ತೆಲಂಗಾಣ ಕಣ: ಪ್ರತಿಪಕ್ಷಗಳ‌‌ ಮನ ಭಣಭಣ 


Team Udayavani, Mar 18, 2019, 12:30 AM IST

s-28.jpg

ಭಾರತದ ನವ ರಾಜ್ಯ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಗಳು ಏಪ್ರಿಲ್‌ 11ರಂದು ನಡೆಯಲಿವೆ.  ಒಂದೇ ಹಂತದಲ್ಲಿ ಈ ಚುನಾವಣೆಗಳು ನಡೆಯಲಿದ್ದು, ಕಳೆದ ವರ್ಷವಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಕೆ. ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಪಕ್ಷವೇ ಈ ಬಾರಿಯೂ ಮಿಂಚಲಿದೆಯೇ ಅಥವಾ ಅದರ ಲೆಕ್ಕಾಚಾರವನ್ನು ಉಲ್ಟಾ ಮಾಡಲು ಎದುರಾಳಿ ಪಕ್ಷಗಳಿಗೆ ಸಾಧ್ಯವಾಗಲಿದೆಯೇ? 

ಲೋಕಸಭೆಗೆ 17 ಪ್ರತಿನಿಧಿಗಳನ್ನು ಕಳುಹಿಸುವ ತೆಲಂಗಾಣ ಪ್ರತ್ಯೇಕ ರಾಜ್ಯದ ಮಾನ್ಯತೆ ಪಡೆದದ್ದು 2014ರ ಜೂನ್‌ 2ರಲ್ಲಿ. ಅಂದರೆ ಆ ವರ್ಷದ ಲೋಕಸಭಾ ಚುನಾವಣೆಗಳು ಮುಗಿದ ನಂತರದಲ್ಲಿ. ಆಗ ತೆಲಂಗಾಣ ಅವಿಭಜಿತ ಆಂಧ್ರಪ್ರದೇಶದ ಭಾಗವಾಗಿದ್ದ ಕಾರಣ, ಪ್ರತ್ಯೇಕ ಲೋಕಸಭಾ ಚುನಾವಣೆ ಯೇನೂ ನಡೆದಿರಲಿಲ್ಲ. ಆದರೂ ಪ್ರಸಕ್ತ ತೆಲಂಗಾಣ ರಾಜ್ಯದ ಭಾಗವಾಗಿರುವ 17 ಕ್ಷೇತ್ರಗಳಲ್ಲಿ ಅಂದು ಕೆಸಿಆರ್‌ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು! ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿ 2 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ 2, ವೈಎಸ್‌ಆರ್‌ ಕಾಂಗ್ರೆಸ್‌ 1 ಸ್ಥಾನ ಪಡೆದಿತ್ತು. 

ವಿಧಾನಸಭಾ ಫ‌ಲಿತಾಂಶ ದಿಕ್ಸೂಚಿಯೇ?
ಕಳೆದ ಡಿಸೆಂಬರ್‌ ತಿಂಗಳಲ್ಲಿ  ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು. ಚಂದ್ರಶೇಖರ್‌ರಾವ್‌ ನೇತೃತ್ವದಲ್ಲಿ ಟಿಆರ್‌ಎಸ್‌ 119ರಲ್ಲಿ 88 ಸ್ಥಾನಗಳಲ್ಲಿ ಗೆದ್ದಿತ್ತು. ಅವರ ಪಕ್ಷ ಒಟ್ಟು ಮತಗಳಲ್ಲಿ 46.9 ಪ್ರತಿಶತ ಪಾಲು ಪಡೆದಿದ್ದರೆ, ಕಾಂಗ್ರೆಸ್‌ 28.4 ಪ್ರತಿಶತ ಮತಪಾಲು ಪಡೆದಿತ್ತು. ಬಿಜೆಪಿಗೆ ದಕ್ಕಿದ್ದು ಕೇವಲ ಒಂದು ಸೀಟು.  ವಿಧಾನಸಭಾ ಚುನಾವಣೆಗಳು ಮುಗಿದು ಕೆಲವೇ ತಿಂಗಳುಗಳಾಗಿವೆಯಾದ್ದರಿಂದ ನೆಲಮಟ್ಟದಲ್ಲಿ ಈಗಲೂ ಕೆಸಿಆರ್‌ ಪರ ಒಲವಿರುವುದು ಕಾಣಿಸುತ್ತಿದೆ. 

