ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ


Team Udayavani, Apr 13, 2021, 5:10 AM IST

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ

ದೀಪವನ್ನು ಸೂರ್ಯ ಮತ್ತು ಅಗ್ನಿಯ ಸಂಕೇತವೆಂದು ವ್ಯಾಖ್ಯಾನಿಸಲಾಗಿದ್ದು, . ದೀಪವು ಮಂಗಳಕರವಾದುದು. ಮಾನವನು ಅನ್ವೇಷಿಸಿದ ಅನೇಕ ಅದ್ಭುತಗಳಲ್ಲಿ ಅಗ್ನಿಯೂ ಒಂದು. ದೀಪವು ಬೆಳಕಿನ ಜತೆಗೆ ಜೀವಗಳಿಗೆ ರಕ್ಷಣೆಯನ್ನು ನೀಡಿದ ಮತ್ತು ನೀಡುತ್ತಿರುವುದರಿಂದ ದೀಪಕ್ಕೆ ಮನುಷ್ಯ ದೈವತ್ವದ ಸ್ಥಾನವನ್ನು ನೀಡಿದ್ದಾನೆ. ಭಾರ ತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ವಿಶೇಷವಾದ ಸ್ಥಾನಮಾನವಿದೆ. ವೇದಗಳ ಪ್ರಕಾರ ಇಂದ್ರನು ಪ್ರಮುಖ ದೇವತೆಯಾದರೆ ಅನಂತರದ ಸ್ಥಾನ ಅಗ್ನಿಗೇ. ದೀಪದ ಕಲ್ಪನೆ ಬಂದಂದಿನಿಂದ ನಾಗರಿಕತೆಯು ಹೊಸತಾದ ಶಕ್ತಿಯನ್ನು ಪಡೆಯಿತು. ದೀಪದ ಬೆಳಕೇ ಮನುಷ್ಯ ನಿಗೆ ಜ್ಞಾನದ ಮೂಲವಾಗಿದ್ದು, ಇದನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರವಾ ದದ್ದೆಂದು ಭಾವಿಸಲಾಗಿದೆ. ದೀಪದ ಮಹಿಮೆಯನ್ನು ಅರಿತ ಮಾನವ ಅದನ್ನು ವಿವಿಧ ರೂಪಗಳಲ್ಲಿ ಸುಂದರಗೊಳಿಸಲು ಪ್ರಯತ್ನಿಸಿದ ಎನ್ನಬಹುದು.

ದೀಪ ಎಂದರೆ ಶಾಂತಿ, ಸಮೃದ್ಧಿ, ಬೆಳಕು, ಆರೋಗ್ಯ, ಸಂಪತ್ತು, ಮತ್ತು ಪ್ರಖರತೆಯ ಪ್ರತಿರೂಪ. ದೀಪವು ನಮ್ಮ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆಯ ಸಂಕೇತ. ಇಂತಹ ದೀಪವನ್ನು ಬೆಳಗಿಸುವುದರಿಂದ ನಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ, ಶಾಂತಿ ಯನ್ನು ದೊರೆಯುತ್ತದೆ. ದೀಪವನ್ನು ಬೆಳಗಿಸುವುದರ ಹಿಂದೆ ಒಂದು ಆಳ ವಾದ ತಣ್ತೀ ಅಡಗಿದೆ. ನಮ್ಮ ಕಷ್ಟ ಮತ್ತು ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚು ತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗ ಲಾಡಿಸಲು ದೀಪಲಕ್ಷ್ಮಿಯನ್ನು ಬೆಳಗಿಸಿ, ಪ್ರಾರ್ಥಿಸುತ್ತೇವೆ.

ದೀಪವನ್ನು ಬೆಳಗುವುದೆಂದರೆ ನಮ್ಮನ್ನು ನಾವು, ನಮ್ಮ ಆತ್ಮವನ್ನು ಬೆಳಗಿಕೊಂಡಂತೆ. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮನುಷ್ಯನ ಮನಸ್ಸಿಗೆ ಹೋಲಿಸಲಾಗಿದೆ. ದೀಪವನ್ನು ಹಚ್ಚಿದಾಗ ನಮ್ಮ ಮನಸ್ಸಿನಲ್ಲಿ ನಮ್ಮ ಬದುಕಿನ ಪ್ರಾಮುಖ್ಯದ ಅರಿವುಂಟಾಗುತ್ತದೆ. ಇದು ನಮಗೆ ಬೌದ್ಧಿಕವಾದ ಜ್ಞಾನ ವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಬಡವ-ಬಲ್ಲಿದ, ಜಾತಿ ಮತ್ತು ಪಕ್ಷಗಳ ಭೇದವಿಲ್ಲದೇ ದೀಪವು ಅರಮನೆ ಅಥವಾ ಗುಡಿಸಲೆಂಬ ಭೇದವಿಲ್ಲದೇ ಸಮಾನವಾಗಿಯೇ ಬೆಳಗುತ್ತದೆ. ಮನುಷ್ಯನೂ ಯಾವುದೇ ಭೇದಭಾವವಿಲ್ಲದೆ ಬದುಕಿ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ದೀಪವು ನೀಡುತ್ತದೆ.

