Desi swara:ಜರ್ಮನಿಯ ಸುಂದರ ಪ್ರವಾಸಿ ತಾಣ ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ

 ನಯನ ಮನೋಹರ ದೃಶ್ಯಗಳ ಸವಿ

Team Udayavani, Dec 2, 2023, 4:11 PM IST

Desi swara:ಜರ್ಮನಿಯ ಸುಂದರ ಪ್ರವಾಸಿ ತಾಣ ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ

ನೆಕರ್‌ ನದಿಯ ಮೇಲೆ ವಿಶಾಲವಾಗಿ ವಿಸ್ತರಿಸಿಕೊಂಡಿರುವ ಹೈಡಲ್‌ಬರ್ಗ್‌ ಪುರಾತನ ಸ್ಥಳವೆಂದು ಕರೆಸಿಕೊಂಡರೂ ಜನಜನಿತವಾಗಿರುವುದು ರೊಮ್ಯಾಂಟಿಕ್‌ ನಗರವೆಂದು. ಮಹಾಯುದ್ಧದ ವೇಳೆ ದಾಳಿಯಿಂದ ಬದುಕಿ ಉಳಿದಿದ್ದೇ ಈ ನಗರದ ವಿಧಿ. ವಿಶ್ವ ಪಾರಂಪರಿಕ ತಾಣವಾಗಿರುವ ರೀನ್‌ ಕಣಿವೆ, ರೀನ್‌ ನದಿಯ ಹರಿಯುವಿಕೆಯ ಸುಂದರ ದೃಶ್ಯವನ್ನು ಹೊಂದಿದೆ. ಕಣಿವೆ ಪ್ರದೇಶವಾದರೂ ನಾಗರಿಕತೆಯು ವಿಜೃಂಭಿಸುವ ಜಾಗವಿದು.

ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ ಜರ್ಮನಿಯ ಸುಂದರ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಫ್ರಾಂಕ್‌ಫ‌ರ್ಟ್‌ಗೆ ಭೇಟಿ ನೀಡಿದವರು ಒಂದು ದಿನ ಬಿಡುವು ಮಾಡಿಕೊಂಡು ಈ ಪ್ರದೇಶಗಳಿಗೆ ಹೋಗಿಬರುವುದು ಸಾಮಾನ್ಯ. ಫ್ರಾಂಕ್‌ಫ‌ರ್ಟ್‌ ನಗರದಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಅಷ್ಟೇ. ಒಮ್ಮೆ ನಮ್ಮ ಒಮಾನ್‌ ಕಂಪೆನಿಯ ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದೆ. ಪ್ರತೀ ಬಾರಿ ಜರ್ಮನಿಯ ಟ್ರಿಪ್‌ನಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ.

ಫ್ರಾಂಕ್‌ಫ‌ರ್ಟ್‌ನಿಂದ ಒಂದು ದಿನದೊಳಗೆ ಪ್ರವಾಸಕ್ಕಾಗಿ ಹೋಗಿ ಬರುವ ಸ್ಥಳಗಳನ್ನು ಹುಡುಕುತ್ತಿದ್ದಾಗ ಕಂಡಿದ್ದೇ ಈ ಹೈಡೆಲ್ಬರ್ಗ್‌ ಮತ್ತು ರೀನ್‌ವ್ಯಾಲಿ. ಈ ಸ್ಥಳಗಳ ಕುರಿತು ಮಾಹಿತಿ ಪಡೆದಿದ್ದ ನಾನು, ಇವುಗಳನ್ನು ನೋಡುವ ಸಲುವಾಗಿಯೇ ಎರಡು ದಿನ ಹೆಚ್ಚುವರಿಯಾಗಿ ತಂಗಿದ್ದೆ. ಫ್ರಾಂಕ್‌ಫ‌ರ್ಟ್‌ನ ರೈಲ್ವೇ ನಿಲ್ದಾಣದ ಬಳಿ ಬಹಳಷ್ಟು ಟೂರ್‌ ಆಪರೇಟರ್‌ಗಳು ಇದ್ದಾರೆ, ಅವರ ಬಳಿ ಮಾತನಾಡಿ ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ ಟೂರ್‌ಗೆ ಬುಕ್‌ ಮಾಡಿದ್ದೆ. ಮೊದಲ ದಿನ ಹೈಡೆಲ್‌ ಬರ್ಗ್‌ ಟೂರ್‌, ಎರಡನೇ ದಿನ ರೀನ್‌ ವ್ಯಾಲಿ. ಒಂದು ಮಿನಿ ಬಸ್‌ನಲ್ಲಿ ಸುಮಾರು ಹದಿನೈದು ಜನ ವಿವಿಧ ದೇಶಗಳ ಪ್ರವಾಸಿಗರೊಟ್ಟಿಗೆ ಈ ಸ್ಥಳಗಳನ್ನು ನೋಡಿದೆ. ತುಂಬಾ ಸುಂದರವಾದ ಕಣ್ಮನ ಸೆಳೆಯುವ ದೃಶ್ಯಗಳು ಈ ಸ್ಥಳದಲ್ಲಿವೆ.

