ಅಧಿಕ ‌ರಕ್ತದೊತ್ತಡ ‌ಯೋಗದಲ್ಲಿದೆ ಪರಿಹಾರ

ದಣಿವು, ಸುಸ್ತು ಕಡಿಮೆಯಾಗುತ್ತದೆ. ಮುಟ್ಟು ನಿಂತ ನಂತರ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಇದು ಒಳ್ಳೆಯದು.

Team Udayavani, Dec 14, 2020, 12:26 PM IST

ಅಧಿಕ ‌ರಕ್ತದೊತ್ತಡ ‌ಯೋಗದಲ್ಲಿದೆ ಪರಿಹಾರ

ಅಧಿಕ ರಕ್ತದೊತ್ತಡ ಎನ್ನುವುದು ಆಧುನಿಕ ಜಗತ್ತಿನಲ್ಲಿ ಜನರಿಗೆ ಬಳುವಳಿಯಾಗಿ ಬಂದಿರುವಂತಹ ಕಾಯಿಲೆ. ಅತಿಯಾದ ಒತ್ತಡ, ಅನಾರೋಗ್ಯಕರ ಆಹಾರ ಹಾಗೂ ಜೀವನಶೈಲಿಯಿಂದಾಗಿ ಬರುವ ಆರೋಗ್ಯ ಸಮಸ್ಯೆ ಇದು. ಅಧಿಕ ರಕ್ತದೊತ್ತಡದೊಂದಿಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಇದನ್ನು ನಿಯಂತ್ರಣದಲ್ಲಿರಿಸಲು ಹೆಚ್ಚಿನವರು ಹರಸಾಹಸ ಪಡುತ್ತಾರೆ. ಔಷಧ, ಆಹಾರ ಕ್ರಮ, ಜೀವನ ಶೈಲಿಯಲ್ಲಿ ಪರಿವರ್ತನೆ ಮಾಡಿಕೊಂಡರೆ ಮಾತ್ರ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು.ಇದಕ್ಕೆ ಯೋಗದಲ್ಲೂ ದಾರಿಯಿದೆ.

ಉತ್ಥಾನಾಸನ
ಮುಂದೆ ಬಾಗಿ ನಿಲ್ಲುವ ಈ ಭಂಗಿಯಿಂದ ರಕದೊತ್ತಡ ಸಮಸ್ಯೆ ನಿವಾರಣೆಯಾಗಲಿದ್ದು, ಇದರೊಂದಿಗೆ ದಣಿವು, ಸುಸ್ತು ಕಡಿಮೆಯಾಗುತ್ತದೆ. ಮುಟ್ಟು ನಿಂತ ನಂತರ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಇದು ಒಳ್ಳೆಯದು.

ಮೊದಲ ಹಂತ: ಒಂದು ಕುರ್ಚಿ ಇಟ್ಟುಕೊಂಡು ಅದರ ಮುಂದೆ ಕಾಲುಗಳು ಹಾಗೂ ತೊಡೆ ಅಗಲವಾಗಿ ಇಟ್ಟುಕೊಂಡು ನೇರವಾಗಿ ನಿಲ್ಲಿ. ಕೈಗಳು ದೇಹದ ಎರಡು ಭಾಗದಲ್ಲಿ ಇರಲಿ.

ಎರಡನೇ ಹಂತ: ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ.

ಮೂರನೇ ಹಂತ: ಉಸಿರನ್ನು ಬಿಡಿ ಮತ್ತು ಮುಂದಕ್ಕೆ ಬಾಗಿಕೊಂಡು ಕೈಗಳನ್ನು ಮಡಚಿ ಹಾಗೆ ಕುರ್ಚಿಯಲ್ಲಿಡಿ ಮತ್ತು ಹಣೆಯನ್ನು ಕೈಗಳ ಮೇಲಿಡಿ.

