Badami: ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ; ಬೆಳೆಗಳಿಗೆ ಅಪಾರ ಹಾನಿ

ನರಗುಂದ ತಾಲೂಕುಗಳಿಗೆ ಸಂಪರ್ಕಿಸುವ ಗೋವನಕೊಪ್ಪ ಹಳೆ ಸೇತುವೆ, ಕಿತ್ತಲಿ ಬ್ಯಾರೇಜ್ ಜಲಾವೃತ

Team Udayavani, Oct 13, 2024, 11:04 PM IST

Agri-Damage

ಕುಳಗೇರಿ ಕ್ರಾಸ್ (ಬಾಗಲಕೋಟೆ ಜಿಲ್ಲೆ): ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ್ದರಿಂದ ನವಿಲುತೀರ್ಥ ಜಲಾಶಯದಿಂದ ಹೆಚ್ಚುವರಿ ನೀರು ಮಲಪ್ರಭಾ ನದಿಗೆ ಬಿಟ್ಟ ಪರಿಣಾಮ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಇತ್ತ ಬೆಣ್ಣೆ ಹಳ್ಳವೂ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ ಸೇರಿ ಕೆಲವು ಗ್ರಾಮಗಳಿಗೆ ನೀರು ನುಗ್ಗಿ ಪ್ರವಾಹದ ಸ್ಥಿತಿ ಉಂಟಾಗಿದೆ.

ಮಲಪ್ರಭಾ ನದಿಯ ದಡದಲ್ಲಿನ ತಳಕವಾಡ, ಆಲೂರ ಎಸ್‌ಕೆ, ಕಳಸ, ಕಿತ್ತಲಿ, ಗೋವನಕೊಪ್ಪ, ಬೀರನೂರ, ಹಾಗನೂರ, ಕರ್ಲಕೊಪ್ಪ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಪ್ರವಾಹ ನೀರು ಹೆಚ್ಚಿರುವ ಹೆಬ್ಬಳ್ಳಿ ಗ್ರಾಮಕ್ಕೆ ಕಂದಾಯ ಇಲಾಖೆ ನಿರೀಕ್ಷಕ ವಿ.ಎ.ವಿಶ್ವಕರ್ಮ ಭೇಟಿ ನೀಡಿ ಪರಿಶೀಲಿಸಿ ಗ್ರಾಮದ ಸುಮಾರು 15 ಕುಟುಂಬಗಳ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಪ್ರವಾಹದ ನೀರು ಹೆಚ್ಚುತ್ತಿರುವ ಕಾರಣ ಮುಂಜಾಗೃತ ಕ್ರಮವಾಗಿ ನದಿ ಪಾತ್ರದ ಜನರು, ಜಾನುವಾರುಗಳ ಸಹಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬಾದಾಮಿ ತಹಶೀಲ್ದಾರ್‌ ಮಧುರಾಜ ಕೂಡಲಗಿ ಸೂಚಿಸಿದ್ದಾರೆ.


ಪ್ರವಾಹದ ನೀರು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ ಸೇರಿ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಮೆಕ್ಕೆಜೋಳ, ಹತ್ತಿ, ಕಬ್ಬು, ಸಜ್ಜೆ, ಈರುಳ್ಳಿ ಸೇರಿ ಸಾಕಷ್ಟು ಬೆಳೆಗಳು ಜಲಾವೃತಗೊಂಡಿರುವುದರಿಂದ ರೈತರು ಬೆಳೆದ ಬೆಳೆಯೂ ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಾದಾಮಿ ನರಗುಂದ ತಾಲೂಕುಗಳಿಗೆ ಸಂಪರ್ಕಿಸುವ ಮಲಪ್ರಭಾ ನದಿಯ ಗೋವನಕೊಪ್ಪ ಹಳೆ ಸೇತುವೆ ಹಾಗೂ ಕಿತ್ತಲಿ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದ್ದು. ಕೆಲವು ಗ್ರಾಮದ ಜನರು ಸುಮಾರು 20 ಕಿ.ಮೀ ಸುತ್ತುವರಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದ  ಜಲಾಶಯ ಭರ್ತಿಯಾಗಿದ್ದು, ನೀರಿನ ಒಳ ಹರಿವು 13,055 ಕ್ಯೂಸೆಕ್ ಮಲಪ್ರಭಾ ನದಿಗೆ 8,194 ಕ್ಯೂಸೆಕ್‌ ನೀರು ಬಿಡಲಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಹೆಚ್ಚುತ್ತಿದೆ.

ಟಾಪ್ ನ್ಯೂಸ್

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

Mangaluru: ಮಂಗಳಾದೇವಿ ಮಹಾ ರಥೋತ್ಸವ

Mangaluru: ಮಂಗಳಾದೇವಿ ಮಹಾ ರಥೋತ್ಸವ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

DK-Shivakumar

Hubballi: ಬಿಜೆಪಿ ವಾಪಸ್‌ ಪಡೆದ ಕೇಸ್‌ ಪಟ್ಟಿ ಕೊಡುತ್ತೇವೆ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-mudhol

Mudhol: ಸಾಂಸ್ಕೃತಿಕ ಸೇವೆಯಲ್ಲೂ ಗಣನೀಯ ಸಾಧನೆ- ಮೈಸೂರು ದಸರಾದಲ್ಲಿ ಮುಧೋಳ ಮಲ್ಲರ ಕಮಾಲ್

2-ratan-tata

Ratan Tata: ಕಳಚಿದ ಕೈಗಾರಿಕೆ ಕ್ಷೇತ್ರದ ಬೃಹತ್ ಕೊಂಡಿ: ಶಾಸಕ ಮೇಟಿ

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

8

Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police crime

Durga ಪೆಂಡಾಲ್‌ ಮೇಲೆ ಗುಂಡಿನ ದಾಳಿ: ನಾಲ್ವರಿಗೆ ಗಾಯ

train-track

Train; ಮತ್ತೊಂದು ಅವಘಡ: ಗೀತಾ ಜಯಂತಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

Pak 2

Pakistan; ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ಥಾನಕ್ಕೆ ಮುತ್ತಿಗೆ: ಪಶ್ತೂನ್‌ ತಾಕೀತು

isrel netanyahu

Ratan Tata ನಿಧನಕ್ಕೆ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಸಂತಾಪ

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.