Tamilnadu Assembly: ವಿಪಕ್ಷ ನಾಯಕ ಪಳನಿಸ್ವಾಮಿ ಸೇರಿ AIADMK ಶಾಸಕರು ಅಮಾನತು
ಕಲ್ಲಕುರುಚಿಯಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸುಮಾರು 58 ಜನರು ಸಾವನ್ನಪ್ಪಿದ್ದರು.
Team Udayavani, Jun 26, 2024, 4:17 PM IST
ಚೆನ್ನೈ: ವಿಧಾನಸಭಾ ಕಲಾಪಕ್ಕೆ ಪದೇ, ಪದೇ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿದಂತೆ ಎಐಎಡಿಎಂಕೆಯ ಶಾಸಕರನ್ನು ಪ್ರಸ್ತುತ ನಡೆಯುತ್ತಿರುವ ಕಲಾಪದ ಅಂತ್ಯದವರೆಗೂ ಅಮಾನತುಗೊಳಿಸಿರುವುದಾಗಿ ವರದಿ ತಿಳಿಸಿದೆ.
ಒಂದು ದಿನದ ಅಮಾನತು ಶಿಕ್ಷೆಯ ನಂತರ ಬುಧವಾರ (ಜೂನ್ 26) ವಿಧಾನಸಭಾ ಕಲಾಪಕ್ಕೆ ಕಪ್ಪುಬಟ್ಟೆ ಧರಿಸಿ ಬಂದ ವಿಪಕ್ಷ ಸದಸ್ಯರು, ಇಂದೂ ಕೂಡಾ ಕಲ್ಲಕುರುಚಿ ಕಳ್ಳಭಟ್ಟಿ ಸಾರಾಯಿ ಪ್ರಕರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಘೋಷಣೆ ಕೂಗಿದ್ದರು.
ಈ ಸಂದರ್ಭದಲ್ಲಿ ಸ್ಪೀಕರ್ ಎಂ.ಅಪ್ಪಾವು ಅವರು ಈ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ ಎಐಎಡಿಎಂಕೆ ಶಾಸಕರು ಇದೊಂದು ಮುಖ್ಯವಾದ ವಿಷಯವಾಗಿದ್ದು, ಕೂಡಲೇ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು.
ಸದಸ್ಯರು ಕಲಾಪದಲ್ಲಿ ಕೋಲಾಹಲ ನಡೆಸದೇ, ತಮ್ಮ ಸ್ಥಾನಗಳಿಗೆ ಮರಳುವಂತೆ ಸ್ಪೀಕರ್ ಮನವಿ ಮಾಡಿಕೊಂಡಿದ್ದರು. ಕೊನೆಗೆ ಗದ್ದಲ ಮುಂದುವರಿಸಿದಾಗ ಎಐಎಡಿಎಂಕೆ ಶಾಸಕರುಗಳನ್ನು ಜೂನ್ 29ರವರೆಗೆ ನಡೆಯಲಿರುವ ಕಲಾಪದವರೆಗೆ ಅಮಾನತುಗೊಳಿಸುವಂತೆ ಸದನದಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯ್ತು ಎಂದು ವರದಿ ವಿವರಿಸಿದೆ.
ಜೂನ್ 19ರಂದು ಕಲ್ಲಕುರುಚಿಯಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸುಮಾರು 58 ಜನರು ಸಾವನ್ನಪ್ಪಿದ್ದರು. ಆದರೂ ಇನ್ನಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ
Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ
Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ… ನಾಲ್ವರು ಮೃತ್ಯು, ನೆರವು ಘೋಷಿಸಿದ ಸಿಎಂ
Flash Floods: ಸೇನಾ ಸಮರಾಭ್ಯಾಸದ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ
Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ
MUST WATCH
ಹೊಸ ಸೇರ್ಪಡೆ
Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ
Mudigere: ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು… ನಾಲ್ವರಿಗೆ ಸಣ್ಣ ಪುಟ್ಟ ಗಾಯ
Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು
ICC T20 World Cup; ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್. ಸೀತಾರಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.