15 ಗುಂಟೆ ಜಮೀನು, 22 ಟನ್‌ ಇಳುವರಿ, 11ಲಕ್ಷ ಲಾಭ; ರೈತ ನ್ಯಾಮದೇವ ಸಾಧನೆ

ಘಟಪ್ರಭಾ ನರ್ಸರಿಗಳಲ್ಲಿನ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ.

Team Udayavani, Feb 10, 2022, 6:11 PM IST

15 ಗುಂಟೆ ಜಮೀನು, 22 ಟನ್‌ ಇಳುವರಿ, 11ಲಕ್ಷ ಲಾಭ; ರೈತ ನ್ಯಾಮದೇವ ಸಾಧನೆ

ಮಹಾಲಿಂಗಪುರ: ಹತ್ತು ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿರುವ ಸಂದರ್ಭದಲ್ಲಿ ಸಮೀಪದ ಕಪ್ಪಲಗುದ್ದಿ ಗ್ರಾಮದ ಯುವ ರೈತರೊಬ್ಬರು ಅಲ್ಪ ಜಮೀನಿನಲ್ಲೇ ತರಕಾರಿ ಬೆಳೆ ಬೆಳೆದು ಬಂಪರ್‌ ಲಾಭ ಪಡೆದಿದ್ದಾರೆ. ಕಪ್ಪಲಗುದ್ದಿ ಗ್ರಾಮದ ಯುವ ರೈತ ನ್ಯಾಮದೇವ ಸಿದ್ರಾಮ ದಡ್ಡಿಮನಿ ಅವರು, ತರಕಾರಿ ಬೆಳೆ ಡೊಣ್ಣ ಮೆಣಸಿನಕಾಯಿ (ಕ್ಯಾಪ್ಸಿಕಮ್‌) ಬೆಳೆದು ಅ ಧಿಕ ಲಾಭ ಪಡೆದುಕೊಂಡಿದ್ದು, ರೈತರು ಮನಸ್ಸು ಮಾಡಿ ದುಡಿದರೇ ಲಾಭ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ನ್ಯಾಮದೇವ ದಡ್ಡಿಮನಿ ಅವರು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಎಂಬ ಪುಟ್ಟ ಗ್ರಾಮದಲ್ಲಿ 2 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾಗಿದ್ದು, ತಮ್ಮ ಎರಡು ಎಕರೆ ಜಮೀನಿನಲ್ಲಿ ವಾಸದ ಮನೆ, ಜಾನುವಾರುಗಳ ಮನೆ, ಅಂಗಳ ಸೇರಿ 5 ಗುಂಟೆ ಕರಾಬಿ ಹೋಗಿದ್ದು, ಉಳಿದ ಜಮೀನು ಪೈಕಿ 1 ಎಕರೆ ಕಬ್ಬು, 20 ಗುಂಟೆ ಟೊಮ್ಯಾಟೋ ಹಾಗೂ 15 ಜಮೀನಿನಲ್ಲಿ ಡೊಣ್ಣಮೆಣಸು(ಡಬ್ಬು) ಬೆಳೆದಿದ್ದಾರೆ.

