ಡಿಕೆಶಿಗೆ ಶ್ರೀರಾಮುಲು ಪಲ್ಲಕ್ಕಿ ಸವಾಲ್‌

ಬಿರುಸು ಪಡೆದ ಪ್ರಚಾರ: ನಾಯಕರಿಂದ ವಾಕ್ಸಮರ

Team Udayavani, Mar 27, 2019, 7:49 AM IST

93

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರದ ಕಾವು ರಂಗೇರುತ್ತಿದ್ದು, ಮಂಗಳವಾರವೂ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರಿದವು. ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದ ನಾಯಕರು ನಡೆಸಿದ ಭಾಷಣದ ಸಣ್ಣ ಝಲಕ್‌ ಇಲ್ಲಿದೆ.

ಡಿಕೆಶಿ ಬಿಜೆಪಿಯ ಪಲ್ಲಕ್ಕಿ ಹೊರಲಿ: ಶ್ರೀರಾಮುಲು

ಸಚಿವ ಡಿಕೆಶಿ ಇನ್ನು ಮುಂದೆ ಪಲ್ಲಕ್ಕಿ ಹೊರುವುದು ಬೇಕಿಲ್ಲ. ಲೋಕಸಭೆ ಚುನಾವಣೆ ಅನಂತರ ಬಿಜೆಪಿ ಪಲ್ಲಕ್ಕಿ ಮೇಲೆ ಇರಲಿದ್ದು, ಅದನ್ನು ಶಿವಕುಮಾರ್‌ ಹೊರಬೇಕು ಅಷ್ಟೆ.

ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷ ಹೆಣದಂತಾಗಲಿದ್ದು, ಡಿಕೆಶಿ ಅದರ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಜಾಮೀನಿನ ಮೇಲೆ ಹೊರಗಿದ್ದಾರೆ.  ನೆಹರೂ ಕುಟುಂಬದ ಚೋರ್‌ ರಾಹುಲ್‌ ಆಗಿದ್ದು, ಅವರ ಹೆಸರಿನ ಮುಂದೆ ಇರುವ ಗಾಂಧಿ  ಹೆಸರನ್ನು ತೆಗೆದು ಹಾಕಬೇಕು.

ಮಹಾತ್ಮ ಗಾಂ ಧಿ ಹೆಸರಿಟ್ಟುಕೊಂಡು ರಾಹುಲ್‌ ರಾಷ್ಟ್ರಪಿತನಿಗೆ ಅವಮಾನ ಮಾಡುತ್ತಿದ್ದಾರೆ.

ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಕಾಂಗ್ರೆಸ್‌ನ ಯಾವ ಶಾಸಕರೂ ನಮ್ಮ ಸಂಪರ್ಕದಲ್ಲಿ ಇಲ್ಲ.

ಮೋದಿ ಅಲೆ ನಾಶ ಮಾಡುವ ತಾಕತ್ತಿದೆ: ಸಿಎಂ
ರೈತರ ಕುಟುಂಬಗಳಿಗೆ 6 ಸಾವಿರ ರೂ. ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಚುನಾವಣ ಗಿಮಿಕ್‌.

ಮೋದಿ ಅಲೆ ನಾಶ ಮಾಡುವ ಶಕ್ತಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರಿಗಿದೆ.
ಮೈತ್ರಿ ಪಕ್ಷಗಳ ಕಾರ್ಯಕರ್ತರು ಮೋದಿ ಸರಕಾರದ ವೈಫ‌ಲ್ಯಗಳನ್ನು ಗ್ರಾಮೀಣ ಪ್ರದೇಶಗಳ ಮತದಾರರಿಗೆ ಒಯ್ಯಬೇಕು.

ರಾಜ್ಯ ಯಾರಿಂದ ಅಭಿವೃದ್ಧಿಯಾಗುತ್ತಿದೆ, ಯಾರಿಂದ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಸಾಮಾನ್ಯ ತಿಳುವಳಿಕೆ ನಗರವಾಸಿಗಳಿಗಿಲ್ಲ. ನಗರವಾಸಿಗಳಿಗೆ ಮೋದಿ ಬಗ್ಗೆ ವಿಶೇಷ ಮಮಕಾರ.

