Actor Darshan Bail: ನಟ ದರ್ಶನ್ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?
ಸಾಕ್ಷಿಗಳ ಮೊಬೈಲ್ ಟವರ್ ಲೊಕೇಷನ್ ಪಟ್ಟಣಗೆರೆ ಶೆಡ್ ಬಳಿ ಸಿಕ್ಕಿದೆ...
Team Udayavani, Oct 10, 2024, 12:44 PM IST
ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ 57ನೇ ಸಿಸಿಎಚ್ ನ್ಯಾಯಾಲಯವು ಗುರುವಾರ ಅರ್ಜಿ ವಿಚಾರಣೆ ನಡೆಸುತ್ತಿದೆ. ಸದ್ಯಕ್ಕೆ ದಾಸನಿಗೆ ಜಾಮೀನು ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಜೈಲಿನಲ್ಲೇ ದರ್ಶನ್ ದಸರಾ ಹಬ್ಬ ಆಚರಿಸಬೇಕಾಗಿದೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಮಂಗಳವಾರ, ಬುಧವಾರ ಪ್ರತಿ ವಾದ ಮಂಡಿಸಿರುವ ಎಸ್ಪಿಪಿ ಪ್ರಸನ್ನ ಕುಮಾರ್, ಅವರ ಪ್ರಶ್ನೆ ಹಾಗೂ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಕ್ಕೆ ಪ್ರತಿವಾದ ಮಂಡಿಸುತ್ತಿದ್ದಾರೆ.
ಇನ್ನು ರೇಣುಕಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟ ಪ್ರಸನ್ನ ಕುಮಾರ್, ಮಹಜರು, ಮರಣೋತ್ತರ ಪರೀಕ್ಷೆ ಮಾಡುವಾಗ ಸಂಬಂಧಿಗಳು ಇರಬೇಕು. ತಡವಾಗಿ ಮರಣೋತ್ತರ ಪರೀಕ್ಷೆ ಮಾಡಿರುವುದರಿಂದ ತನಿಖೆಗೆ ಸಮಸ್ಯೆ ಆಗಲಿಲ್ಲ. ಮುಖದ ಮೇಲಿದ್ದಿದ್ದು ಮಾತ್ರವೇ ನಾಯಿ ಕಚ್ಚಿದ ಗುರುತು, ಇನ್ನುಳಿದ ಭಾಗಗಳಲ್ಲಿದ್ದ 13 ಗಾಯಗಳು ಮರಣಕ್ಕೆ ಪೂರ್ವದ್ದು ಎಂದು ವರದಿ ಹೇಳಿದೆ ಎಂದು ವಾದಿಸಿದರು.
ಮರ್ಮಾಂಗಕ್ಕೆ ಒದ್ದ ದರ್ಶನ್: ದರ್ಶನ್ ರೇಣುಕಾಸ್ವಾಮಿ ಎದೆಗೆ, ಮರ್ಮಾಂಗಕ್ಕೂ ಒದ್ದಿರುವುದಾಗಿ ಸಾಕ್ಷಿಗಳು ಹೇಳಿಕೆ ನೀಡಿ
ದ್ದಾರೆ ಎಂಬ ಅಂಶವನ್ನು ಪ್ರಸನ್ನ ಕುಮಾರ್ ವಾದದ ವೇಳೆ ಉಲ್ಲೇಖೀಸಿದ್ದಾರೆ. ಸಾಕ್ಷಿಗಳ ಮೊಬೈಲ್ ಟವರ್ ಲೊಕೇಷನ್ ಪಟ್ಟಣಗೆರೆ ಶೆಡ್ ಬಳಿ ಸಿಕ್ಕಿದೆ ಎಂದು ವಾದಿಸಿದರು.
ದರ್ಶನ್ ಬಟ್ಟೆ ರೇಣುಕಸ್ವಾಮಿ ಡಿಎನ್ಎಗೆ ಹೋಲಿಕೆ:ಹತ್ಯೆಯ ಷಡ್ಯಂತ್ರದ ಬಗ್ಗೆ ದರ್ಶನ್ಗೆ ಅರಿವಿತ್ತು. ದರ್ಶನ್ ಶೂನಲ್ಲಿದ್ದ ಮಣ್ಣಿನ ಮಾದರಿ ಸಂಗ್ರಹಿಸಲಾಗಿದ್ದು, ಇದು ಕೃತ್ಯದ ಸ್ಥಳದ ಮಣ್ಣಿಗೆ ಹೋಲಿಕೆ ಆಗಿದೆ.