ಹೈಡೆಲ್ಬರ್ಗ್‌ ಪ್ರದೇಶ ಜರ್ಮನಿಯ ಪುರಾತನವಾದ ಸ್ಥಳ. ನೈಋತ್ಯ ಜರ್ಮನಿಯ ನೆಕರ್‌ ನದಿಯ ಬದಿಯಲ್ಲಿದೆ ಈ ನಗರ. ಈ ನಗರಕ್ಕೆ ರೊಮ್ಯಾಂಟಿಕ್‌ ನಗರ, ಸಾಹಿತ್ಯಿಕ ನಗರ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ, ನೂರಾರು ಪ್ರೇಮಿಗಳು ಸುಂದರ ಸಂಜೆಯನ್ನು ಇಲ್ಲಿ ಕಳೆಯಲು ಬಯಸುತ್ತಾರೆ. 1386ರಲ್ಲಿ ಪ್ರಾರಂಭವಾದ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ಹಾಗೂ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಇಲ್ಲಿದೆ. ಶೈಕ್ಷಣಿಕ ನಗರವಾದುದ್ದರಿಂದ ಯುರೋಪಿನ ವಿವಿಧ ನಗರಗಳಿಂದ ಇಲ್ಲಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಇಂದಿಗೂ ಬರುತ್ತಾರೆ.

ರಮಣೀಯ ಪ್ರದೇಶವಾದ ಈ ಕಣಿವೆ ಜಾಗದಲ್ಲಿ ಹರಿಯುವ ನೆಕ್ಟರ್‌ ನದಿಯ ಮೇಲೆ ನಿರ್ಮಿಸಿರುವ ಹಳೆಯ ಬ್ರಿಡ್ಜ್ ನೋಡಲು ತುಂಬಾ ಸುಂದರವಾಗಿದೆ. ನದಿ ದಂಡೆಯ ಎರಡು ಬದಿಯಿರುವ ನಗರ, ಕ್ಯಾಸೆಲ್‌, ಎರಡು ಕಡೆ ಬೆಟ್ಟಗಳನ್ನು ಮತ್ತು ಈ ನದಿಯಲ್ಲಿ ಸಂಚರಿಸುವ ಬೋಟ್‌ಗಳನ್ನು ನೋಡಬಹುದು. ಈ ಪ್ರದೇಶ ಒಮ್ಮೆಗೆ ನಮ್ಮನ್ನ ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಡ್ಜ್ನಿಂದ ಇಳಿದು ನಗರದ ಪುರಾತನ ಹಾಗೂ ಹೃದಯಭಾಗಕ್ಕೆ ಭೇಟಿ ನೀಡಬಹುದು. ಅಲ್ಲಿ ಕ್ಯಾಸೆಲ್‌, ಹಳೆಯ ಚರ್ಚ್‌, ನೂರಾರು ವರ್ಷಗಳ ಪುರಾತನ ಕಟ್ಟಡಗಳು, ಸುಂದರವಾದ ಬೀದಿಗಳು, ಮರದ ಚೌಕಟ್ಟಿನ ಮನೆಗಳು ಹೀಗೆ ಎಲ್ಲವನ್ನು ನೋಡಬಹುದು.

ಈ ನಗರದ ಕಾಲು ಭಾಗ ಜನಸಂಖ್ಯೆ ವಿದ್ಯಾರ್ಥಿಗಳಿಂದ ತುಂಬಿದೆ. ವಿಶ್ವದ ಅತೀ ದೊಡ್ಡ ವೈನ್‌ ಸಂಗ್ರಹಿಸುವ ಬ್ಯಾರೆಲ್‌ ಒಂದು ಇಲ್ಲಿನ ಸಂಗ್ರಹಾಲಯದಲ್ಲಿದ್ದು, 130 ಓಕ್‌ ಮರಗಳಿಂದ ಇದನ್ನು ತಯಾರಿಸಲಾಗಿದೆ. ನಿಖರವಾಗಿ 2,21,726 ಲೀಟರ್‌ ವೈನ್‌ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಟ್ಲರ್‌ನ ನಾಜಿ ಪಕ್ಷದ ಕಾರ್ಯ ಚಟುವಟಿಕೆ ಈ ಭಾಗದಲ್ಲಿ ಹೆಚ್ಚಾಗಿತ್ತು ಎಂದು ಹೇಳುತ್ತಾರೆ. ಎರಡನೇ ಪ್ರಪಂಚ ಯುದ್ಧದ ಸಮಯದಲ್ಲಿ ಜರ್ಮನಿಯ ವಿವಿಧ ನಗರಗಳು ಬಾಂಬ್‌ ದಾಳಿಯಿಂದ ಧ್ವಂಸಗೊಂಡರೂ ಇಲ್ಲಿ ಹೆಚ್ಚಿನ ಅನಾಹುತ ಆಗಿರಲಿಲ್ಲ. ಇದು ಕಣಿವೆ ಪ್ರದೇಶವಾಗಿದ್ದು, ಇಲ್ಲಿಂದ ಹೊರ ಹೋಗುವುದು ಮತ್ತು ಬರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳುತ್ತಾರೆ. ಈ ನಗರ ಕೇವಲ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ನಗರವಾಗಿರದೆ, ಕೈಗಾರಿಕ ನಗರವಾಗಿಯೂ ಬೆಳೆದಿದೆ. ಅಂತಾರಾಷ್ಟ್ರೀಯ ಕಂಪೆನಿಗಳು ಇಲ್ಲಿವೆ. ಈ ಸುಂದರವಾದ ನಗರದ ವಿವಿಧ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡು ಸಂಜೆ ವೇಳೆ ವಾಪಾಸ್‌ ಫ್ರಾಂಕ್‌ಫ‌ರ್ಟ್‌ಗೆ ಮರಳಿದೆವು.