ಪಕ್ಷಗಳ ಸ್ಥಿತಿ ಹೇಗಿದೆ?
ಈಗಲೂ ತೆಲಂಗಾಣದಲ್ಲಿ ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ ಪಕ್ಷದ್ದೇ ಅಬ್ಬರವಿದೆ. ಕಾಂಗ್ರೆಸ್‌ ದುರ್ಬಲವಾಗಿದ್ದರೆ, ಭಾರತೀಯ ಜನತಾ ಪಾರ್ಟಿಗೆ ತೆಲಂಗಾಣದಲ್ಲಿ ಅಸ್ತಿತ್ವವೇ ಇಲ್ಲ. ತೆಲಂಗಾಣ ವಾಸಿಗರಿಗೆ ಈಗಲೂ ರಾಜ್ಯವಿಭಜನೆಯ ವಿಷಯದಲ್ಲಿ ಎನ್‌. ಚಂದ್ರಬಾಬು ನಾಯ್ಡು  ನಡೆದುಕೊಂಡ ರೀತಿಯ ಬಗ್ಗೆ ಸಿಟ್ಟಿದೆಯಾದ್ದರಿಂದ, ಅವರು ತೆಲುಗು ದೇಶಂ ಪಕ್ಷವನ್ನು(ಟಿಡಿಪಿ) ಹೊರಗಿನ ಪಕ್ಷ ಎಂದೇ ಭಾವಿಸುತ್ತಾರೆ. ಚಂದ್ರಶೇಖರ್‌ ರಾವ್‌ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅಸಾದುದ್ದೀನ್‌ ಓವೈಸಿಯವರ ಎಂಐಎಂಗೆ ತೆಲಂಗಾಣದಲ್ಲಿ ತುಸು ಮಟ್ಟಿಗೆ ನೆಲೆಯಿದೆ. 

ಸಮೀಕ್ಷೆಗಳೇನನ್ನುತ್ತವೆ?
ಕೆಲ ತಿಂಗಳ ಹಿಂದೆ ಹೊರಬಿದ್ದ ರಿಪಬ್ಲಿಕ್‌-ಸಿ ಓಟರ್‌ ಸಮೀಕ್ಷೆ ಕೂಡ ಇದೇ ಮಾತನ್ನೇ ಹೇಳಿತ್ತು. ಅದರ ಪ್ರಕಾರ ಈ ಬಾರಿ ಟಿಆರ್‌ಎಸ್‌17ರಲ್ಲಿ 16 ಸ್ಥಾನಗಳಲ್ಲಿ ಗೆಲ್ಲಲಿದೆ. ಅಲ್ಲದೆ ಆಲ್‌-ಇಂಡಿಯಾ ಮಜಿಸ್‌-ಇತ್ತೆಹಾದುಲ್‌ ಮುಸ್ಲಿಮೀನ್‌(ಎಂಐಎಂ)ನ ಮುಖ್ಯಸ್ಥ, ಹೈದ್ರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇನ್ನು ಮತ ಹಂಚಿಕೆ ಪ್ರಮಾಣದ ವಿಚಾರಕ್ಕೆ ಬಂದರೆ, ಟಿಆರ್‌ಎಸ್‌ 42.4 ಪ್ರತಿಶತ ಮತಗಳನ್ನು, ಯುಪಿಎ-29 ಪ್ರತಿಶತ ಮತಗಳನ್ನು, ಎನ್‌ಡಿಎ 12.7 ಪ್ರತಿಶತ ಮತ್ತು ಎಂಐಎಂ 7.7 ಪ್ರತಿಶತ ಮತ ಪಡೆಯಲಿದೆ ಎನ್ನುವ ಅಂದಾಜಿದೆ. ಮತ ಪ್ರಮಾಣದಲ್ಲಿ ಹಿಂದೆ ಬಿದ್ದರೂ ಎಂಐಎಂ  ಹೈದ್ರಾಬಾದ್‌ನಲ್ಲಿ ತನ್ನ ಸ್ಥಾನವನ್ನಂತೂ ಉಳಿಸಿಕೊಳ್ಳಲಿದೆ(ಕೆಸಿಆರ್‌ ದೋಸ್ತಿ ಕಾರಣದಿಂದ ಬಿಟ್ಟುಕೊಡಲಿದ್ದಾರೆ) ಎಂದಿತ್ತು ಸಿ ಓಟರ್‌ ಸಮೀಕ್ಷೆ. 

