Agriculture: ರೈತರ ನಿತ್ಯ ಬವಣೆ ತಪ್ಪಿಸುವ ಕೃಷಿ ಸೆಂಟ್ರಲ್‌ ಆ್ಯಪ್‌

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ವಿನಯ್‌ ಶಿವಪ್ಪರಿಂದ ಅಪ್ಲಿಕೇಶನ್‌ ಅಭಿವೃದ್ಧಿ

Team Udayavani, Jul 28, 2024, 7:25 AM IST

Agriculture: ರೈತರ ನಿತ್ಯ ಬವಣೆ ತಪ್ಪಿಸುವ ಕೃಷಿ ಸೆಂಟ್ರಲ್‌ ಆ್ಯಪ್‌

ಬೆಂಗಳೂರು: ಯಾವುದೇ ಮಧ್ಯವರ್ತಿಗಳ ಆವಶ್ಯಕತೆಯಿಲ್ಲದೆ ನೇರವಾಗಿ ರೈತರಿಂದ ರೈತರಿಗಾಗಿ ಕೃಷಿ ಉಪಕರಣಗಳು, ಹಸು, ಕುರಿ, ಮೇವು ಇತ್ಯಾದಿಗಳ ಖರೀದಿ-ಮಾರಾಟಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲಿಗೆ ಪ್ರಾರಂಭವಾಗಿರುವ ಅಪ್ಲಿಕೇಶನ್‌ “ಕೃಷಿ ಸೆಂಟ್ರಲ್‌’.

ಇದೊಂದು ಡಿಜಿಟಲ್‌ ಮಾರುಕಟ್ಟೆ; ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ವಿನಯ್‌ ಶಿವಪ್ಪ ಅಭಿವೃದ್ಧಿಪಡಿಸಿದ್ದಾರೆ. ಪ್ಲೇಸ್ಟೋರ್‌ನಲ್ಲಿ ಸಿಗಲಿದ್ದು, ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿದೆ. ಸಂಪೂರ್ಣ ಉಚಿತವಾಗಿದೆ.
ಮೂಲತಃ ರೈತ ಕುಟುಂಬದವರಾದ ವಿನಯ್‌ ಶಿವಪ್ಪ ತಮ್ಮ ತೆಂಗಿನ ತೋಟಕ್ಕೆ ಸಗಣಿ ಗೊಬ್ಬರದ ಅವಶ್ಯಕತೆ ಬಂದಾಗ ಸುತ್ತಲಿನ ರೈತರನ್ನು ಸಂಪರ್ಕಿಸಿದರು. ಆದರೆ ಗುಣಮಟ್ಟ ಹಾಗೂ ಬೇಕಾದ ಪ್ರಮಾಣದ ಗೊಬ್ಬರ ತಿಂಗಳಾದರೂ ಸಿಗಲಿಲ್ಲ.

ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯೂ ದೊರೆಯಲಿಲ್ಲ. ಇದರಿಂದ ಪ್ರೇರಿತನಾಗಿ ರೈತರ ಇಂತಹ ಸಮಸ್ಯೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೂತಲ್ಲಿಯೇ ಕೃಷಿ ಸಂಬಂಧಿಸಿದ ಮಾಹಿತಿ ತಿಳಿಯಲು “ಕೃಷಿ ಸೆಂಟ್ರಲ್‌’ ಅಪ್ಲಿಕೇಶನ್‌ ಅನ್ನು ಕಳೆದ ಫೆಬ್ರವರಿಯಲ್ಲಿ ಪ್ರಾರಂಭಿಸಿದೆ ಎನ್ನುತ್ತಾರೆ ಅವರು.

ರೈತರಿಗೇನು ಉಪಯೋಗ
ರೈತರು ಬೆಳೆದ ಉತ್ಪನ್ನಗಳು, ಕೃಷಿ ಉತ್ಪನ್ನಗಳು, ಯಂತ್ರೋಪಕರಣಗಳ ಬಳಕೆ, ಸೋಲಾರ್‌ ಸೇವೆ, ರಸಗೊಬ್ಬರಗಳ ಬಳಕೆ, ಡ್ರೋನ್‌ ಮೂಲಕ ಔಷಧ ಸಿಂಪಡಣೆ, ತೆಂಗು, ಅಡಿಕೆ ಕೊಯ್ಯುವುದು ಸೇರಿದಂತೆ ವಿವಿಧ ಜಾತಿಯ ಹಸು, ಮೇಕೆ, ಕುರಿ, ಕೋಳಿ, ಭತ್ತದ ಹುಲ್ಲು ಹಾಗೂ ಇತರ ಮೇವಿನ ಮಾರಾಟ ಅಥವಾ ಖರೀದಿಯನ್ನು ಈ ವೇದಿಕೆ ಸುಲಭಗೊಳಿಸಿದೆ.

