![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 8, 2019, 11:14 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಪೂರ್ತಿ ನೀರು, ಯುವ ಸಮೂಹಕ್ಕೆ ಶಾಶ್ವತ ಉದ್ಯೋಗ, ರಿಕ್ಷಾ ಚಾಲಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿ, ಅಡಿಕೆ, ರಬ್ಬರ್, ಕಾಳುಮೆಣಸು ಬೆಳೆಗಾರರಿಗೆ ನ್ಯಾಯಸಮ್ಮತ ಬೆಲೆ, ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ… ಇವು ಜಿಲ್ಲಾ ಕಾಂಗ್ರೆಸ್ ರವಿವಾರ ಬಿಡುಗಡೆಗೊಳಿಸಿದ ಪ್ರಣಾಳಿಕೆಯ ಮುಖ್ಯಾಂಶಗಳು.
ಕೃಷಿ ಅಭಿವೃದ್ಧಿ ನಿಗಮ ಸ್ಥಾಪನೆ, ಕೊಳೆರೋಗಕ್ಕೆ ಸೂಕ್ತ ಪರಿಹಾರ, ಕಿದು ತೋಟಗಾರಿಕೆ ಸಂಶೋಧನ ಕೇಂದ್ರ ಮರುಸ್ಥಾಪನೆ, ಕೊಣಾಜೆಯಿಂದ ಮಣಿಪಾಲಕ್ಕೆ ಮೆಟ್ರೋ ರೈಲು ಯೋಜನೆ, ಬಿಕರ್ನಕಟ್ಟೆ- ಮೂಡು ಬಿದಿರೆ ಹೆದ್ದಾರಿ ಕಾಮಗಾರಿ ಆರಂಭ, ನಂತೂರು ಜಂಕ್ಷನ್ನಲ್ಲಿ ಮೇಲ್ಸೇತುವೆ, ಪುತ್ತೂರು ಸ್ಟೇಷನ್ ತಂಗುವಿಕೆಯ ಲೋಕಲ್ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ವಿಸ್ತರಣೆ, ಮಂಗಳೂರಿನಲ್ಲಿ ಇಎಸ್ಐ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಯತ್ನ, ಬೀಡಿ ಕಾರ್ಮಿಕರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಪರ್ಯಾಯ ಉದ್ಯಮ, ಕಂಬಳ, ಯಕ್ಷಗಾನ, ಜಾನಪದ ಕಲಾವಿದರಿಗೆ ಮಾಸಾಶನ ಜಾರಿಗೆ ತರುವುದಾಗಿ ಹೇಳಿದೆ.
ಮೀನುಗಾರಿಕೆ ಉದ್ಯಮ ಅಂತಾ ರಾಷ್ಟ್ರೀಯ ಮಟ್ಟಕ್ಕೆ ಒಯ್ಯುವುದಲ್ಲದೆ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಮೀನುಗಾರಿಕೆ ಕೇಂದ್ರ ಸ್ಥಾಪನೆ, ನದಿ ತೀರ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ಭರವಸೆ ನೀಡಲಾಗಿದೆ. ತುಳು 8ನೇ ಪರಿಚ್ಛೇದಕ್ಕೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ವಿಜಯ ಬ್ಯಾಂಕ್ ಮರುಸ್ಥಾಪನೆ
ವಿಜಯ ಬ್ಯಾಂಕ್ ವಿಲೀನ ರದ್ದುಗೊಳಿಸಿ ಮರುಸ್ಥಾಪನೆ ಮಾಡುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಈಡೇರಿಸುತ್ತೇವೆ: ರೈ
ಪ್ರಣಾಳಿಕೆ ಬಿಡುಗಡೆಗೊಳಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೇಂದ್ರ ಸರಕಾರದ ಮೂಲಕ ಜಿಲ್ಲೆಗೆ ಮಾಡಲು ಸಾಧ್ಯವಾಗುವಂಥ ಭರವಸೆಗಳನ್ನೇ ನೀಡಿದ್ದೇವೆ. ಇದು ನೈಜ ಪ್ರಣಾಳಿಕೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಜನರು ಗೆಲ್ಲಿಸಿದರೆ ಜನರ ಬಹುಕಾಲದ ಬೇಡಿಕೆಗಳು ಈಡೇರಲಿವೆ ಎಂದಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.