ಡಿಕೆಶಿ ನಿಖೀಲ್‌ಗೆ ರಾಮನಗರ ಬಿಟ್ಟು ಕೊಡಲಿ: ಸುಮಲತಾ
ನಮ್ಮ ಮನೆಯ ಮಕ್ಕಳಂತಿರುವ ದರ್ಶನ್‌ ಮತ್ತು ಯಶ್‌ ಅವರು ನನ್ನ ಜತೆ ಪ್ರಚಾರಕ್ಕಿಳಿದರೆ ಅವರ ವಿರುದ್ಧ ಕಳ್ಳೆತ್ತು ಎಂಬ ಪದ ಬಳಸುವುದು ಸಿಎಂ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ.

ಹಿಂದೆ ಯಶ್‌ ಅವರು ಸಾ.ರಾ.ಮಹೇಶ್‌ ಪರವೂ ಪ್ರಚಾರ ಮಾಡಿದ್ದರು. ಅವರ ಪರ ಪ್ರಚಾರ ಮಾಡಿದರೆ, ಅದು ಪ್ರಚಾರ. ನಮ್ಮ ಪರ ನಮ್ಮ ಮಕ್ಕಳು ಪ್ರಚಾರ ಮಾಡಿದರೆ ಅದು ಅನಾಚಾರವೇ?.

ಅಂಬರೀಷ್‌ ನಂಬಿದ ಜನರಿಗೆ ಮೋಸ ಮಾಡಿಲ್ಲ. ಜನರಿಗೆ ಕೊಟ್ಟಿದ್ದನ್ನು ಇಲ್ಲಿವರೆಗೂ ಹೇಳಿಕೊಳ್ಳಲಿಲ್ಲ. ಜನರಿಗೆ ಸುಳ್ಳು ಹೇಳುವ ಗುಣ ಅಂಬರೀಷ್‌ ಅವರಲ್ಲಿ ಇರಲಿಲ್ಲ.

ನಾನು ಜನರ ಕಷ್ಟಗಳಿಗೆ ನೆರವಾಗಲು ಅಂಬರೀಷ್‌ ಹೆಸರು ಹೇಳಿಕೊಂಡು ಬಂದಿದ್ದೇನೆ.

ಒಬ್ಬ ಮಹಿಳೆ ಎನ್ನದೆ ವಿಪಕ್ಷದವರು ಬಹಳ ನೋವಿನ ಮಾತುಗಳನ್ನು ಆಡುತ್ತಿದ್ದಾರೆ. ಇದು ಮಹಿಳೆಯರಿಗೆ ಚೆನ್ನಾಗಿ ಅರ್ಥವಾಗುತ್ತದೆ.

ನನ್ನ ಗಂಡನ ಹೆಸರು ಹೇಳಿ ನಾನು ಚುನಾ ವಣೆಯಲ್ಲಿ ಮಾತನಾಡಬಾರದೆ? ಅವರು ಮಾತ್ರ ಹೆಸರನ್ನು ಬಳಸಿಕೊಳ್ಳಬಹುದಾ?.

ಬಿಜೆಪಿಯವರು ಬೇಷರತ್‌ ಬೆಂಬಲ ನೀಡಿದ್ದು, ಅವರಿಗೆ ಕೃತಜ್ಞತೆ ಹೇಳಿದ್ದೇನೆ.

ನಾನು ನಾಮಪತ್ರ ಸಲ್ಲಿಕೆ ವೇಳೆ ಕರೆಂಟ್‌ ಕಟ್‌ ಮಾಡಿದ್ದಕ್ಕೆ ಚುನಾವಣಾಧಿಕಾರಿಗಳಿಗೆ ಈಗಾಗಲೆ ದೂರು ನೀಡಿದ್ದೇನೆ.

ಸಚಿವ ಡಿಕೆಶಿಯವರಿಗೆ ನಿಖೀಲ್‌ ಬಗ್ಗೆ ಅಷ್ಟು ಕಾಳಜಿ ಇದ್ದಿ ದ್ದರೆ ಅವರ ತಮ್ಮನ ಕ್ಷೇತ್ರವನ್ನೇ ಬಿಟ್ಟು ಕೊ ಡ ಬಹುದಲ್ಲವಾ?.