ಇದರೊಂದಿಗೆ ವಿವಿಧ ಜಿಲ್ಲೆಗಳ ಜಾನುವಾರು ಮಾರಾಟ ಮತ್ತು ಅವುಗಳ ಬೆಲೆ ದವಸ-ಧಾನ್ಯಗಳ ದೈನಂದಿನ ಮಾರುಕಟ್ಟೆ ದರವನ್ನು ರೈತರು ತಿಳಿಯಬಹುದಾಗಿದೆ. ಖರೀದಿಸುವವರು ಮತ್ತು ಮಾರಾಟ ಮಾಡುವವರೇ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಇದಲ್ಲದೆ ಬೆಳೆಗಳು ರೋಗಕ್ಕೆ ತುತ್ತಾದಾಗ, ರೈತರು ರೋಗಕ್ಕೆ ಒಳಪಟ್ಟಿರುವ ಎಲೆ, ಕಾಂಡದ ಫೋಟೋವನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಿ ಸಲಹೆ ಕೇಳಿದರೆ ತಜ್ಞರಿಂದ ಮಾಹಿತಿ ಹಾಗೂ ಪರಿಹಾರ ಸಿಗುತ್ತದೆ.
ಒಂದು ಬೆಳೆಗೆ ಹಾಕಿದ ಬಂಡವಾಳ ಹಾಗೂ ಆದಾಯದ ಮಾಹಿತಿಯೂ ಇಲ್ಲಿ ಲಭ್ಯವಾಗುತ್ತದೆ. ಸಂಪೂರ್ಣ ಮಾಹಿತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಆ್ಯಪ್‌ಗೆ ಸಾವಿರಕ್ಕೂ ಹೆಚ್ಚು ಕರೆಗಳು ಬಂದಿದ್ದು, 300ಕ್ಕೂ ಹೆಚ್ಚು ವಸ್ತುಗಳನ್ನು ಪಟ್ಟಿ ಮಾಡಲಾಗಿದೆ.

“ಕೃಷಿ ಸೆಂಟ್ರಲ್‌’ ಎಂಬ ಅಪ್ಲಿಕೇಶನ್‌ ಸಂಪೂರ್ಣವಾಗಿ ರೈತರಿಂದ ರೈತರಿಗಾಗಿ ನಿರ್ಮಿಸಲಾಗಿದ್ದು ಉಚಿತವಾಗಿದೆ. ಈಗಾಗಲೇ ಅನೇಕರು ತಮ್ಮ ಉತ್ಪನ್ನ ಅಥವಾ ಮಾರಾಟ ಮಾಡುವ ಹಾಗೂ ಖರೀದಿಸಬೇಕಾದ ಅಂಶಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಕೆಲವರು ರೋಗಗಳಿಗೆ ತುತ್ತಾಗಿರುವ ಬೆಳೆ ಫೋಟೋ ಕಳುಹಿಸಿ ಪರಿಹಾರವನ್ನು ಕೇಳಿದ್ದಾರೆ. ಹಸು, ಕುರಿ ಮಾರಾಟ ಮಾಡಲಾಗಿದೆ. ಅದರಲ್ಲಿಯೂ ಶೇ.7ರಷ್ಟು ಮಹಿಳಾ ರೈತರು ಇದನ್ನು ಬಳಸುತ್ತಿದ್ದಾರೆ. ಇದು ರೈತರಿಗೆ ತುಂಬಾ ಉಪಯುಕ್ತವಾಗಿದೆ.” -ವಿನಯ್‌ ಶಿವಪ್ಪ , ಕೃಷಿ ಸೆಂಟ್ರಲ್‌ ಆ್ಯಪ್‌ ಸಂಸ್ಥಾಪಕ

ಆ್ಯಪ್‌ನ ಲಾಭಗಳೇನು?
– ಕೃಷಿ ಚಟುವಟಿಗೆ ನೆರವಾಗಲೆಂದೇ ಸಿದ್ಧಪಡಿಸಿದ ಆ್ಯಪ್‌
– ರೈತರಿಗೆ ಉಚಿತ ಹಾಗೂ ಸಂಪೂರ್ಣ ಮಾಹಿತಿ
– ಮಧ್ಯವರ್ತಿಗಳ ಹಸ್ತಕ್ಷೇಪ ಮುಕ್ತ
–  ಒಂದೇ ಸೂರಿನಡಿಯಲ್ಲಿ ಹಲವು ಮಾಹಿತಿಗಳು

 

– ಭಾರತಿ ಸಜ್ಜನ್‌

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.