![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 23, 2019, 1:04 PM IST
ಬೇಲೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಎ. ಮಂಜು ಇನ್ನೂ ಕಾಂಗ್ರೆಸ್ ಗುಂಗಿನಲ್ಲಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಅವರು 2023 ರ ವೇಳೆಗೆ ಹಾಸನದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ.
ಶನಿವಾರ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ದ್ದೇಶಿಸಿ ಮಾತನಾಡಿದ ಮಂಜು ಮಾತಿನ ಭರದಲ್ಲಿ ಬಾಯ್ತಪ್ಪಿ ಹಾಸನದ ಎಲ್ಲಾ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನಾಗಿ ಮಾಡತಕ್ಕಂತ ಜವಾಬ್ಧಾರಿ ನನ್ನದು ಎಂದು ಹೇಳಿದ್ದಾರೆ. ತಕ್ಷಣ ನೆರೆದಿದ್ದ ಕಾರ್ಯಕರ್ತರು ಕಾಂಗ್ರೆಸ್ ಅಲ್ಲ ಬಿಜೆಪಿ ಎಂದು ಕೂಗಿದರು.
ಗೌಡರಿಗೆ 9 ಕಂಟಕ
ಇದೇ ವೇಳೆ ಮಾತನಾಡಿ ಎ ಮಂಜು ದೇವೇಗೌಡರಿಗೆ ಈ ಬಾರಿ 9 ಕಂಟಕವಾಗಲಿದೆ. 1989, 1999 ರಲ್ಲಿ ಸೋತಂತೆ 2019 ರಲ್ಲೂ ಸೋಲಾಗಲಿದೆ. ಚುನಾವಣೆಯೂ 18 ಕ್ಕೆ ಬಂದಿದ್ದು, 1+8 =9 ಅದು ಸರಿಯಾಗಿಯೆ ಬಂದಿದೆ ಎಂದು ಸಂಖ್ಯಾ ಶಾಸ್ತ್ರ ನುಡಿದರು.
You seem to have an Ad Blocker on.
To continue reading, please turn it off or whitelist Udayavani.