Andhra Pradesh: ಜಗನ್ಗೆ ಎಗ್ ಪಫ್ಸ್ ಬಿಸಿ: 5 ವರ್ಷಕ್ಕೆ 3 ಕೋಟಿ ರೂ. ವೆಚ್ಚ ?
ಆಂಧ್ರದ ಟಿಡಿಪಿ ಸರಕಾರದ ಹೊಸ ಆರೋಪ, ಕಚೇರಿಯಲ್ಲಿ ದಿನಕ್ಕೆ 993ರಂತೆ ಎಗ್ ಪಫ್ಸ್ ಸೇವನೆ?
Team Udayavani, Aug 22, 2024, 7:25 AM IST
ಹೈದಾರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಆರೋಪಗಳ ಸುರುಳಿ ಸುತ್ತಿಕೊಳ್ಳುತ್ತಲೇ ಇವೆ. ಋಷಿಕೊಂಡ ಪ್ಯಾಲೇಸ್, ಐಷಾರಾಮಿ ಪೀಠೊಪಕರಣ ವಿವಾದ ಗಳ ಬಳಿಕ ಇದೀಗ “ಎಗ್ ಪಫ್ಸ್’ ವಿಚಾರ ಆಂಧ್ರ ರಾಜ ಕಾರಣದ ಬಿಸಿ ಹೆಚ್ಚಿಸಿದೆ.
ಜಗನ್ ಆಡಳಿತದ 5 ವರ್ಷದಲ್ಲಿ 2019ರಿಂದ 2024ರವರೆಗೆ ಎಗ್ ಪಫ್ಸ್ ತಿನ್ನಲೆಂದೇ ಸಿಎಂ ಕಚೇರಿ 3.62 ಕೋಟಿ ರೂ. ವೆಚ್ಚ ಮಾಡಿದೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ಒಂದು ಪಫ್ಸ್ಗೆ 20 ರೂ.ಗಳಂತೆ 5 ವರ್ಷಗಳಲ್ಲಿ 18 ಲಕ್ಷ ಎಗ್ ಪಫ್ಸ್ ಸಿಎಂಒ ಕಚೇರಿ ಸಿಬಂದಿ ಸೇವಿಸಿದ್ದಾರೆ.
ಅಲ್ಲಿಗೆ ಪ್ರತೀ ದಿನ ಜಗನ್ ಕಚೇರಿಯಲ್ಲಿ 993 ಎಗ್ ಪಫ್ಸ್ ಸೇವಿಸಿದಂತಾಗಿದೆ. ಈ ಮೂಲಕ ಪ್ರತೀ ವರ್ಷ ಬರೀ ಎಗ್ ಪಫ್ಸ್ ಗಾಗಿಯೇ 72 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಟಿಡಿಪಿ ಆರೋಪಿಸಿದೆ. ಇದನ್ನು “ಎಗ್ ಪಫ್ಸ್ ಹಗರಣ’ ಎಂದೂ ಕರೆದಿದೆ. ಈ ಬಗ್ಗೆ ಟ್ವೀಟ್ ಮಾಡಿ “ಮುಚ್ಚಿಟ್ಟ ಸತ್ಯಗಳು ಈಗ ಮೊಟ್ಟೆ ಒಡೆದು ಹೊರಬರುತ್ತಿವೆ. ಇದು ಕೇವಲ ಆರಂಭ. ಇಷ್ಟು ಬೇಗ ಭಯಭೀತರಾಗ ಬೇಡಿ’ ಎಂದು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದೆ.
ಸುಳ್ಳು ಆರೋಪ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಜಗನ್ ವರ್ಚಸ್ಸಿಗೆ ಧಕ್ಕೆ ತರಲು ಇಂಥ ಆರೋಪಗಳನ್ನು ಮಾಡಲಾಗಿದೆ ಎಂದಿದೆ. 2014ರಿಂದ 2019ರ ವರೆಗಿನ ನಾಯ್ಡು ಸರಕಾರದಲ್ಲೂ ಬರೀ ತಿಂಡಿ- ತಿನಸುಗಳಿಗಾಗಿ 8.5 ಕೋಟಿ ರೂ. ಖರ್ಚು ಮಾಡ ಲಾಗಿತ್ತು ಎಂದು ತಿರುಗೇಟು ನೀಡಿದೆ.
ಏನಿದು ಪ್ರಕರಣ?
ಜಗನ್ ಆಡಳಿತದಲ್ಲಿ ಎಗ್ ಪಫ್ಸ್ಗಾಗಿಯೇ 3.62 ಕೋಟಿ ರೂ. ವೆಚ್ಚ
2019ರಿಂದ 2024ರ ಅವಧಿಯಲ್ಲಿನ ಹಗರಣ ಬಗ್ಗೆ ಟಿಡಿಪಿ ಆರೋಪ
1 ಎಗ್ಪಫ್Õಗೆ 20 ರೂ.ಗಳಂತೆ 5 ವರ್ಷದಲ್ಲಿ 18 ಲಕ್ಷ ಪಫ್ಸ್ ಸೇವನೆ
ಜಗನ್ ವರ್ಚಸ್ಸಿಗೆ ಧಕ್ಕೆ ತರುವ ಷಡ್ಯಂತ್ರ: ವೈಎಸ್ಆರ್ಸಿಪಿ
2014-19ರಲ್ಲಿನ ಟಿಡಿಪಿ ಆಡಳಿತದಲ್ಲೂ ತಿನಸಿಗೆ 8.5 ಕೋಟಿ ರೂ. ವೆಚ್ಚ: ಜಗನ್ ಪಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.