ರಾಮ್ ಲೀಲಾ ಸಮಯದಲ್ಲಿ ರಸ್ತೆಗಳಲ್ಲಿ ಪಾನಿ ಪುರಿ ಮಾರಿದ್ದ ಹುಡುಗ ತೆಂಡೂಲ್ಕರ್ ದಾಖಲೆ ಮುರಿದ!

ಪಾನಿಪುರಿ ಮಾರುತ್ತಿದ್ದ ಹುಡುಗ ಇಂದು ಭಾರತದ ಹೊಸ ಸೆನ್ಸೇಶನ್

ಕೀರ್ತನ್ ಶೆಟ್ಟಿ ಬೋಳ, May 28, 2019, 5:15 PM IST

yashasvi-jaisval

ಮುಂಬೈ ನಗರವೇ ಹಾಗೆ. ಅದೊಂದು ಮಾಯಾ ನಗರಿ. ತನ್ನ ಬಳಿ ಬಂದವರನ್ನೆಲ್ಲ ತಬ್ಬಿಕೊಳ್ಳುತ್ತೆ. ಹಸಿವು ಅರಸಿ ಬಂದವರು, ಬದುಕು ಅರಸಿ ಬಂದವರು, ಕನಸು ಅರಸಿ ಬಂದವರು ಹೀಗೆ ಈ ಕನಸಿನ ನಗರಿಗೆ ಪ್ರತಿ ದಿನ ಸಾವಿರಾರು ಜನ ಬರುತ್ತಾರೆ. ಹಾಗೆಯೇ ಆ ಜನರ ನಡುವೆ ಅಂದು ಬಂದಿದ್ದ ನಮ್ಮ ಹೀರೋ .

ಅವನ ಕಣ್ಣಲ್ಲಿ ಕನಸಿತ್ತು. ಸಾಧಿಸಬೇಕೆಂಬ ಹಠವಿತ್ತು. ಅಗಾಧ ಹಸಿವಿತ್ತು. ಆದರೆ ಆ ಹಸಿವು ಕಣ್ಣಿಲ್ಲಿ ಮಾತ್ರವಲ್ಲ ಹೊಟ್ಟೆಯಲ್ಲೂ ಇತ್ತು. ‘ಕೆಜಿಎಫ್’ ಚಿತ್ರದ ಹೀರೋ ಚಿಕ್ಕ ಪ್ರಾಯದಲ್ಲಿ ಮುಂಬೈಗೆ ಹೋದಾಗ ಅವನ ಕಣ್ಣಲ್ಲಿ ಒಂದು ಕನಸಿತ್ತಲ್ಲ. ಅಡ್ಡ ಬಂದವುಗಳನ್ನು ಸುಟ್ಟು ಬಿಡುವಂತಹ ತೀವ್ರವಾದ ಕನಸದು. ಅಂತಹದೇ ಕನಸು ಈ ಕಥೆಯ ಹೀರೋನದ್ದು. ಆದರೆ ಗುರಿ ಮಾತ್ರ ಬೇರೆ ಬೇರೆ.

ಪಟ್ಟ ಪ್ರತೀ ಕಷ್ಟ, ಅವಮಾನ, ನೋವು ಮುಂದೆ ಒಂದು ದಿನ ಮೆಟ್ಟಿಲುಗಳಾಗಿ ನಮ್ಮ ಸಾಧನೆಯ ಶಿಖರವನ್ನು ಏರಲು ಸಹಾಯ ಮಾಡುತ್ತವೆ. ಅಲ್ಲಿಯವರೆಗೆ ನಾವು ಸಹನೆಯಿಂದ ಇರಬೇಕಷ್ಟೇ. ಅಂದಹಾಗೆ ನಮ್ಮ ಇಂದಿನ ಕಥೆಯ ಹೀರೋ 17 ರ ಹುಡುಗ ಯಶಸ್ವಿ ಜೈಸ್ವಾಲ್. ವಿಜಯ್ ಹಜಾರೆ ಟ್ರೋಫಿಯಲ್ಲಿ  ಮೊನ್ನೆ ಮೊನ್ನೆ  ದ್ವಿಶತಕ ಬಾರಿಸಿದ ಯವ ಪ್ರತಿಭೆ.

ಯಶಸ್ವಿ ಜೈಸ್ವಾಲ್ ಹುಟ್ಟಿದ್ದು 2001ರ ಡಿಸೆಂಬರ್ 28ರಂದು. ತಂದೆ ಭೂಪೇಂದ್ರ ಜೈಸ್ವಾಲ್. ತಾಯಿ ಕಾಂಚನ. ಅದು 2012ನೇ ಇಸವಿ. ಉತ್ತರ ಪ್ರದೇಶದ ಭದೋಹಿ ಎಂಬ ಊರಿನಿಂದ 12 ವರ್ಷದ ಹುಡುಗ ಯಶಸ್ವಿ ಜೈಸ್ವಾಲ್ ಮುಂಬೈ ಮಹಾನಗರಿಗೆ ಕಾಲಿಡುತ್ತಾನೆ. ಕಣ್ಣ ತುಂಬಾ ಕ್ರಿಕೆಟರ್ ಆಗಬೇಕೆಂಬ ಕನಸು. ಮುಂಬೈಗೆ ಹೋಗಿ ಅಲ್ಲಿ ಕ್ರಿಕೆಟ್ ಆಡಿದರೆ ಸಚಿನ್ ತೆಂಡೂಲ್ಕರ್ ನಂತೆ ಆಗುತ್ತೇನೆಂದು ಬಂದ ಪುಟ್ಟ ಹುಡುಗನಿಗೆ ವಾಸ್ತವದ ಅರಿವಿರಲಿಲ್ಲ.

