Ayodhya Temple: ರಾಮಮಂದಿರದ 100 ಬಾಗಿಲು ತಯಾರಿಯಲ್ಲಿ ಹೈದರಾಬಾದ್‌ ಟಿಂಬರ್‌ ತಲ್ಲೀನ…

ಈ ಮರಗಳ ಅಂದಾಜು ವರ್ಷ ನೂರಕ್ಕಿಂತಲೂ ಅಧಿಕ.

Team Udayavani, Dec 15, 2023, 4:28 PM IST

Ayodhya Temple: ರಾಮಮಂದಿರದ 100 ಬಾಗಿಲು ತಯಾರಿಯಲ್ಲಿ ಹೈದರಾಬಾದ್‌ ಟಿಂಬರ್‌ ತಲ್ಲೀನ…

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಅಯೋಧ್ಯೆಯಲ್ಲಿನ ಚಟುವಟಿಕೆ ಕುರಿತ ಮಾಹಿತಿ ಒಂದೊಂದಾಗಿ ಹೊರಬೀಳುತ್ತಿದೆ. ಹೈದರಾಬಾದ್‌ ನ ಪ್ರಸಿದ್ಧ ಟಿಂಬರ್‌ ಸಂಸ್ಥೆಯೊಂದು ರಾಮ ಮಂದಿರಕ್ಕೆ ಒದಗಿಸಬೇಕಾದ 100 ಬಾಗಿಲುಗಳ ತಯಾರಿಯ ಅಂತಿಮ ಹಂತದಲ್ಲಿರುವುದಾಗಿ ತಿಳಿಸಿದೆ.

ಇದನ್ನೂ ಓದಿ:Fruad: ಫೇಸ್‌ಬುಕ್ ನಲ್ಲಿ ಹುಡುಗಿ ಎಂದು ನಂಬಿಸಿ 7 ಲಕ್ಷ ವಂಚಿಸಿದ ತೀರ್ಥಹಳ್ಳಿಯ ಭೂಪ

ಅನುರಾಧ ಟಿಂಬರ್ಸ್‌ ಇಂಟರ್‌ ನ್ಯಾಷನಲ್‌ ಆಡಳಿತ ಪಾಲುದಾರರಾದ ಚಿ.ಶರತ್‌ ಬಾಬು ಅವರು ಅಯೋಧ್ಯೆ ರಾಮಮಂದಿರಕ್ಕಾಗಿ ನೂರು ಬಾಗಿಲುಗಳನ್ನು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಅಯೋಧ್ಯೆ ಮತ್ತು ಹೈದರಾಬಾದ್‌ ನಡುವೆ ಕಳೆದ ಜೂನ್‌ ನಿಂದ ಓಡಾಟ ನಡೆಸುತ್ತಿದ್ದಾರೆ.

ನ್ಯೂಸ್‌ 18 ಜತೆ ಮಾಹಿತಿ ಹಂಚಿಕೊಂಡಿರುವ ಶರತ್‌ ಬಾಬು, ರಾಮಮಂದಿರದ ಬಾಗಿಲುಗಳಿಗಾಗಿ ನಾವು ಸುಮಾರು 3,000 ವರ್ಷಗಳವರೆಗೆ ಬಾಳಿಕೆ ಬರುವ ತೇಗದ ಮರಗಳನ್ನು ಉಪಯೋಗಿಸಿದ್ದೇವೆ. ಅನುಮಾನವೇ ಬೇಡ ನಾವು ಇಂತಹ ಪ್ರಾಜೆಕ್ಟ್‌ ಗಳಿಗೆ ಉತ್ತಮ ಮರಗಳನ್ನೇ ಆಯ್ಕೆ ಮಾಡುತ್ತೇವೆ. ನಮಗೆ ಈ ಗುತ್ತಿಗೆ ಲಭಿಸಿದ ನಂತರ, ಮಹಾರಾಷ್ಟ್ರದ ಬಾಳ್‌ ಹರ್ಷಾ ಅರಣ್ಯದಲ್ಲಿ ತೇಗದ ಮರಗಳನ್ನು ಆಯ್ಕೆ ಮಾಡಿದ್ದೇವು. ಈ ಮರಗಳ ಅಂದಾಜು ವರ್ಷ ನೂರಕ್ಕಿಂತಲೂ ಅಧಿಕ. ಈ ಮರದ ತಿರುಳಿನಲ್ಲಿ ಯಾವುದೇ ಒಡಕಾಗಲಿ, ಟೊಳ್ಳಾಗಲಿ ಇಲ್ಲ. ಅಷ್ಟೇ ಅಲ್ಲ ಬಳಿಕ ಈ ಮರಗಳ ಆಯ್ಕೆಗಾಗಿ ಕಠಿಣ ಪ್ರಕ್ರಿಯೆ ಇದೆ. ತೇಗದ ಮರ ಹವಾಮಾನ ಮತ್ತು ಗೆದ್ದಲು ಸಮಸ್ಯೆಗೆ ಪ್ರತಿರೋಧಕವಾಗಿದೆ.