“ತಾಕತ್ತಿದ್ರೆ ಅಮ್ಮನನ್ನು ಕಟ್ಟಾಕ್ರೋ’
ಮಂಡ್ಯ: ಜಿಲ್ಲೆಯ ಹಲವೆಡೆ ಮಂಗಳವಾರ ಅಮ್ಮನ ಪರ ಪ್ರಚಾರ ನಡೆಸಿದ ಅಂಬರೀಷ್‌ ಪುತ್ರ ಅಭಿಷೇಕ್‌, “ಮಂಡ್ಯದ ಜನ ಅಂಬರೀಷ್‌ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಯನ್ನು ಬಿಟ್ಟು ಕೊಡುವ ಚಾನ್ಸೇ ಇಲ್ಲ. ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ’ ಎಂದು ಡಿ.ಬಾಸ್‌ ಸ್ಟೆ çಲ್‌ನಲ್ಲಿ ಡೈಲಾಗ್‌ ಹೊಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಮೈಕ್‌ ಕೈಕೊಟ್ಟಿತು. ತತ್‌ಕ್ಷಣ ಮಗನ ಕೈಯಿಂದ ಮೈಕ್‌ ಪಡೆದ ಸುಮಲತಾ, “ಮೊನ್ನೆ ಕರೆಂಟ್‌ ತೆಗೆದ್ರು, ಇವತ್ಯಾರು ಮೈಕ್‌ ಕಟ್‌ ಮಾಡಿದ್ದು’ ಎಂದು ವ್ಯಂಗ್ಯವಾಡಿದರು. ಬೆಂಬಲಿಗರಿಂದ ಕೇಕೆ, ಜೈಕಾರ ಕೇಳಿ ಬಂತು.

ತಮ್ಮದೇ ಪ್ರಧಾನಿಗೆ ಬೆಲೆ ಕೊಡದ ರಾಹುಲ್‌

ಅಂದು ತಮ್ಮದೇ ಪಕ್ಷದ ಕಾರ್ಯಸೂಚಿಯಂತೆ ರೂಪಿತವಾದ ಕಾಯಿದೆ
ಪ್ರತಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಹರಿದು ಎಸೆದಿದ್ದ ವ್ಯಕ್ತಿ, ಇಂದು ತಾನೇ ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ.

ತಮ್ಮದೇ ಪ್ರಧಾನಿಗೆ ಗೌರವ ನೀಡದ ವ್ಯಕ್ತಿಯ ಹಗಲುಗನಸು ನನಸಾಗದು.

ಕಾಂಗ್ರೆಸ್‌ ನಾಯಕರು ಸೈನಿಕರಿಗೆ ಗೌರವ ನೀಡುವ ಬದಲು ಕೀಳಾಗಿ ಮಾತನಾಡಿದ್ದಾರೆ.

ಒಬ್ಬ ಕಾಂಗ್ರೆಸ್‌ ನಾಯಕ “ಸೈನ್ಯದ ಮುಖ್ಯಸ್ಥ ರಸ್ತೆ ಬದಿಯ ಗೂಂಡಾ’ ಎಂದು ನಿಂದಿಸಿದರೆ, ಕರ್ನಾಟಕದ ಇನ್ನೋರ್ವ ಕಾಂಗ್ರೆಸ್‌ ನಾಯಕ, ಶ್ರೀ ರಾಮಾಯಣ ದರ್ಶನಂ ಬರೆದಿರುವ ಜ್ಞಾನಿ “ವಾಯುಪಡೆ ಮುಖ್ಯಸ್ಥ ಸುಳ್ಳುಗಾರ’ ಎಂದು ಕರೆದರು.

ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌, ಪಾಕಿಸ್ಥಾನಕ್ಕೆ ಹೋಗಿ “ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನದ ಸಹಾಯ
ಬೇಕು’ ಎಂದರು.

ಅಭಿನಂದನ್‌ನ್ನು ವಾಪಸ್‌ ಮಾಡಿದ ಪಾಕ್‌ ಪ್ರಧಾನಿಗೆ ನೋಬೆಲ್‌ ಕೊಡಬೇಕು ಎನ್ನುವ ವಾದವನ್ನು ಕಾಂಗ್ರೆಸ್‌ ಸಮರ್ಥಿಸುತ್ತಿದೆ.
(ಉಡುಪಿಯಲ್ಲಿ ಕಾಂಗ್ರೆಸ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಟೀಕೆ)

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.