ಜ್ಞಾನದ ಸಂಕೇತವಾದ ದೀಪವು, ಕತ್ತಲೆಯಂತಿರುವ ಅಜ್ಞಾನವನ್ನು ಹೋಗ ಲಾಡಿಸುವ ಬೆಳಕು. ದೀಪಗಳನ್ನು ಮನೆಗಳಲ್ಲಿ ಬೆಳಗುವದರಿಂದ ನಮ್ಮ ಮನಸ್ಸುಗಳಲ್ಲಿ ತುಂಬಿರುವ ಅಜ್ಞಾನ ವೆಂಬ ಕತ್ತಲೆ(ತಮ)ಯು ದೂರ ಸರಿ ಯುತ್ತದೆ. ದೀಪ ಜೀವನದ ಪ್ರತೀ ಕ್ಷಣದಲ್ಲೂ ಆವರಿಸಿಕೊಂಡಿದ್ದು, ನಿತ್ಯ ದೀಪಗಳನ್ನು ಬೆಳಗುವುದರಿಂದ ನಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

“ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ..’ ಎಂಬ ಶ್ಲೋಕವೇ ಹೇಳುವಂತೆ ಮನದೊಳಗೆ ತುಂಬಿರುವ ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನವೆಂಬ ಕತ್ತಲಿನಿಂದ ಜ್ಞಾನ ಎಂಬ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಂದಾದೀಪವು ನಮ್ಮನ್ನು ನಡೆಸುತ್ತದೆ ಎಂಬ ನಂಬಿಕೆ ಯಿದೆ. ಜೀವನವೆಂಬ ನೌಕೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಸಣ್ಣ ಸಣ್ಣ ಜ್ಯೋತಿಗಳು, ನಾವು ನಮ್ಮೊಳಗೆ ಇರುವ ಜ್ಞಾನವೆಂಬ ಜ್ಯೋತಿಗಳನ್ನು ಬೆಳಗು ವುದರಿಂದ ಮನಸ್ಸಿನಲ್ಲಿರುವಂತಹ ಅಜ್ಞಾನ, ಕಷ್ಟ, ನೋವುಗಳು ದೂರವಾಗಿ ಜ್ಞಾನ ಮತ್ತು ನೆಮ್ಮದಿಯ ಬೆಳಕು ಎಲ್ಲೆಡೆ ಪಸರಿಸುವಂತಾಗುತ್ತದೆ.

ಮನೆಯಲ್ಲಿ ದೀಪವನ್ನು ಹಚ್ಚುವು ದರಿಂದ ಆ ಪರಿಸರದಲ್ಲಿ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕವಾದ ಚಿಂತನೆಗಳು ಹೆಚ್ಚುತ್ತದೆ ಎಂಬುದು ವೈಜ್ಞಾನಿಕವಾ ಗಿಯೂ ಸಾಬೀತಾಗಿದೆ. “ದೀಪದಿಂದ ದೀಪವ ಹಚ್ಚಬೇಕು ಮಾನವ’ ಎಂಬ ಕವಿವಾಣಿಯಂತೆ ಹೊಸವರ್ಷದ ಮೊದಲ ದಿನವಾದ ಯುಗಾದಿಯಂದು ನಮ್ಮಲ್ಲಿರುವ ಉತ್ತಮ ಜ್ಞಾನವನ್ನು ಇತರರಿಗೂ ಹಂಚಿ ಎಲ್ಲೆಡೆ ಜ್ಞಾನದ ಜ್ಯೋತಿಯು ಪ್ರಜ್ವಲಿಸುವಂತೆ ಮಾಡುವ ಸಂಕಲ್ಪ ಮಾಡೋಣ.

- ಸಂತೋಷ್‌ ರಾವ್‌, ಪೆರ್ಮುಡ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.