ಆದರೆ ಈಗಲೂ ತೆಲಂಗಾಣದಲ್ಲಿ ಇದೇ ಅಲೆ ಇದೆಯೋ ಅಥವಾ ಕಳೆದ ತಿಂಗಳಲ್ಲಿ ದೇಶಾದ್ಯಂತ ಆಗಿರುವ ಬದಲಾವಣೆ (ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ) ತೆಲಂಗಾಣದ ಚಹರೆಯನ್ನು ಬದಲಿಸಲಿದೆಯೋ? ಪರಿಣತರ ಪ್ರಕಾರವಂತೂ ಮೋದಿ ಅಲೆಯಿಂದ ಚಂದ್ರಶೇಖರ್‌ ರಾವ್‌ರಿಗಂತೂ ಯಾವುದೇ ತೊಂದರೆ ಆಗುವುದಿಲ್ಲ.  ಒಂದು ವೇಳೆ ಈ ಮಾತು ನಿಜವಾದರೆ ನಿಸ್ಸಂಶಯವಾಗಿಯೂ, ಈ ಚುನಾವಣೆ ಕೆಸಿಆರ್‌ ಅವರಿಗೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಸೃಷ್ಟಿಸಿಕೊಳ್ಳಲು ಸಹಾಯ ಮಾಡಲಿದೆ. ಹಾಗೆಂದು ಅವರ ಫೆಡರಲ್‌ ಫ್ರಂಟ್‌ ಪರಿಕಲ್ಪನೆಗೇನೂ ಇದರಿಂದ ಭಾರೀ ಲಾಭವೇನೂ ಆಗುವುದಿಲ್ಲ. 

ತೆಲಂಗಾಣ ರಾಷ್ಟ್ರೀಯ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರ ಪುತ್ರ ಕೆ.ಟಿ. ರಾಮಾರಾವ್‌ ತಮ್ಮ ಪಕ್ಷಕ್ಕೆ ಗೆಲುವಿನ ಹಾದಿ ಸುಗಮಗೊಳಿಸಲು ಪರಿಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ಅವರ ಪಕ್ಷ ಖಮ್ಮಂನಲ್ಲಿ ತುಸು ದುರ್ಬಲವಾದಂತೆ ಕಾಣಿಸುತ್ತಿರುವುದರಿಂದ, ಅವರು ಆ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದ್ದಾರೆ. 15-16 ಸ್ಥಾನಗಳಲ್ಲಾದರೂ ನಾವು ಗೆಲ್ಲುತ್ತೇವೆ ಎನ್ನುವುದು ಅವರ ಭರವಸೆ.

