Cancer Symptoms: ಮಹಿಳೆಯರಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಕ್ಯಾನ್ಸರ್‌ ಲಕ್ಷಣಗಳು

ಗಮನಿಸಲೇಬೇಕಾದ ಪ್ರಮುಖ ಎಚ್ಚರಿಕೆಯ ಸಂಕೇತಗಳು

Team Udayavani, Jul 28, 2024, 3:11 PM IST

10-women-cancer

ಮಹಿಳೆಯರಲ್ಲಿ ಕ್ಯಾನ್ಸರ್‌ ಲಕ್ಷಣಗಳು ವಿಭಿನ್ನವಾಗಿರಬಹುದಾಗಿದ್ದು, ಯಾವ ಕ್ಯಾನ್ಸರ್‌ ಎಂಬುದನ್ನು ಆಧರಿಸಿಯೂ ಬದಲಾಗಬಹುದಾಗಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಬಾಧಿಸುವ ವಿವಿಧ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.

ಸ್ತನ ಕ್ಯಾನ್ಸರ್‌

ಸ್ತನದಲ್ಲಿ ಅಥವಾ ಕಂಕುಳಲ್ಲಿ ಗಂಟುಗಳು ಅಥವಾ ದಪ್ಪಗಾಗುವುದು

ಸ್ತನದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆ

ಸ್ತನದ ತೊಟ್ಟುಗಳಿಂದ ಎದೆಹಾಲು ಅಲ್ಲದ ಸ್ರಾವ; ವಿಶೇಷವಾಗಿ ರಕ್ತಸಹಿತವಾಗಿ ರುವುದು

ಜೋತು ಬೀಳುವುದು, ಕೆಂಪಗಾಗುವುದು ಅಥವಾ

ಅಂಡಾಶಯದ ಕ್ಯಾನ್ಸರ್‌

ಹೊಟ್ಟೆ ಉಬ್ಬರ ಅಥವಾ ಊತ

ಆಹಾರ ಸೇವಿಸುವಾಗ ಬೇಗನೆ ಹೊಟ್ಟೆ ತುಂಬಿದಂತಾಗುವುದು

ವಸ್ತಿ ಕುಹರ (ಪೆಲ್ವಿಕ್‌) ಭಾಗದಲ್ಲಿ ಕಿರಿಕಿರಿ ಅಥವಾ ನೋವು

ಮಲಬದ್ಧತೆಯಂತಹ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ

ಪದೇಪದೆ ಮೂತ್ರಶಂಕೆ

ಗರ್ಭಕಂಠದ ಕ್ಯಾನ್ಸರ್‌

ಯೋನಿಯ ಮೂಲಕ ಅಸಹಜ ರಕ್ತಸ್ರಾವ (ಋತುಚಕ್ರದ ನಡುವಿನ ದಿನಗಳಲ್ಲಿ, ಲೈಂಗಿಕ ಸಂಪರ್ಕದ ಬಳಿಕ ಅಥವಾ ಋತುಚಕ್ರಬಂಧದ ಬಳಿಕ) ಯೋನಿಯ ಮೂಲಕ ಅಸಹಜ ಸ್ರಾವ

ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ವಸ್ತಿಕುಹರ (ಪೆಲ್ವಿಕ್‌) ದಲ್ಲಿ ನೋವು

ಎಂಡೊಮೆಟ್ರಿಯಲ್‌ (ಯುಟೆರೈನ್‌) ಕ್ಯಾನ್ಸರ್‌

ಯೋನಿಯ ಮೂಲಕ ಅಸಹಜ ರಕ್ತಸ್ರಾವ ಅಥವಾ ಸ್ರಾವ

ವಸ್ತಿಕುಹರ ಭಾಗದಲ್ಲಿ ನೋವು

ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು

ಕೊಲೊರೆಕ್ಟಲ್‌ ಕ್ಯಾನ್ಸರ್‌

ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ (ಭೇದಿ, ಮಲಬದ್ಧತೆ ಅಥವಾ ಮಲ ವಿಸರ್ಜನೆ ಕಡಿಮೆಯಾಗುವುದು)

