ಅಂಬರೀಶ್‌ ಅಗಲಿಕೆಯ ನೋವು ನಮಗೇ ಗೊತ್ತು


Team Udayavani, Mar 30, 2019, 8:14 AM IST

45

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಶುಕ್ರವಾರ ನಡೆದ ಪ್ರಚಾರದ ವೇಳೆ ಕೇಳಿ ಬಂದ ಟೀಕಾಸ್ತ್ರಗಳ ಸಣ್ಣ ಝಲಕ್‌ ಇಲ್ಲಿದೆ.

ದುಡ್ಡು ಹಂಚಿದ್ದನ್ನು ನೋಡಿ ಐಟಿಯವರು ದಾಳಿ ಮಾಡಿದ್ದಾರೆ
ಅಂಬರೀಶ್‌ ಅಗಲಿಕೆಯ ನೋವು ನಮಗೇ ಗೊತ್ತು. ಅಂಬರೀಶ್‌ ಅಭಿಮಾನಿಗಳಿಗೂ ಗೊತ್ತು. ಅದನ್ನು ಬಹಿರಂಗವಾಗಿ ತೋರ್ಪಡಿಸಬೇಕೆ?

ಇವತ್ತು ಅಂಬರೀಶ್‌ ಅನ್ನೋ ಶಕ್ತಿ ನನ್ನೊಂದಿಗೆ ಇಲ್ಲ ಎಂಬ ಕಾರಣಕ್ಕೆ ಸಿಎಂ ಸೇರಿ
ಎಲ್ಲರೂ ನನ್ನನ್ನು ನೇರ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಮಹಿಳೆ ಎನ್ನುವುದನ್ನೂ ಮರೆತು ಮಾತನಾಡುತ್ತಿದ್ದಾರೆ. ಟಾರ್ಚರ್‌ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಮೇಲಿದ್ದೇನೆ
ಅನ್ನೋದನ್ನೇ ಮರೆತು ಮಾತನಾಡುತ್ತಿದ್ದಾರೆ.

ಐಟಿ ಇಲಾಖೆ ತನ್ನ ನಿಯಂತ್ರಣದಲ್ಲಿ ಇದೆಯೇ?. ನಾನು ಇಲಾಖೆಯನ್ನು ಕಂಟ್ರೋಲ್‌ ಮಾಡುತ್ತಿದ್ದೇನಾ?.

ಸಿನಿಮಾ ನಟರ ಮನೆ ಮೇಲೆ ಐಟಿ ದಾಳಿಯಾದಾಗ ಅವರು ಸಹಕಾರ ನೀಡಲಿಲ್ಲವೇ. ನಿಮಗೆ ಮಾತ್ರ ಐಟಿ ರಿಯಾಯ್ತಿ ಕೊಡಬೇಕೇ?.

ನಾಮಪತ್ರ ಸಲ್ಲಿಕೆ ದಿನ ಅವರು ದುಡ್ಡು ಹಂಚುತ್ತಿರುವುದನ್ನು ನೋಡಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಲ್ಲಿ ನನ್ನ ಪಾತ್ರವಿದೆ ಎಂದುಹೇಳುವುದರಲ್ಲಿ ಅರ್ಥವಿದೆಯಾ?.

ನಿಖೀಲ್‌ ನಾಮಪತ್ರ ಕ್ರಮಬದ್ಧವಾಗಿಲ್ಲ. ಸಿಎಂ ಅಧಿಕಾರ ರುಪಯೋಗಪಡಿಸಿಕೊಂಡು ದಬ್ಟಾಳಿಕೆಯಿಂದ ಮುಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿಯನ್ನು ಸಿಎಂ ಅವರೇ ಖುದ್ದು ತಮ್ಮ ಬಳಿಗೆ ಕರೆಸಿಕೊಂಡು
ಮಾತನಾಡಿದ್ದಾರೆ.

ಅಂಬರೀಶ್‌ ತಮ್ಮ ಬಳಿ ಬಂದವರಿಗೆ ಸಹಾಯ ಮಾಡಿದ್ದಾರೆಯೇ ವಿನ: ಯಾರ
ಬಳಿಯೂ ಸಹಾಯ ಕೇಳಲಿಲ್ಲ. ಪುಟ್ಟರಾಜು ಅವರು ಅಂಬರೀಶ್‌ ಕಾಲಿಗೆ ಬಿದ್ದು
ಯಾವ ರೀತಿ ಥ್ಯಾಂಕ್ಸ್‌ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತು. ಬೇಕಿದ್ದರೆ, ಅವರೇ
ಹೋಗಿ ಅಂಬರೀಶ್‌ ಸಮಾಧಿ ಇಲ್ಲವೇ ದೇವರ ಬಳಿ ಕೇಳಲಿ.
ಮಾಟ-ಮಂತ್ರವನ್ನೂ ಮಾಡಲಿ.