ಚುನಾವಣಾ ವಿಷಯಗಳೇನಿವೆ?
ಉದ್ಯೋಗದ ಕೊರತೆ(ಕೆಸಿಆರ್‌ ಕೇಂದ್ರವನ್ನು ದೂಷಿಸುತ್ತಾರೆ), ಮತ್ತು ಅದಕ್ಕಿಂತಲೂ ಹೆಚ್ಚಾಗಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟು ತೆಲಂಗಾಣದ ಪ್ರಮುಖ ಸಮಸ್ಯೆ. ನಿತ್ಯವೂ ಹೆಚ್ಚುತ್ತಿರುವ ರೈತರ ಆತ್ಮಹತ್ಯಾ ಪ್ರಮಾಣದಿಂದ ಬೆಚ್ಚಿರುವ ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ರೈತ ಬಂಧುವಿನಂಥ ಸ್ಕೀಂಗಳನ್ನು ತಂದಿದೆೆ. ಆದರೂ ರೈತರ ಸಮಸ್ಯೆ ಪರಿಹಾರವಾಗಿಲ್ಲ. ಇದೇ ಕಾರಣಕ್ಕಾಗಿಯೇ ಈಗ ಪ್ರತಿಪಕ್ಷಗಳೆಲ್ಲ ಕೃಷಿ ಸಮಸ್ಯೆಯನ್ನು ಎದುರಿಟ್ಟುಕೊಂಡೇ ಕೆಸಿಆರ್‌ ಅವರ ಮೇಲೆ ದಾಳಿ ಮಾಡುತ್ತಿವೆ.

ಪ್ರಮುಖ ಕ್ಷೇತ್ರಗಳು
ಚೇವೆಲ್ಲ, ಖಮ್ಮಂ, ನಲಗೊಂಡ, ಕರೀಂನಗರ್‌, ಹೈದ್ರಾಬಾದ್‌, ವರಂಗಲ್‌ ಮತ್ತು ಸಿಕಂದ್ರಾಬಾದ್‌ ಪ್ರಮುಖ ಕ್ಷೇತ್ರಗಳು. ಕರೀಂನಗರ್‌ ಕ್ಷೇತ್ರವನ್ನು ಕೆಸಿಆರ್‌ “ಲಕ್ಕಿ’ ಎಂದು ಭಾವಿಸುತ್ತಾರೆ. ಅವರು ಸಾಮಾನ್ಯವಾಗಿ ಪ್ರಚಾರ ಕಾರ್ಯಗಳನ್ನೆಲ್ಲ ಅಲ್ಲಿಂದಲೇ ಆರಂಭಿಸುತ್ತಾರೆ. 

ಲೋಕಸಭಾ ಸ್ಥಾನಗಳು 17
ಟಿಆರ್‌ಎಸ್‌ 11
ಇತರೆ 06

ಕಾಂಗ್ರೆಸ್‌ನ ಕೆಲವರು ಎಎಪಿ ಜೊತೆಗೆ ಮೈತ್ರಿ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಪ್ರತಿಕಾರವಾಗಿ ಎಎಪಿ ಹುಟ್ಟಿತ್ತು. ಇಂದು ಕಾಂಗ್ರೆಸ್ಸಿಗೆ ಎಎಪಿ ಮಂಡಿಯೂರುತ್ತಿದೆ.
ಅರುಣ್‌ ಜೇಟ್ಲಿ, ವಿತ್ತ ಸಚಿವ

ನಮಗೆ ದೇಶವೇ ಸರ್ವೋತ್ಕೃಷ್ಟ. ಆಗ ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದೆವು. ಈಗ ಮೋದಿ, ಶಾರಿಂದ ದೇಶಕ್ಕೆ ಆಪತ್ತು ಇದೆ. ಅವರ ವಿರುದ್ಧದ ಹೋರಾಟದಲ್ಲಿ ನೀವೂ ಬಂದು ಕೈಜೋಡಿಸಿ.
ಅರವಿಂದ ಕೇಜ್ರಿವಾಲ್‌, ದೆಹಲಿ ಸಿಎಂ

14ಲಕ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಂತರ ಮತದಾರರ ಸಂಖ್ಯೆ ಇಷ್ಟು ಅಧಿಕವಾಗಿದೆ. 

ಈ ಬಾರಿ
ಪ್ರಶಾಂತ್‌ ಕಿಶೋರ್‌
ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಈಗ ಜೆಡಿಯುನ ಭಾಗವಾಗಿದ್ದಾರೆ. ಆದರೆ ಕೆಲ ದಿನಗಳಿಂದ ನಿತೀಶ್‌ರೊಂದಿಗೆ ಅವರ ಹಗ್ಗಜಗ್ಗಾಟ ಆರಂಭವಾಗಿದೆ ಎನ್ನಲಾಗುತ್ತಿದೆ. ಲೋಕಸಭೆಯಲ್ಲಿ ತನ್ನ ಶಕ್ತಿ ಹಿಗ್ಗಿಸಿಕೊಳ್ಳಲು ಶಿವಸೇನೆ ಪ್ರಶಾಂತ್‌ರ ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಪ್ರಶಾಂತ್‌ ಶಿವಸೇನೆಗೆ ಸಹಾಯ ಮಾಡುವುದು ಜೆಡಿಯುನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.  