ದರ್ಶನ್ ಧರಿಸಿದ್ದ ಬಟ್ಟೆಯನ್ನು ಒಗೆದಿದ್ದರಿಂದ ರಕ್ತದ ಕಲೆಯಿರಲು ಸಾಧ್ಯವೇ? ಎಂಬ ಆರೋಪಿ ಪರ ವಕೀಲರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪ್ರಸನ್ನ ಕುಮಾರ್, ದರ್ಶನ್ ಬಟ್ಟೆ ಒಗೆಯಲು ಮನೆ ಕೆಲಸದ ವರಿಗೆ ಪವನ್ ಸೂಚಿಸಿದ್ದ. ಬಟ್ಟೆ ಒಗೆದ ಮೇಲೂ ಬರಿಗಣ್ಣಿಗೆ ಕಾಣದ ಅಂಶವು ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. ದರ್ಶನ್, ಪವಿತ್ರಾಗೌಡ, ರವಿ ಸೇರಿದಂತೆ ಇನ್ನಿತರು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳ ಬಗ್ಗೆ ಎಫ್ಎಸ್ಎಲ್ನಿಂದ ಬಂದ ವರದಿಯಲ್ಲಿ ರೇಣುಕಸ್ವಾಮಿ ಡಿಎನ್ಎಗೆ
ಹೋಲಿಕೆಯಾಗಿದೆ ಎಂದರು. ಕೊಲೆ ನಡೆದ ಸ್ಥಳದಲ್ಲಿ 96 ವಸ್ತು ವಶಪಡಿಸಿಕೊಳ್ಳಲಾಗಿದೆ. ಒಂದೆರಡು ಮರದ ಕೊಂಬೆಗಳಲ್ಲಿ ರಕ್ತದ ಕಲೆ ಇಲ್ಲ ಎಂದ ಮಾತ್ರಕ್ಕೆ ಮಹಜರು ಸರಿ ಯಿಲ್ಲ ಎಂದು ಹೇಳಲಾಗುವುದಿಲ್ಲ ಎಂದರು.
ಅ.14ಕ್ಕೆ ಪವಿತ್ರಾ ಗೌಡ, ಇತರರ ಬೇಲ್ ಭವಿಷ್ಯ
ಎ1 ಪವಿತ್ರಾ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು, ಎ12 ಲಕ್ಷಣ್ಗೆ ಜಾಮೀನು ನೀಡಬಾರದು. ಎ13 ದೀಪಕ್ ವಿರುದ್ಧ ಸಾಕ್ಷ್ಯ ನಾಶದ ಆರೋಪವಿದೆ. ಹೀಗಾಗಿ ಜಾಮೀನು ನೀಡಬಹುದು ಎಂದು ಪ್ರಸನ್ನ ಕುಮಾರ್ ಕೋರ್ಟ್ ಮುಂದೆ ವಾದಿಸಿದ್ದಾರೆ. ರವಿ, ನಾಗರಾಜ್, ಲಕ್ಷ್ಮಣ್, ದೀಪಕ್ ಇತರರ ಜಾಮೀನು ಆದೇಶ ಅ.14ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪ್ರದೋಷ್
Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ
Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್ ಬಹಿರಂಗ: ಸಂತ್ರಸ್ತೆ
Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Find On Investigation: ವಾಲ್ಮೀಕಿ ಹಗರಣ ಸೂತ್ರಧಾರ ಮಾಜಿ ಸಚಿವ ಬಿ.ನಾಗೇಂದ್ರ: ಇ.ಡಿ.
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Newborn Baby: ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಪತ್ತೆ, ನೈರ್ಮಲ್ಯ ಕಾರ್ಯಕರ್ತರಿಂದ ರಕ್ಷಣೆ
Puttur: ಸುಧಾರಣೆ ನಿರೀಕ್ಷೆಯಲ್ಲಿ ಕಬಕ-ಪುತ್ತೂರು ರೈಲು ನಿಲ್ದಾಣ
Jimmy Tata:ಮೊಬೈಲ್ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್ ಟಾಟಾ ಸಹೋದರನ ಬಗ್ಗೆ ಗೊತ್ತಾ?
Puttur:ಇಲ್ಲಿ ವೇಷಗಳಿಗೆ ಪ್ರವೇಶವಿಲ್ಲ;ನೇಮದ ದಿನ ವ್ಯಾಪಾರವಿಲ್ಲ, ಎಲ್ಲವೂ ಉಚಿತವಾಗಿ ವಿತರಣೆ
Ratan Tata; ಉದ್ಯಮ ರಂಗದ ಭೀಷ್ಮ, ಅಮೂಲ್ಯ ರತುನ: ಜಗದಗಲ ಕೀರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.