ನಾಲ್ಕನೇ ಹಂತ: 10-15 ಉಸಿರಿನ ತನಕ ನೀವು ಇದೇ ಭಂಗಿಯಲ್ಲಿ ಇರಿ. ಮೂಳೆ ತುದಿಯನ್ನು ಹಾಗೆ ಒತ್ತಿ ಮತ್ತು ಹೊಟ್ಟೆಯ ಭಾಗದ ಸ್ನಾಯಗಳನ್ನು ಸಂಕುಚಿತಗೊಳಿಸಿ ನಿಧಾನವಾಗಿ ಬಿಡುಗಡೆ ಮಾಡಿ.

ಅಧೋಮುಖ ಶ್ವಾನಾಸನ
ನಾಯಿಯ ಭಂಗಿಯಲ್ಲಿ ಕೆಳಮುಖವಾಗಿ ಮಾಡುವ ಈ ಆಸನ ತಲೆಗೆ ಹೆಚ್ಚಿನ ರಕ್ತಸಂಚಾರ ನೀಡುತ್ತದೆ,ಇದು ಸೈನಸ್‌ ಮತ್ತು ಸಾಮಾನ್ಯ ನೆಗಡಿ ಹೋಗಲಾಡಿಸಲು ಸಹಾಯಕ.ಮಾನಸಿಕವಾಗಿ ಬಳಲಿದವರಿಗೆ, ನಿದ್ರಾಹೀನತೆ, ಖಿನ್ನತೆ ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.

ಮೊದಲ ಹಂತ: ಪಾದಗಳು ಹಾಗೂ ಕೈಗಳನ್ನು ಅಗಲವಾಗಿಸಿಕೊಂಡು ಅಂಗೈ ಹಾಗೂ ಪಾದಗಳನ್ನು ನೆಲದ ಮೇಲಿಡಿ.

ಎರಡನೇ ಹಂತ:
ಉಸಿರನ್ನು ಎಳೆದುಕೊಳ್ಳಿ ಮತ್ತು ಇದೇ ವೇಳೆ ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತಿ ಹಾಗೂ ಮೊಣಕೈ ಹಾಗೂ ಮೊಣಕಾಲುಗಳು ವಿಆಕಾರಕ್ಕೆ ಬರಲಿ.

ಮೂರನೇ ಹಂತ: ಕೈಗಳನ್ನು ನೆಲಕ್ಕೆ ಹಾಗೆ ಒತ್ತಿ ಮತ್ತು ಕುತ್ತಿ ನೇರವಾಗಿಸಿ ಮತ್ತು ತಲೆದಿಂಬಿನ ಮೇಲೆ ತಲೆಗೆ ವಿಶ್ರಾಂತಿ ನೀಡಿ.

ನಾಲ್ಕನೇ ಹಂತ: ಕೈಗಳಿಂದ ಕಿವಿಗಳನ್ನು ಸ್ಪರ್ಶಿಸಿ, ನಾಭಿಯತ್ತ ದೃಷ್ಟಿಯಿಟ್ಟು ಉಸಿರಾಡಿ.

ಐದನೇ ಹಂತ: 15-30 ಸೆಕೆಂಡು ಕಾಲ ಹೀಗೆ ಇರಿ. ಇದರ ಬಳಿಕ ಮೊಣಕಾಲುಗಳನ್ನು ಮಡಚಿ ಮತ್ತು ಟೇಬಲ್‌ ಭಂಗಿಗೆ ಬನ್ನಿ.

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Mangaluru-VV

Research: ಮಂಗಳೂರು ವಿಶ್ವವಿದ್ಯಾನಿಲಯ “ಪೇಟೆಂಟ್‌’ ಮಹತ್ವದ ಮೈಲುಗಲ್ಲು

Islamabad: ಪಾಕ್‌ನ ಇಬ್ಬಂದಿತನಕ್ಕೆ ಕಿಡಿ: ಜೈಶಂಕರ್‌ ನಡೆ ಶ್ಲಾಘನೀಯ

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

de

Kundapura: ಲಾರಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಮರಣ ಹೊಂದಿದ ಚಾಲಕ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

17

Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.