ಸ್ಥಳೀಯ ನರ್ಸರಿಯಲ್ಲಿನ ಸಸಿಗಳ ನಾಟಿ: ಸಾಮಾನ್ಯವಾಗಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುವ ರೈತರು ಹೆಚ್ಚಾಗಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ನರ್ಸರಿಗಳಲ್ಲಿನ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ. ಆದರೆ ನ್ಯಾಮದೇವ ದಡ್ಡಿಮನಿಯವರು ಅದೇ ಗ್ರಾಮದ ಇನ್ನೊಬ್ಬ ರೈತ ಅಲ್ಲಪ್ಪ ಬಾಳಪ್ಪ ಹುಳಾನಟ್ಟಿ ಅವರ ಜೈಕಿಸಾನ್‌ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಲಾದ ಇಂಡಸ್‌-11 ತಳಿಯ ಡೊಣ್ಣ ಮೆಣಸು ಸಸಿಗಳನ್ನು ನಾಟಿ ಮಾಡಿದ್ದಾರೆ. ನಿತ್ಯ ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ರೈತ ಅಲ್ಲಪ್ಪ ಬಾಳಪ್ಪ ಹುಳಾನಟ್ಟಿ ಅವರ ನರ್ಸರಿಯಲ್ಲಿನ ಸಸಿ ಹಾಗೂ ಮಾರುಕಟ್ಟೆ ದರ, ಬೇಡಿಕೆ ಹಾಗೂ ನೈಸರ್ಗಿಕ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸಕಾಲಕ್ಕೆ ಡಬ್ಬು ತರಕಾರಿ ಬೆಳೆಯ ಸಸಿಗಳನ್ನು ನಾಟಿ ಮಾಡಿದ್ದರ ಫಲವೇ ಇಂದು ಲಾಭವನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ನ್ಯಾಮದೇವ ದಡ್ಡಿಮನಿ.

ಹುಲುಸಾಗಿ ಬೆಳೆದ ಡಬ್ಬು ಮೇಣಸಿನಕಾಯಿ: ಕೇವಲ 15 ಗುಂಟೆಯಲ್ಲಿ ಸಾಲಿನಿಂದ ಸಾಲಿಗೆ 3 ಅಡಿ, ಸಸಿಯಿಂದ 1 ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಾಂಪೋಸ್ಟ್‌ ಮತ್ತು ಕುರಿಗೊಬ್ಬರವನ್ನು ಹಾಕಿ ನಾಟಿ ಮಾಡಿದ್ದಾರೆ. ಸಸಿಗಳನ್ನು ವಿತರಿಸಿದ ಅಲ್ಲಪ್ಪ ಹುಳಾನಟ್ಟಿ ಅವರ ಮಾರ್ಗದರ್ಶನದಲ್ಲಿ ರೋಗ ಮತ್ತು ಕೀಟಬಾಧೆಯನ್ನು ತಡೆಯಲು ಕ್ರಿಮಿನಾಶಕಗಳನ್ನು ಸಿಂಪಡಿಸಿದ್ದಾರೆ. ಹನಿ ನೀರಾವರಿ ಅಳವಡಿಕೆ ಹಾಗೂ ಹೊದಿಕೆ ಪದ್ಧತಿಯಲ್ಲಿ ತರಕಾರಿ ಬೆಳೆಯ ನಾಟಿ ಮಾಡಿದ್ದರಿಂದ ಡೊಣ್ಣ ಮೆಣಸಿನಕಾಯಿ ಹುಲುಸಾಗಿ ಬೆಳೆದ ಪರಿಣಾಮವಾಗಿ ಇಷ್ಟೊಂದು ಅಧಿಕ ಇಳುವರಿ ಬಂದಿದೆ ಎನ್ನುತ್ತಾರೆ ರೈತ ನ್ಯಾಮದೇವ ತಂದೆ ಸಿದ್ರಾಮ ದಡ್ಡಿಮನಿ.

ಕಡಿಮೆ ಖರ್ಚು ಅಧಿಕ ಲಾಭ: 2021ರ ಆ. 15ರ ನಂತರ ನಾಟಿ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ತರಕಾರಿಯನ್ನು ಬೆಳಗಾವಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. 15 ಗುಂಟೆ ಜಮೀನಿನಲ್ಲಿ ಸಸಿಗಳು, ಕಾಂಪೋಸ್ಟ್‌ ಮತ್ತು ಕುರಿಗೊಬ್ಬರ, ಹನಿ ನೀರಾವರಿ ಅಳವಡಿಕೆ, ಆಳಿನ ಪಗಾರ, ಕ್ರಿಮಿನಾಶಕಗಳ ಸಿಂಪಡಣೆ ಸೇರಿದಂತೆ 6 ತಿಂಗಳಲ್ಲಿ ಒಟ್ಟು 1.20 ಲಕ್ಷ ಖರ್ಚು ಮಾಡಿದ್ದಾರೆ. ಮೂರು ತಿಂಗಳಲ್ಲಿ ಒಟ್ಟು 22 ಟನ್‌ ಗೂ ಅ ಧಿಕ ಇಳುವರಿ ಬಂದಿದ್ದು, ಸರಾಸರಿ ಕೆಜಿ 50ರಿಂದ 60 ರೂ. ಗಳ ದರದಲ್ಲಿ ಮಾರಾಟವಾಗಿದೆ.

