![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jan 11, 2024, 12:42 PM IST
ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾವಣೆ ಕಂಡಿದೆ. ಅಷ್ಟೇ ಅಲ್ಲ ಭಾರತವನ್ನು ದುರ್ಬಲ ಆರ್ಥಿಕ ದೇಶ ಎಂದು ಪರಿಗಣಿಸುತ್ತಿದ್ದ ಚೀನಾದಂತಹ ದೇಶಗಳು ಕೂಡಾ ತಮ್ಮ ನಿಲುವನ್ನು ಬದಲಾಯಿಸಿಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:Lesbian Couple: ಪರಸ್ಪರ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ
ಅವರು ಬ್ರಿಟನ್ ನಲ್ಲಿ ಭಾರತೀಯ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತ, ಭಾರತದ ಬಗೆಗಿನ ಚೀನಾ ನಿಲುವಿನಲ್ಲಿ ಭಾರೀ ಬದಲಾವಣೆಯಾಗಿದೆ. ಗಾಲ್ವಾನ್ ಸಂಘರ್ಷದ ನಂತರ ಭಾರತ ದುರ್ಬಲ ದೇಶವಲ್ಲ ಎಂಬುದನ್ನು ಚೀನಾ ಮನಗಂಡಿದೆ. ಚೀನಾ ಈಗ ಭಾರತವನ್ನು ಪ್ರತಿಸ್ಪರ್ಧಿ ಎಂಬುದಾಗಿ ಪರಿಗಣಿಸಿದೆ. ಆದರೆ ನಾವು ಚೀನಾವನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ಆದರೂ ಜಾಗತಿಕವಾಗಿ ನಾವು ಎಲ್ಲಾ ನೆರೆಯ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಸಿಂಗ್ ಹೇಳಿದರು.
2020ರಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟಾಗ ಗಾಲ್ವಾನ್ ನಲ್ಲಿ ನಮ್ಮ ಯೋಧರು ಸಮರ್ಥವಾಗಿ ಎದುರಿಸಿತ್ತು. ಈ ಕಾರಣದಿಂದಾಗಿಯೇ ಚೀನಾ ಭಾರತದ ಬಗೆಗಿನ ನಿಲುವನ್ನು ಬದಲಾಯಿಸಿಕೊಂಡಿದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
#WATCH | London, UK: Defence Minister Rajnath Singh says, ” China is considered as the opponent of China, we don’t consider China as our opponent, maybe China considers so. We don’t consider anyone as our opponent…in 2020, a faceoff happened between India and China, and the… pic.twitter.com/2oG9GqTHH0
— ANI (@ANI) January 10, 2024
ಇತ್ತೀಚೆಗೆ ಚೀನಾ ಸ್ವಾಯತ್ತೆಯ ಗ್ಲೋಬಲ್ ಟೈಮ್ಸ್ ನಲ್ಲಿ ಪ್ರಕಟವಾದ ಲೇಖನ ಭಾರತದ ಕುರಿತ ಚೀನಾ ನಿಲುವಿನಲ್ಲಿನ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಸಿಂಗ್ ಉದಾಹರಣೆ ನೀಡಿದರು. ಲೇಖನದಲ್ಲಿ ಚೀನಾ ಸರ್ಕಾರ ಕೂಡಾ ನಮ್ಮ ಆರ್ಥಿಕ ಮತ್ತು ವಿದೇಶಾಂಗ ನೀತಿಯನ್ನು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ ಎಂದರು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.