ಶರತ್‌ ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಈ ಉದ್ಯಮ ನಡೆಸಿಕೊಂಡು ಬರುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಅಯೋಧ್ಯೆ ರಾಮಮಂದಿರ ಟ್ರಸ್ಟ್‌, ಎಲ್‌ & ಟಿ ಮತ್ತು ಟಿಸಿಎಸ್‌ ನಮ್ಮನ್ನು ಸಂಪರ್ಕಿಸಿ, ರಾಮಮಂದಿರದ ಮರದ ಮಾಡೆಲ್‌ ಅನ್ನು ಮಾಡಿಕೊಡುವಂತೆ ತಿಳಿಸಿತ್ತು. ನಾವು ಅದಕ್ಕಾಗಿ ಉತ್ತಮ ಮರಗಳನ್ನು ಬಳಸಿ ಮಾಡೆಲ್‌ ತಯಾರಿಸಿ ಕೊಟ್ಟಿದ್ದೇವು. ಆ ಬಳಿಕ ನಮಗೆ ಬಾಗಿಲುಗಳ ನಿರ್ಮಾಣದ ಕೆಲಸದ ಗುತ್ತಿಗೆ ದೊರಕಿತ್ತು.

ಹೀಗಾಗಿ ಕಳೆದ ಜೂನ್‌ ನಲ್ಲಿ ಅಯೋಧ್ಯೆಯಲ್ಲಿಯೇ ವರ್ಕ್‌ ಶಾಪ್‌ ಮಾಡಿದ್ದು, ಬಹುತೇಕ ಕೆಲಸಗಳು ಪೂರ್ಣಗೊಳ್ಳುತ್ತಾ ಬಂದಿದೆ. ದಾಖಲೆಯ ಅರು ತಿಂಗಳೊಳಗೆ 100 ಬಾಗಿಲುಗಳ ಕಾರ್ಯ ಮುಕ್ತಾಯವಾಗಲಿದೆ. ಅದೇ ರೀತಿ ರಾಮ ಮಂದಿರದ ಮರದ ಮಾದರಿಯನ್ನು ಭಗವಾನ್‌ ಶ್ರೀರಾಮನ ದರ್ಶನ ಪಡೆಯುವ ಮಾರ್ಗದಲ್ಲಿ ಇರಿಸುವ ಮೂಲಕ ನೂತನ ರಾಮಮಂದಿರದ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಶರತ್‌ ಬಾಬು ವಿವರಿಸಿದ್ದಾರೆ.

ಕನ್ಯಾಕುಮಾರಿಯ ಕುಶಲ ಕರ್ಮಿಗಳು ಬಾಗಿಲು ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರು ಭಾರತದ ಪ್ರಸಿದ್ಧ ದೇವಾಲಯಗಳ ಬಾಗಿಲುಗಳ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲಂಕೃತ ಬಾಗಿಲುಗಳಲ್ಲಿ ಆನೆ, ನವಿಲು ಹಾಗೂ ವಿವಿಧ ದೇವರ ಚಿತ್ರಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ನವಿಲಿನ ಚಿತ್ರವಿದೆ. ಇದು ಫೋಲ್ಡ್‌ ಬಾಗಿಲಾಗಿದ್ದು, 8 ಅಡಿ ಎತ್ತರ ಹಾಗೂ 12 ಅಡಿ ಅಗಲವಿದೆ. ಮಂದಿರದ ಆವರಣದಲ್ಲಿ ವಿವಿಧ ಬಗೆಯ ಬಾಗಿಲುಗಳಿವೆ. ಆದರೆ ರಾಮಮಂದಿರದ ಒಳಗಿನ ಎಲ್ಲಾ ಬಾಗಿಲುಗಳು ಚಿನ್ನದ ಲೇಪಿತವಾಗಿದ್ದು, ನೆಲಮಹಡಿಯಲ್ಲಿ 18 ಬಾಗಿಲುಗಳಿವೆ. ಶೀಘ್ರದಲ್ಲೇ ರಾಮಮಂದಿರಕ್ಕೆ ಅಗತ್ಯವಿರುವ ಬಾಗಿಲುಗಳನ್ನು ಸರಬರಾಜು ಮಾಡುತ್ತೇವೆ ಎಂಬುದು ಶರತ್‌ ಬಾಬು ಅವರ ಅಭಿಲಾಷೆಯಾಗಿದೆ.

ಟಾಪ್ ನ್ಯೂಸ್

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

1-qewewq

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.