![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jul 27, 2024, 6:48 PM IST
ರಬಕವಿ-ಬನಹಟ್ಟಿ (ಬಾಗಲಕೋಟೆ ಜಿಲ್ಲೆ) : ಮಹಾರಾಷ್ಟ್ರ ಭಾಗದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುರಿಂದ ಕೃಷ್ಣಾ ನದಿ ಹರಿವುನಲ್ಲಿ ನೀರಿನ ಹೆಚ್ಚಳದಿಂದಾಗಿ ಸಮೀಪದ ಅಸ್ಕಿ ಗ್ರಾಮಸ್ಥರು ಆತಂಕದ ಸ್ಥಿತಿಯಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಕೃಷ್ಣಾ ನದಿಯಲ್ಲಿ ಮತ್ತಷ್ಟು ನೀರು ಏರಿಕೆಯಾದರೆ ಅಸ್ಕಿ ಗ್ರಾಮ ನಡುಗಡ್ಡೆಯಾಗಲಿದೆ ಎಂಬ ಆತಂಕ ಜನರಲ್ಲಿದೆ. ಅದಕ್ಕಾಗಿ ಇಲ್ಲಿಯ ಜನರ ಸಮೀಪದ ಆಸಂಗಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರಾಮದಲ್ಲಿ ಅಂದಾಜು 415ಕ್ಕೂ ಹೆಚ್ಚು ಕುಟುಂಬಗಳ 3000ಕ್ಕೂ ಹೆಚ್ಚು ಜನರು, 485ಕ್ಕೂ ಹೆಚ್ಚು ಜಾನುವಾರುಗಳಿವೆ. ಗ್ರಾಮದ ಒಟ್ಟು 327 ಹೆಕ್ಟೇರ್ ಕೃಷಿ ಭೂಮಿ, 1 ಪ್ರಾಥಮಿಕ ಶಾಲೆ ಮತ್ತು ಎರಡು ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ನದಿ ನೀರಿನಲ್ಲಿ ಪ್ರಮಾಣ ಹೆಚ್ಚುತ್ತಿರುವುದರಿಂದ ನದಿ ತೀರದ ಜನರಿಗೆ ಮುಂಜಾಗ್ರತಾ ಕ್ರಮವಾಗಿ ತಿಳಿಸಲಾಗುತ್ತಿದೆ ಎಂದು ಸ್ಥಳದಲ್ಲಿರುವ ನೋಡಲ್ ಅಧಿಕಾರಿ ಭರತೇಶ ಪೋತದಾರ ತಿಳಿಸಿದರು. ಗ್ರಾಮ ಆಡಳಿತಾಧಿಕಾರಿ ಈರೇಶ ಗೋಕಾಕ ಸೇರಿ ಅನೇಕರಿದ್ದರು.
ಮೊಸಳೆಗಳ ಭಯ:
ನದಿ ತೀರದಲ್ಲಿ ಬೃಹತ್ ಪ್ರಮಾಣದ ಮೊಸಳೆಗಳು ಕಂಡು ಬಂದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಅಸ್ಕಿ ಗ್ರಾಮದ ಜನರು ತಾವು ಗುಡ್ಡೆ ಹಾಕಿದ ಕೊಟ್ಟಿಗೆ ಗೊಬ್ಬರವನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದು ಕಂಡು ಬಂದಿತು.
You seem to have an Ad Blocker on.
To continue reading, please turn it off or whitelist Udayavani.