದ್ದು ಜೋರಾಗಿದೆ. ಕ್ಷೇತ್ರದಲ್ಲಿ ಚುನಾವಣಾ ಕಣ ಟಿಕೆಟ್‌ ಘೋಷಣೆಗೂ ಮೊದಲೇ ರಂಗೇರುತ್ತಿದೆ.

ಶಿಗ್ಗಾವಿ ಕ್ಷೇತ್ರ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕ್ಷೇತ್ರದಲ್ಲಿ ಗೆಲುವು ಸಾಧಿ ಸುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪಕ್ಷದ ಬಲಾಬಲ ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಎರಡು ಪಕ್ಷಗಳ ಹೈಕಮಾಂಡ್‌ ಅಭ್ಯರ್ಥಿ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಳೆದು ತೂಗಿ ಅಭ್ಯರ್ಥಿ ಘೋಷಣೆಗೆ ಮುಂದಾಗಿದ್ದು ಕುತೂಹಲ ಮೂಡಿಸಿದೆ.

ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗು ತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ಕೈ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ರಣತ್ರಂತ ಹೆಣೆಯುತ್ತಿದ್ದರೆ, ಮೊತ್ತೊಂದೆಡೆ ಬಿಜೆಪಿಗೆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಹೀಗಾಗಿ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಂಗ್ರೆಸ್‌ ತಂತ್ರಕ್ಕೆ ಪ್ರತಿತಂತ್ರ ಹೂಡಲು ಮುಂದಾಗಿದೆ.

ಎರಡು ಪಕ್ಷಗಳಲ್ಲಿ ಟಿಕೆಟ್‌ ಘೋಷಣೆಯ ಆರಂಭದಲ್ಲಿಯೇ ಲೆಕ್ಕಾಚಾರ ಜೋರಾಗಿದ್ದು, ಮೊದಲು ಬಿಜೆಪಿ ಟಿಕೆಟ್‌ ಘೋಷಣೆ ಮಾಡುತ್ತೋ ಅಥವಾ ಕಾಂಗ್ರೆಸ್‌ ಘೋಷಣೆ ಮಾಡುತ್ತೋ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಯಾರಿಗೆ ಟಿಕೆಟ್‌ ಘೋಷಣೆ ಮಾಡುತ್ತೆ ಎಂಬುದನ್ನು ನೋಡಿಕೊಂಡು ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡುವ ಚಿಂತನೆ ನಡೆಸಿದೆ.

ಮತ್ತೊಂದೆಡೆ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ನೀಡುತ್ತೋ ಅದನ್ನು ಅವಲೋಕಿಸಿ ಬಿಜೆಪಿ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮೊದಲು ಯಾರು ಟಿಕೆಟ್‌ ಘೋಷಣೆ ಮಾಡ್ತಾರೆ ಎಂಬುದೂ ಕುತೂಹಲಕಾರಿಯಾಗಿದೆ.

ಕಗ್ಗಂಟಾದ ಟಿಕೆಟ್‌ ಹಂಚಿಕೆ: ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಮುಹೂರ್ತ ನಿಗದಿಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದರೂ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಟಿಕೆಟ್‌ ಹಂಚಿಕೆ ಕಗ್ಗಂಟಾಗಿದೆ. ಬಿಜೆಪಿ ಟಿಕೆಟ್‌ ಹಂಚಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
ಬೆಂಗಳೂರಿನಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ತೆಕ್ಕೆಯಲ್ಲಿರುವ ಶಿಗ್ಗಾವಿ ಕ್ಷೇತ್ರವನ್ನು ಗೆಲ್ಲುವ ಕುರಿತು ಹೆಚ್ಚು ಚರ್ಚೆ ನಡೆದಿದೆ.