ಮೆಟ್ರೋ ರೈಲಿಗಿಂತ ವೇಗವಾಗಿ ಓಡುವ ಮುಂಬೈ ಶಹರದಲ್ಲಿ ಜೈಸ್ವಾಲ್ ಒಬ್ಬಂಟಿಗನಾಗಿದ್ದ. ಎದುರಲ್ಲಿ ನೂರಾರು ಜನರಿದ್ದರೂ ಒಬ್ಬನ ಪರಿಚಯವೂ ಈತನಿಗಿಲ್ಲ. ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳ ಎದುರಿನ ಜೋಪಡಿಯೂ ಇಲ್ಲ ಈತನ ತಲೆಗೆ ಸೂರಾಗಲು. ಅನ್ನ ಆಹಾರವೂ ಇಲ್ಲ.  ಊಟ ಮಾಡಿದೆಯಾ ನಿದ್ದೆ ಮಾಡಿದೆಯಾ ಎಂದು ಕೇಳುವವರಿಲ್ಲ.  ಅಲ್ಲಿಗೆ ಬ್ಯಾಟ್ ಬಾಲ್ ಹಿಡಿದು ಮೆರೆಯಬೇಕು ಎಂದು ಬಂದವ ಇರಲು ಒಂದು ಸೂರಿಲ್ಲದೆ, ಒಪ್ಪೊತ್ತು ಊಟವಿಲ್ಲದೆ ಕಂಗಾಲಾಗಿದ್ದ.

ಹೀಗೆ ಒಂದು ದಿನ ಕುಲ್ಬಾ ದೇವಿಯ ಡೈರಿಯೊಂದರಲ್ಲಿ ಜೈಸ್ವಾಲ್ ಗೆ ನಿಲ್ಲಲು ಜಾಗ ಸಿಕ್ಕಿತು. ಆದರೆ ಆತ ಡೈರಿ ಕೆಲಸ ಮಾಡಬೇಕಿತ್ತು . ಆದರೆ ಕೆಲವೇ ದಿನಗಳಲ್ಲಿ ಈತ ಡೈರಿ ಕೆಲಸಕ್ಕೆ ಲಾಯಕ್ಕಿಲ್ಲ ಎಂದು ಮಾಲೀಕ ಅಲ್ಲಿಂದ ಹೊರದಬ್ಬಿದ್ದ. ಮುಂಬೈನಲ್ಲಿದ್ದ ಓರ್ವ ಸಂಬಂಧಿಯ ಮನೆಯಲ್ಲಿ ಕೆಲವು ದಿನ ಜೈಸ್ವಾಲ್ ಆಶ್ರಯ ಪಡೆದ. ಆದರೆ ಜೈಸ್ವಾಲ್ ನ ಯೋಗದಲ್ಲಿ ಅಲ್ಲೂ ಗಟ್ಟಿ ನೆಲೆ ಇರಲಿಲ್ಲ. ಅಲ್ಲೂ ಅವನನ್ನು ಹೊರಹಾಕಿದರು.

ಅಲ್ಲಿಂದ ಆಜಾದ್ ಮೈದಾನ ಸೇರಿದ ಹುಡುಗನಿಗೆ ಅಲ್ಲಿನ ಟೆಂಟ್ ಒಂದರಲ್ಲಿ ಜಾಗ ಸಿಕ್ಕಿತು. ಶೌಚಾಲಯ, ಕುಡಿಯುವ ನೀರು ಹೀಗೆ ಮೂಲ ಸೌಕರ್ಯಗಳೇ ಇಲ್ಲದ ಆ ಟೆಂಟ್ ನಲ್ಲಿ ಈ ಹಾಲುಗಲ್ಲದ ಹುಡುಗ ಕಳೆದಿದ್ದು ಬರೋಬ್ಬರಿ ಮೂರು ವರ್ಷ. ಊಟಕ್ಕಾಗಿ ಸಿಕ್ಕ ಸಿಕ್ಕ ಕೆಲಸ ಮಾಡಿ ಚಿಲ್ಲರೆ ಹಣ ಸಂಪಾದನೆ ಮಾಡುತ್ತಿದ್ದ.