ನಾನು ಮಂಡ್ಯದ ಮಗ: ಅಭಿಷೇಕ್‌
ನಮ್ಮ ಮುಖದಲ್ಲಿ ಅಂಬರೀಶ್‌ ಸಾವಿನ ನೋವು ಕಾಣಿ¤ಲ್ಲ ಅಂತ ಸಿಎಂ
ಹೇಳಿದ್ದಾರೆ. ಅಂಬರೀಶ್‌ ಇಲ್ಲದ ನೋವು ಏನೂ ಅಂತ ಅನುಭವಿಸುತ್ತಿರುವ
ನಮಗೆ ಗೊತ್ತಿದೆ. ಮೈಕ್‌ ಎದುರು ಟವಲ್‌ ಹಾಕಿಕೊಂಡು ಅಳ್ಳೋ ಮೂಲಕ
ನಮ್ಮ ನೋವನ್ನು ತೋರ್ಪಡಿಸಬೇಕೇ?.

ನೇರವಾಗಿ ಹೋರಾಟ ನಡೆಸಿ ಗೆಲ್ಲಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಮೂರು ಜನ ಸುಮಲತಾ ಹೆಸರಿನವರನ್ನು ಅಖಾಡಕ್ಕಿಳಿಸಿ ಕುತಂತ್ರ ರಾಜಕಾರಣ
ಮಾಡುತ್ತಿದ್ದಾರೆ.

ನಾವು ಹಣ ಹಂಚುವವರಲ್ಲ. ಪ್ರೀತಿಯನ್ನು ಹಂಚುತ್ತೇವೆ.

ಸ್ತ್ರೀ ಶಕ್ತಿ ಏನು ಎನ್ನುವುದನ್ನು ಜೆಡಿಎಸ್‌ನವರಿಗೆ ತೋರಿಸಿ, ಮಂಡ್ಯದ
ಸ್ವಾಭಿಮಾನವನ್ನು ನೀವೇ ಕಾಪಾಡಿ. ಈ ಜವಾಬ್ದಾರಿ ನಿಮ್ಮ ಮೇಲಿದೆ.

ಇಲ್ಲಿಯವರನ್ನು ಮದುವೆ ಆಗಿ ಮಂಡ್ಯದ ಅಳಿಯನಾಗಬೇಕಿಲ್ಲ. ನಾನು
ಮಂಡ್ಯದ ಮಗ.

ಮೈತ್ರಿ ಅಭ್ಯರ್ಥಿಗೆ ಓಟ್‌ ಹಾಕಿದರೆ ಅಂಬರೀಶ್‌ ಆತ್ಮಕ್ಕೆ ಶಾಂತಿ ಸಿಗಲಿದೆ ಅಂತ
ಸಚಿವರೊಬ್ಬರು ಹೇಳುತ್ತಾರೆ. ಇದು ಏನು ಲೆಕ್ಕಾಚಾರ ಅಂತ ಗೊತ್ತಾಗುತ್ತಿಲ್ಲ.

ಅಂಬರೀಶ್‌ರನ್ನು ಗೆಲ್ಲಿಸಿದ್ದು ನಾನು
ರಾಮನಗರ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಮಂಡ್ಯಕ್ಕೆ ಅಂಬರೀಶ್‌
ರನ್ನು ಕರೆ ತಂದದ್ದು ನಾನೇ. ನನ್ನ ದುಡ್ಡು ಹಾಕಿ ಅಂಬರೀಶ್‌ ಅವರನ್ನು
ಗೆಲ್ಲಿಸಿಕೊಟ್ಟಿದ್ದೇನೆ.

ಐಟಿ ದಾಳಿ ಸುಮಲತಾರಿಗೆ ಗೊತ್ತಿತ್ತು. ರಜನಿಕಾಂತ್‌ ಮೂಲಕ ಮೋದಿಗೆ ತಿಳಿಸಿ ಐಟಿ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ.

ನಾವು ಪೊಲೀಸ್‌ ಗುಪ್ತದಳವನ್ನು ದುರುಪಯೋಗಪಡಿಸಿಕೊಂಡಿಲ್ಲ. ಸುಮಲತಾರ
ಚಲನವಲನಗಳ ಬಗ್ಗೆ ನಮ್ಮ ಕಾರ್ಯಕರ್ತರೇ ನಮಗೆ ಮಾಹಿತಿ ನೀಡುತ್ತಿದ್ದಾರೆ.
ಸುಮಲತಾರ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿಯಿದೆ. ಮುಂದಿನ
ದಿನಗಳಲ್ಲಿ ಅದರ ವಿವರ ನೀಡಲಿದ್ದೇವೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿಗೆ ಟಿಕೆಟ್‌ ನೀಡದೆ ಬಿಜೆಪಿಯವರು ಆ
ಕುಟುಂಬವನ್ನು ಮುಗಿಸಿದ್ದಾರೆ. ಈಗ ಜೆಡಿಎಸ್‌ನ್ನು ಮುಗಿಸಲು
ಆಲೋಚಿಸುತ್ತಿದ್ದಾರೆ.

ಬಿಜೆಪಿಯವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯನ್ನು
ನಿಲ್ಲಿಸುವ ಯೋಗ್ಯತೆ ಇಲ್ಲ.

ಸುಮಲತಾಗೆ ನೋಟಿಸ್‌

ಈ ಮಧ್ಯೆ, ಅಭ್ಯರ್ಥಿಯೊಬ್ಬರ ನಾಮ ಪತ್ರದಲ್ಲಿನ ನ್ಯೂನ್ಯತೆ ಯಲ್ಲಿರುವ ತಪ್ಪನ್ನು
ಮುಚ್ಚಿ ಡಲು ಆಡ ಳಿತ ಯಂತ್ರ ಸಹ ಕ ರಿ ಸು ತ್ತಿದೆ ಎಂದು ಆರೋ ಪಿ ಸಿ ರುವ ಸುಮಲತಾಗೆ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಶುಕ್ರ ವಾರ ನೋಟಿಸ್‌
ಜಾರಿಗೊಳಿಸಿದ್ದಾರೆ. ಈ ಸಂಬಂಧ ನೋಟಿಸ್‌ಗೆ ಒಂದು ದಿನದೊಳಗೆ ಸಮ ಜಾಯಿಷಿ ನೀಡದೆ ಹೋದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲ ವೆಂದು ಭಾವಿಸಿ ಕಾನೂನು
ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್‌ಚಿಹ್ನೆ

ರಣಕಹಳೆ ಊದುತ್ತಿರುವ ರೈತ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಸುಮಲತಾ ಅಂಬರೀಶ್‌ಗೆ ಚಿಹ್ನೆ ಆಯ್ಕೆಯಲ್ಲಿ ಅದೃಷ್ಟ ಕೈಕೊಟ್ಟಿದೆ. ಸುಮಲತಾ
ಬಯಸಿದ್ದ 3 ಚಿಹ್ನೆಗಳು ಲಕ್ಕಿ ಡ್ರಾನಲ್ಲಿ ಬೇರೆಯವರ ಪಾಲಾಗಿವೆ. ತೆಂಗಿನ
ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ನಿಂತಿರುವ ರೈತನ ಚಿಹ್ನೆಗಳು ಅನ್ಯರ ಪಾಲಾಗಿದ್ದು, ಕೈ ಬಂಡಿ ಚಿಹ್ನೆ ದೊರಕಿತ್ತು. ಆದರೆ, ಅಂತಿಮವಾಗಿ “ರಣಕಹಳೆ ಊದುತ್ತಿರುವ ರೈತ ಚಿಹ್ನೆ’ಯನ್ನು ಸುಮಲತಾಗೆ ಆಯೋಗ ನೀಡಿದೆ.

ಜನಸೇವೆಗಾಗಿ ಬಂದಿದ್ದೇನೆ
ಸಂಸದನಾಗಿ ಮೆರೆಯಲು ಬಂದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ನನ್ನ ಉದ್ದೇಶ.

ಚುನಾವಣೆಗೆ ಸ್ಪರ್ಧಿಸಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಸದಸ್ಯರು, ಮೂವರು ವಿಧಾನ
ಪರಿಷತ್‌ ಸದಸ್ಯರು ಮತ್ತು ದೇವೇಗೌಡರ ತೀರ್ಮಾನ.

ನಾನು ವಯಸ್ಸಿನಲ್ಲಿ ಚಿಕ್ಕವನಿರಬಹುದು. ರಾಜಕೀಯ ಕುಟುಂಬದಲ್ಲಿ ಬೆಳೆದು
ಬಂದಿರುವುದರಿಂದ ಸಾರ್ವಜನಿಕರ ಸಂಕಷ್ಟ ತಿಳಿದಿದೆ.

ಅಂಬರೀಶ್‌ಗೆ ಬೇಕಿಲ್ಲದ ರಾಜಕೀಯ ಅವರ ಪತ್ನಿಗೆ ಬೇಕಿತ್ತೆ?. ಮನೆಯಿಂದ ಹಣ ತಂದು ಜನಸೇವೆ ಮಾಡುವವರು ನಿಮಗೆ ಬೇಕೋ? ಅಥವಾ ನೀವೇ ನಿಮ್ಮ ಹಣವನ್ನು ಕೊಟ್ಟು ಸಿನಿಮಾ ನೋಡುವವರು ಬೇಕೋ?. ನೀವೇ ನಿರ್ಧರಿಸಿ.
● ಸಾ.ರಾ.ಮಹೇಶ್‌, ಸಚಿವ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.