ಇಂದಿನ ಕೋಟ್‌
ಹೊಸ ಪ್ರಣಾಳಿಕೆ ಹೊರಡಿಸುವುದಕ್ಕೂ ಮುನ್ನ ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿರುವ ಭರವಸೆಯನ್ನು ಪೂರ್ತಿಗೊಳಿಸಲಿ. 15 ಲಕ್ಷ ರೂ. ಖಾತೆಗೆ ಹಾಕುತ್ತೇನೆ ಎಂದಿದ್ದನ್ನು ಮರೆತಿರಾ?
ಮಾಯಾವತಿ, ಬಿಎಸ್‌ಪಿ ನಾಯಕಿ

ತಿರುವನಂತಪುರದಲ್ಲಿ ಬಿಜೆಪಿ ಕ್ಯಾಂಪೇನ್‌ ಆರಂಭವೇ ಚುನಾವಣೆ ನೀತಿ ಸಂಹಿತೆ ಉಲ್ಲಂ ಸುವ ಮೂಲಕ ಶುರುವಾಗಿದೆ. ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಪಕ್ಷ ಮತ ಕೇಳುತ್ತಿದೆ.
ಶಶಿ ತರೂರ್‌, ಕಾಂಗ್ರೆಸ್‌ ಸಂಸದ

ಯುವ ಮತದಾರರತ್ತ ಚಿತ್ತ ಹರಿಸಿದ ಕಾಂಗ್ರೆಸ್‌
ಈ ಬಾರಿ ದೇಶದಲ್ಲಿ ನಾಲ್ಕೂವರೆ ಕೋಟಿ ಹೊಸ ಯುವ ಮತದಾರರು ಮತಚಲಾಯಿಸಲಿದ್ದಾರೆ ಎಂಬ ಸಂಗತಿ, ರಾಜಕೀಯ ಪಕ್ಷಗಳ ಚುನಾವಣಾ ರಣನೀತಿಯನ್ನು ಬದಲಿಸಿರುವುದು ಸುಳ್ಳಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಯುವಮನಗಳನ್ನು ಸೆಳೆಯುವಲ್ಲಿ ಸೋಷಿಯಲ್‌ ಮೀಡಿಯಾ ಸೇರಿದಂತೆ, ಇನ್ನಿತರ ರೀತಿಯಲ್ಲಿ ಸಕಲ ಪ್ರಯತ್ನವನ್ನೂ ನಡೆಸಿವೆ. ಅದರಲ್ಲೂ ಈ ಬಾರಿ ತನ್ನ ರಣತಂತ್ರವನ್ನು ಶಾರ್ಪ್‌ಗೊಳಿಸಿಕೊಂಡಿರುವ ಕಾಂಗ್ರೆಸ್‌ ದೇಶದಲ್ಲಿನ 250 ಲೋಕಸಭಾ ಕ್ಷೇತ್ರಗಳಲ್ಲಿ ಯುವಮತದಾರರನ್ನು ತಲುಪಲು ಹೆಚ್ಚು ಪ್ರಯತ್ನಿಸುತ್ತಿದೆ.