ಇದರ ನಡುವೆ ಆಟವನ್ನು ಮರೆಯಲಿಲ್ಲ. ರನ್ ಗಳಿಸುತ್ತಿದ್ದ. ವಿಕೆಟ್ ಪಡೆಯುತ್ತಿದ್ದ. ಎಂತಹ ಕಷ್ಟಗಳನ್ನಾದರೂ ಸಹಿಸುತ್ತಿದ್ದ ಕ್ರಿಕೆಟ್ ಆಡುವ ಸಲುವಾಗಿ. ಒಂದು ದಿನ ಖಂಡಿತ ಕ್ರಿಕೆಟ್ ತನ್ನನ್ನು ಮೇಲಕ್ಕೆತ್ತುತ್ತದೆ ಎಂಬ ಬಲವಾದ ನಂಬಿಕೆ ಆತನದು.

ರಾಮ್ ಲೀಲಾ ಸಮಯದಲ್ಲಿ ರಸ್ತೆಗಳಲ್ಲಿ ಪಾನಿ ಪುರಿ ಮಾರತೊಡಗಿದ. ಯಾವ ಕೆಲಸವಾದರೂ ಸರಿ ಮಾಡುತ್ತಿದ್ದ. ಕರೆಯದೇ ಇದ್ದರೂ ಪಂದ್ಯಗಳಿಗೆ ಬಾಲ್ ಬಾಯ್ ಆಗಿ ಹೋಗುತ್ತಿದ್ದ.  ಒಟ್ಟಿನಲ್ಲಿ ಹಣ ಸಂಪಾದನೆಗಾಗಿ ಎಲ್ಲವನ್ನೂ ಮಾಡಿದ್ದ ನಮ್ಮ ಹೀರೋ.

ಅದೊಂದು ದಿನ ಲಿಸ್ಟ್ ಎ ಬೌಲರ್ ಗಳ ಎಸೆತಗಳನ್ನು ಮೈದಾನದ ಹೊರಕ್ಕೆ ಅಟ್ಟುತ್ತಿದ್ದ ಈ ಹುಡುಗ ಮಾಜಿ ಜೂನಿಯರ್ ಆಟಗಾರರ, ಸದ್ಯದ ಕೋಚ್ ಜ್ವಾಲಾ ಸಿಂಗ್ ಕಣ್ಣಿಗೆ ಬೀಳುತ್ತಾನೆ. ಈ ಹುಡುಗನ ಆಟದಿಂದ ಖುಷಿಗೊಂಡ ಜ್ವಾಲಾ ಸಿಂಗ್ ಆತನ ಬಗ್ಗೆ ವಿಚಾರಿಸಿದಾಗ ಆತನ ಹಿನ್ನೆಲೆ ತಿಳಿಯುತ್ತದೆ. ಆತನನ್ನು ತನ್ನ ಮನೆಗೆ ಕರೆಸಿಕೊಂಡ ಜ್ವಾಲಾ ತರಬೇತಿಯು ನೀಡುತ್ತಾರೆ.

ಯಶಸ್ವಿಯ ಹಸಿವು, ವಸತಿ ಸಮಸ್ಯೆ ಸದ್ಯಕ್ಕೆ ಇಲ್ಲವಾಗಿತ್ತು. ಕ್ರಿಕೆಟ್ ನಲ್ಲಿ ಮತ್ತಷ್ಟು ತೊಡಗಿಸಿಕೊಂಡ. ಟೀಂ ಇಂಡಿಯಾ ಅಂಡರ್‌ 19 ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾದ . ಸರಣಿಯಲ್ಲಿ 318 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡಕ್ಕೆ ಆಯ್ಕೆಯಾದ. ಅದು  ಜೈಸ್ವಾಲ್ ನ ಜೈತ್ರಯಾತ್ರೆ ಯಶಸ್ವಿಯಾಗಲು ಒಂದೊಂದೇ ಹೆಜ್ಜೆ ಮುಂದಡಿಯಿಡುತ್ತಿತ್ತು.

ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 154 ಎಸೆತಗಳಲ್ಲಿ 203 ರನ್ ಗಳಿಸಿದ ಜೈಸ್ವಾಲ್ ದೇಶದಲ್ಲೆಡೆ ಸುದ್ದಿಯಾದ. ವರುಣ್ ಆರೋನ್, ಶಬಾಜ್ ನದೀಂರಂತಹ ಘಟಾನುಘಟಿಗಳ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಯಶಸ್ವಿ ಲಿಸ್ಟ್ ಎ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದ.

ಕನಸು, ಪ್ರಯತ್ನ, ಶ್ರದ್ದೆಇದ್ದರೆ ಎಂಥಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಯಶಸ್ವಿ ಜೈಸ್ವಾಲ್ ಉತ್ತಮ ಉದಾಹರಣೆ. ಕಠಿಣ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬಂದಿರುವ ಜೈಸ್ವಾಲ್ ಮುಂದೊಂದು ದಿನ ಟೀಂ ಇಂಡಿಯಾ ಪರ ಆಡುವ ಕನಸು ಕಾಣುತ್ತಿದ್ದಾನೆ. ಹೀಗೆಯೇ ಆಟ ಮುಂದುವರಿಸಿದರೆ ಆ ದಿನಗಳೂ ದೂರವೇನಿಲ್ಲ ಬಿಡಿ.

ಕೀರ್ತನ್ ಶೆಟ್ಟಿ ಬೋಳ 

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.