ಮಲದ ಜತೆಗೆ ರಕ್ತ

ಹೊಟ್ಟೆಯಲ್ಲಿ ತೊಂದರೆ (ಹಿಡಿದುಕೊಳ್ಳುವುದು, ವಾಯು ಅಥವಾ ನೋವು) ವಿವರಿಸಲಾಗದ ತೂಕ ನಷ್ಟ

ದಣಿವು

ಶ್ವಾಸಕೋಶದ ಕ್ಯಾನ್ಸರ್‌

ಸತತ ಕೆಮ್ಮು

ಕಫ‌ದ ಜತೆಗೆ ರಕ್ತ

ಉಸಿರು ಹಿಡಿದುಕೊಳ್ಳುವುದು

ಎದೆನೋವು

ಧ್ವನಿ ದೊರಗಾಗುವುದು

ತೂಕ ನಷ್ಟ ಮತ್ತು ಹಸಿವು ನಷ್ಟ

ಚರ್ಮದ ಕ್ಯಾನ್ಸರ್‌

ಚರ್ಮದಲ್ಲಿ ಹೊಸ ಬೆಳವಣಿಗೆಗಳು ಅಥವಾ ಗುಣವಾಗದ ಹುಣ್ಣುಗಳು

ಈಗಾಗಲೇ ಇರುವ ಮಚ್ಚೆಗಳಲ್ಲಿ ಬದಲಾವಣೆ (ಅಸಮ್ಮಿತಿ, ಅಂಚುಗಳ ಅಸಹಜತೆ, ಬಣ್ಣ ಬದಲಾವಣೆ, ವ್ಯಾಸ ಹೆಚ್ಚಳ, ಆಕಾರ/ ಗಾತ್ರದಲ್ಲಿ ಬದಲಾವಣೆ)

ಸಾಮಾನ್ಯ ಲಕ್ಷಣಗಳು

(ಹಲವು ಕ್ಯಾನ್ಸರ್‌ಗಳಿಗೆ ಇವು ಸಾಮಾನ್ಯ ಲಕ್ಷಣಗಳು)

ವಿವರಿಸಲಾಗದ ತೂಕ ನಷ್ಟ

ಸತತ ದಣಿವು

ವಿವರಿಸಲಾಗದ ನೋವು

ಸತತ ಜ್ವರ ಅಥವಾ ರಾತ್ರಿ ಬೆವರುವುದು

ಏನು ಮಾಡಬೇಕು?

ನಿಯಮಿತ ತಪಾಸಣೆ: ನಿಯಮಿತವಾಗಿ ಮ್ಯಾಮೊಗ್ರಾಮ್‌, ಪ್ಯಾಪ್‌ ಸ್ಮಿಯರ್‌ ಮತ್ತು ಇತರ ಪರೀಕ್ಷೆಗಳ ನಡೆಸುವುದರಿಂದ ಕ್ಯಾನ್ಸರ್‌ ಇದ್ದರೆ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದು ಸಾಧ್ಯವಾಗುತ್ತದೆ.

ಆರೋಗ್ಯಯುತ ಜೀವನಶೈಲಿ: ಆರೋಗ್ಯಯುತ ಆಹಾರ ಕ್ರಮ, ನಿಯಮಿತ ವ್ಯಾಯಾಮ, ಧೂಮಪಾನ ವರ್ಜಿಸುವುದು, ಮದ್ಯಪಾನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಇತ್ಯಾದಿಗಳ ಮೂಲಕ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ಶೀಘ್ರ ವೈದ್ಯಕೀಯ ಆರೈಕೆ: ಸತತವಾದ ಅಥವಾ ಅಸಹಜವಾದ ಯಾವುದೇ ಲಕ್ಷಣಗಳು ಕಂಡುಬಂದರೆ ಕೂಡಲೇ ಆಂಕಾಲಜಿಸ್ಟ್‌ರನ್ನು ಸಂಪರ್ಕಿಸಿ ಸಮಾಲೋಚನೆ, ತಪಾಸಣೆ ಮಾಡಿಸಿಕೊಳ್ಳಬೇಕು.

ಮಹಿಳೆಯರಲ್ಲಿ ಉಂಟಾಗಬಹುದಾದ ಕ್ಯಾನ್ಸರ್‌ ಗಳಿಗೆ ಚಿಕಿತ್ಸೆ ಮತ್ತು ಫ‌ಲಿತಾಂಶ ಚೆನ್ನಾಗಿರಬೇಕಾದರೆ ಶೀಘ್ರ ಪತ್ತೆ ಮತ್ತು ಆದಷ್ಟು ಬೇಗನೆ ಚಿಕಿತ್ಸೆಯ ಆರಂಭ ನಿರ್ಣಾಯಕವಾಗಿರುತ್ತವೆ.

-ಡಾ| ಹರೀಶ್‌ ಇ.

ಸರ್ಜಿಕಲ್‌ ಆಂಕಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.