![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 20, 2019, 6:35 AM IST
ಕ್ಷೇತ್ರದ ವಸ್ತುಸ್ಥಿತಿ: ಚುನಾವಣೆ ಯಾವುದೇ ಇರಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಕಾಂಗ್ರೆಸ್. 2014ರಲ್ಲಿ ಒಟ್ಟಾರೆ ಈ ಕ್ಷೇತ್ರದಿಂದ 97,551 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ 48,866 (ಶೇ.50.1) ಮತಗಳು, ಸದ್ಯ ಲೋಕಸಭಾ ಸದಸ್ಯರಾಗಿರುವ ಪಿ.ಸಿ.ಮೋಹನ್ ಪರ 42,326 (ಶೇ.43.4) ಮತಗಳು ಚಲಾವಣೆಯಾಗಿವೆ.
ಕ್ಷೇತ್ರ ವ್ಯಾಪ್ತಿಯಲ್ಲಿ 7 ಬಿಬಿಎಂಪಿ ವಾರ್ಡ್ಗಳಿದ್ದು, ಈ ಪೈಕಿ ಒಂದರಲ್ಲಿ ಬಿಜೆಪಿ ಮತ್ತೂಂದರಲ್ಲಿ ಸ್ವತಂತ್ರ ಅಭ್ಯರ್ಥಿ ಹಾಗೂ ಉಳಿದ 5 ವಾರ್ಡ್ಗಳಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ಗಳಿದ್ದಾರೆ. ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ರಾಜಭವನ, ಪ್ರಮುಖ ಸರ್ಕಾರಿ ಇಲಾಖೆಗಳು, ಬಹುತೇಕ ವಾಣಿಜ್ಯ ಪ್ರದೇಶಗಳನ್ನು ಒಳಗೊಂಡಿರುವ ಶಿವಾಜಿನಗರದ ಕ್ಷೇತ್ರ ಇಂದಿಗೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
ಮಧ್ಯಮ ವರ್ಗ ಮತ್ತು ಬಡವರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ವಲಸಿಗ ತಮಿಳರ ಮತಗಳೇ ನಿರ್ಣಾಯಕ. ಇನ್ನು ಶಿವಾಜಿನಗರ ವಿಧಾನಸಭೆ ಕ್ಷೇತ್ರದಿಂದ ಎರಡು ಬಾರಿ ಸಚಿವ ಆರ್.ರೋಷನ್ ಬೇಗ್ ಗೆಲವು ಸಾಧಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸಿದರೆ ಬಹುಸಂಖ್ಯಾತ ಮುಸ್ಲಿಂ ಮತದಾರರ ಬೆಂಬಲ ಅವರಿಗೆ ಸಿಗಬಹುದು. ಪ್ರತಿ ಬಾರಿಯಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಸಾಧ್ಯತೆ ಇದೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಒಟ್ಟಾರೆ ನೀಡಿದ ಅನುದಾನ 3.3 ಕೋಟಿ
-3 ಕುಡಿಯುವ ನೀರಿನ ಯೋಜನೆಗಳು
-5 ಕಡೆಗಳಲ್ಲಿ ಶೌಚಾಲಯ ನಿರ್ಮಾಣ
-55 ಲಕ್ಷ ಅನುದಾನದಲ್ಲಿ ಕಬ್ಬನ್ ಉದ್ಯಾನ ಅಭಿವೃದ್ಧಿ
-ಕ್ಷತ್ರಿಯ ಸಂಘದ ವಿದ್ಯಾರ್ಥಿ ನಿಲಯಕ್ಕೆ 15.75 ಲಕ್ಷ ಅನುದಾನ
ನಿರೀಕ್ಷೆಗಳು
-ಸ್ಮಾರ್ಟ್ಸಿಟಿಯಡಿ ಶಿವಾಜಿನಗರ ರಸಲ್ ಮಾರುಕಟ್ಟೆ ಪ್ರದೇಶ ಅಭಿವೃದ್ಧಿ
-ನಿರ್ಮಾಣ ಹಂತದಲ್ಲಿರುವ ಯೋಜನೆಗಳ ವೇಗ ಹೆಚ್ಚಿಸಬೇಕು
-ವಾರ್ಡ್ಗಳು- 7
-ಬಿಜೆಪಿ- 1
-ಕಾಂಗ್ರೆಸ್- 5
-ಇತರೆ – 1
-ಜನಸಂಖ್ಯೆ- 2,97,368
-ಮತದಾರರ ಸಂಖ್ಯೆ- 1,87,772
-ಪುರುಷರು – 95101
-ಮಹಿಳೆಯರು- 92671
2014ರ ಚುನಾವಣೆಯಲ್ಲಿ
-ಚಲಾವಣೆಯಾದ ಮತಗಳು- 97,551 (ಶೇ.54.54)
-ಬಿಜೆಪಿ ಪಡೆದ ಮತಗಳು- 42,326 (ಶೇ.43.4)
-ಕಾಂಗ್ರೆಸ್ ಪಡೆದ ಮತಗಳು – 48,866 (ಶೇ.50.1)
-ಜೆಡಿಎಸ್ ಪಡೆದ ಮತಗಳು- 3,241 (ಶೇ.3.3)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
ರೋಷನ್ ಬೇಗ್ ಕಾಂಗ್ರೆಸ್ ಶಾಸಕ
-ಬಿಜೆಪಿ ಸದಸ್ಯರು- 2
-ಕಾಂಗ್ರೆಸ್ ಸದಸ್ಯರು -4
-ಇತರೆ-1
ಮಾಹಿತಿ: ಜಯಪ್ರಕಾಶ್ ಬಿರಾದಾರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.