ಈ ವೇಳೆ ಭರತ್‌ ಬೊಮ್ಮಾಯಿಗೆ ಟಿಕೆಟ್‌ ನೀಡುವ ಕುರಿತು ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಭರತ್‌ ಬೊಮ್ಮಾಯಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ಒಪ್ಪದಿದ್ದರೆ ಬಸವರಾಜ ಬೊಮ್ಮಾಯಿ ಅವರ ಆಪ್ತ ಚೆನ್ನು ಪಾಟೀಲರಿಗೆ ಟಿಕೆಟ್‌ ಕೊಡಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದ್ದು, ಇನ್ನುಳಿದಂತೆ ಸ್ಥಳೀಯ ಬಿಜೆಪಿ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶೋಭಾ ನಿಸ್ಸಿಮಗೌಡ್ರ, ಶಿವಾನಂದ ಮ್ಯಾಗೇರಿ, ಡಿ.ಎಸ್‌. ಮಾಳಗಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಲಾಬಿ ಜೋರು:
ಕಾಂಗ್ರೆಸ್‌ನಲ್ಲಿ ಸಹ ಟಿಕೆಟ್‌ಗಾಗಿ ಆಕಾಂಕ್ಷಿಗಳ ಲಾಬಿ ಜೋರಾಗಿದ್ದು, ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ
ಹೈಕಮಾಂಡ್‌ಗೆ ರವಾನಿಸಲಾಗಿದೆ. ಅ. 23ಕ್ಕೆ ಟಿಕೆಟ್‌ ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕೈ ಟಿಕೆಟ್‌ಗಾಗಿ ಮಾಜಿ
ಶಾಸಕ ಅಜ್ಜಂಫೀರ್‌ ಖಾದ್ರಿ, ಯಾಸೀರ್‌ ಖಾನ್‌ ಪಠಾಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್‌.ಶಂಕರ್‌ ಪ್ರಯತ್ನ ನಡೆಸಿದ್ದಾರೆ.

■ ವೀರೇಶ ಮಡ್ಲೂರ

ಟಾಪ್ ನ್ಯೂಸ್

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

University Status: ರಾಜ್ಯದ ಒಂಬತ್ತು ವಿ.ವಿ.ಗಳ ಬಾಗಿಲು ಬಂದ್…ಇದಕ್ಕೆ ಹೊಣೆಗಾರರು ಯಾರು?

University Status: ರಾಜ್ಯದ ಒಂಬತ್ತು ವಿ.ವಿ.ಗಳ ಬಾಗಿಲು ಬಂದ್…ಇದಕ್ಕೆ ಹೊಣೆಗಾರರು ಯಾರು?

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

 Delhi Results:27 ವರ್ಷದ ಬಳಿಕ ಬಿಜೆಪಿಗೆ ದೆಹಲಿ ಗದ್ದುಗೆ-ಐವರು CM ಹುದ್ದೆ ರೇಸ್‌ ನಲ್ಲಿ…

Delhi Results:27 ವರ್ಷದ ಬಳಿಕ ದೆಹಲಿಯಲ್ಲಿ ಅರಳಿದ ಕಮಲ-ಐವರು CM ಹುದ್ದೆ ರೇಸ್‌ ನಲ್ಲಿ…

Delhi Results: ದೆಹಲಿ ಗೆಲುವಿನೊಂದಿಗೆ ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ-AAP ಕನಸು ಭಗ್ನ!

Delhi Results: ದೆಹಲಿ ಗೆಲುವಿನೊಂದಿಗೆ ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ-AAP ಕನಸು ಭಗ್ನ!

Illegal Immigrants: 15 ವರ್ಷಗಳಿಂದ ಅಮೆರಿಕದಿಂದ ಗಡಿಪಾರಾದ ಭಾರತೀಯರ ಸಂಖ್ಯೆ ಎಷ್ಟು?

Illegal Immigrants: 15 ವರ್ಷಗಳಿಂದ ಅಮೆರಿಕದಿಂದ ಗಡಿಪಾರಾದ ಭಾರತೀಯರ ಸಂಖ್ಯೆ ಎಷ್ಟು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.