ಗಮನಿಸಬೇಕಾದ ಅಂಶವೆಂದರೆ, ಅದು ಗುರುತಿಸಿರುವ ಈ ಕ್ಷೇತ್ರಗಳು ಕಾಂಗ್ರೆಸ್ಸೇತರ ಸರ್ಕಾರವಿರುವ ರಾಜ್ಯಗಳಲ್ಲಿ ಇವೆ. ಈ ಕ್ಷೇತ್ರಗಳಲ್ಲಿ ಕೇವಲ ನವಮತದಾರರನ್ನಷ್ಟೇ ಅಲ್ಲ, ಒಟ್ಟಾರೆಯಾಗಿ 18-35 ವಯೋಮಾನದವರತ್ತ ಚಿತ್ತ ನೆಟ್ಟಿದೆ ಕಾಂಗ್ರೆಸ್‌. ಮುಖ್ಯವಾಗಿ ಹರ್ಯಾಣ, ಗುಜರಾತ್‌, ಉತ್ತರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದ ಯುವಜನರನ್ನು ತಲುಪಲು ಕಾಂಗ್ರೆಸ್‌ನ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಚುನಾವಣಾ ಪರಿಣತರು. ಆದರೆ ಈ ಕೆಲಸ ಈಗಷ್ಟೇ ಆರಂಭವೇನೂ ಆಗಿಲ್ಲ. 2016ರಿಂದಲೇ ಕಾಂಗ್ರೆಸ್‌, “ಚಲೋ ಪಂಚಾಯತ್‌’ ಮತ್ತು “ಹಾಥ್‌ ಉಠಾವೋ’ನಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಇದೇ ಕಾರಣಕ್ಕಾಗಿಯೇ ಎನ್ನಲಾಗುತ್ತದೆ.  

ಆದರೆ ಈಗಲೂ ಯುವ ಮತದಾರರನ್ನು ಸಕ್ಷಮವಾಗಿ ತಲುಪಲು ಹೆಚ್ಚು ಸಫ‌ಲವಾಗುತ್ತಿರುವುದು ಬಿಜೆಪಿ ಎನ್ನುವುದು ಸೋಷಿಯಲ್‌ ಮೀಡಿಯಾ  ಮ್ಯಾನೇಜಿಂಗ್‌  ಪರಿಣತರ ವಾದ. ಬೇರು ಮಟcದಲ್ಲಷ್ಟೇ ಅಲ್ಲದೆ, ಸೋಷಿಯಲ್‌ ನೆಟ್‌ವರ್ಕ್‌ನ ಪ್ರಬಲ ಬಳಕೆಯ ಮೂಲಕ ಬಿಜೆಪಿಗೆ ಇದು ಸಾಧ್ಯವಾಗಿದೆ. 2014ರ ಫ‌ಲಿತಾಂಶದ ನಂತರ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾಗಳ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದರಿಂದ ಈ ಕ್ಷೇತ್ರದಲ್ಲಿ ಅದು ಚೂರು ಹಿಂದಿದೆ. ಆದರೆ “ಪಕ್ಷವೊಂದು ನೇರವಾಗಿ ಮತದಾರರ ಕಿಸೆಗೆ ನೋಟಿಫಿಕೇಷನ್‌ಗಳ ಮೂಲಕ ತಲುಪುತ್ತಿದೆ ಎಂದಾಕ್ಷಣ, ಮತದಾರರು ಅದರತ್ತ ವಾಲುತ್ತಾರೆ ಎಂದೇನೂ ಅಲ್ಲ, ಪಕ್ಷವೊಂದರ ಪಾಲಿಸಿಗಳು ಯುವಕರ ಪರವಾಗಿ ವೆಯೇ, ಯುವಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೂಪಿತವಾಗಿವೆಯೇ ಎನ್ನುವುದೇ ನಿರ್ಣಾಯಕ ಪಾತ್ರ ವಹಿಸುತ್ತದೆ’  ಎನ್ನುತ್ತಾರೆ  ಕೆ.ಆರ್‌. ಪಾಲಿಟಿಕೋ ಅನಲೈಸಿಸ್‌ನ ಸಿಐಒ ರಾಂ ಸಂಜೋತ್‌ ಮಿಶ್ರಾ ಅವರು.  

ಟಾಪ್ ನ್ಯೂಸ್

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Nirmala Sitharaman

Bengaluru; ಚುನಾವಣಾ ಬಾಂಡ್‌ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್‌ ವಿರುದ್ದ ಎಫ್‌ಐಆರ್

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.