ಒಟ್ಟು 12.20 ಲಕ್ಷ ರೂ.ಗಳ ತರಕಾರಿ ಮಾರಾಟ ಮಾಡಿದ್ದಾರೆ. ಅದರಲ್ಲಿ ಖರ್ಚು 1.20 ಲಕ್ಷ ಕಳೆದು ನಿವ್ವಳ 11 ಲಕ್ಷ ರೂ.ಗಳ ಆದಾಯ ಗಳಿಸುವ ಮೂಲಕ ಕಪ್ಪಲಗುದ್ದಿಯ ನ್ಯಾಮದೇವ ದಡ್ಡಿಮನಿಯವರು ಇಂದಿನ ಯುವ ರೈತರಿಗೆ ಮಾದರಿಯಾಗಿದ್ದಾರೆ. ರೈತರು ಲಾಭದಾಯಕ ತರಕಾರಿ ಕೃಷಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನ್ಯಾಮದೇವ ಸಿದ್ರಾಮ ದಡ್ಡಿಮನಿ. ಸಾ. ಕಪ್ಪಲಗುದ್ದಿ, ತಾ| ರಾಯಭಾಗ, ಜಿ| ಬೆಳಗಾವಿ ಮೋ: 9972952046, 9902866416 ಗೆ ಸಂಪರ್ಕಿಸಬಹುದಾಗಿದೆ.

ನಾನು ಮತ್ತು ಅಲ್ಲಪ್ಪ ಹುಳಾನಟ್ಟಿ ನಮ್ಮ ಕಪ್ಪಲಗುದ್ದಿ ಗ್ರಾಮದ ಪರಪ್ಪ ಅಲ್ಲಪ್ಪ ಬಂಗಿ ಅವರ ಹೊಲ ಕೂಲಿ ಕೆಲಸ ಮಾಡುತ್ತಿದ್ದವರು. ಮುಂದೆ ಅವರ ಹೊಲವನ್ನು ಪಾಲುದಾರಿಕೆಯಲ್ಲಿ ಮಾಡಿಕೊಂಡು, ಅವರ ಮಾರ್ಗದರ್ಶನದಲ್ಲಿಯೇ ನಾವು ಕೃಷಿಯನ್ನು ಪ್ರಾರಂಭಿಸಿದವರು. ನಮ್ಮ ಈ ಸಾಧನೆಯ ಹಿಂದಿನ ಶಕ್ತಿ ಅವರೇ. ಕೇವಲ 15 ಗುಂಟೆ ಜಮೀನಿನಲ್ಲಿ ಕೇವಲ ಆರು ತಿಂಗಳಲ್ಲಿ 22 ಟನ್‌ ಇಳುವರಿ ಬಂದು, 11 ಲಕ್ಷ ಲಾಭವನ್ನು ಕಂಡಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಭೂತಾಯಿ ಕೃಪೆ ಬಹಳ ದೊಡ್ಡಲು, ನಾವು ಕಷ್ಟಪಟ್ಟು ದುಡಿದರೇ ಕೃಷಿ ಲಾಭ ನಿಶ್ಚಿತ.
ನ್ಯಾಮದೇವ ಸಿದ್ರಾಮ ದಡ್ಡಿಮನಿ,
ಸಾಧಕ ರೈತ

*ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.