ಮರುದಿನ ಮತ್ತೂಂದು ಪ್ರವಾಸಿ ತಾಣ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನ ಪಡೆದಿರುವ ವಿಶ್ವಪ್ರಸಿದ್ಧ ರೀನ್‌ ಕಣಿವೆಗೆ ಭೇಟಿ ನೀಡಿದ್ದೇವು. ಈ ಸ್ಥಳವಂತೂ ತುಂಬಾ ಸುಂದರ. ಇಲ್ಲಿ ಬೆಟ್ಟಗಳ ನಡುವೆ ಪ್ರಶಾಂತವಾಗಿ ರೀನ್‌ ನದಿ ಹರಿಯುತ್ತದೆ. ರೀನ್‌ ಅಥವಾ ರೈನ್‌ ನದಿ ಯುರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಆಗ್ನೇಯ ಸ್ವಿರ್ಟ್ಜ್ ಲ್ಯಾಂಡ್‌ನ‌ ಆಲ್ಪ್$Õ ನಲ್ಲಿರುವ ಗ್ರಾಬುಂಡೆನ್ನ ಸ್ವಿಸ್‌ ಕ್ಯಾಂಟನ್ನಲ್ಲಿ ನದಿಯು ಹುಟ್ಟುತ್ತದೆ. ಅದರ ಅನಂತರ ಅದು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್‌, ನೆದರ್‌ಲ್ಯಾಂಡ್ಸ್‌ ದೇಶಗಳಲ್ಲಿ ಹರಿಯುತ್ತದೆ. ತನ್ನ ಹರಿವಿನ ಗುಂಟ ಹಲವಾರು ನದಿಗಳು ಇದರೊಳಗೆ ಸೇರಿಕೊಳ್ಳುತ್ತವೆ. ತನ್ನ ವ್ಯಾಪ್ತಿ ಮತ್ತು ಪಾತ್ರವು ದೊಡ್ಡದಾಗುತ್ತ ಹೋಗುತ್ತದೆ.

ಸಮುದ್ರ ಮಾರ್ಗದ ಮುಖಾಂತರ ಸರಕು ಸರಂಜಾಮುಗಳನ್ನು ಹೊತ್ತ ಹಡಗುಗಳು ಸಂಚಾರ ಮಾಡುವುದನ್ನು ನಾವು ಕಂಡಿದ್ದೇವೆ, ಆದರೆ ಈ ರೀನ್‌ ನದಿಯಲ್ಲಿ ನೂರಾರು ಮೀಟರ್‌ ಉದ್ದದ ಹಡಗುಗಳಲ್ಲಿ ದೊಡ್ಡ ಪ್ರಮಾಣದ ಕಂಟೈನರ್‌ಗಳು, ಕಲ್ಲಿದ್ದಲು, ಸ್ಟೀಲ್‌ ಮುಂತಾದ ಸರಕು ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಈ ನದಿಯಲ್ಲಿ ಸರಕು ಸಾಗಾಣಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಯುರೋಪಿನ ವಾಣಿಜ್ಯ ಚಟುವಟಿಕೆಗಳಿಗೆ ಈ ನದಿ ಪ್ರಮುಖ ಪಾತ್ರವಹಿಸುತ್ತದೆ. ವಿವಿಧ ನಗರಗಳಲ್ಲಿ ದೊಡ್ಡ ದೊಡ್ಡ ಹಡಗುಗಳು ಈ ನದಿಯಲ್ಲಿ ಸಂಚರಿಸುತ್ತವೆ.

ಈ ಕಣಿವೆ ಪ್ರದೇಶದಲ್ಲಿ ನೂರಾರು ದ್ರಾಕ್ಷಿತೋಟಗಳು ಇವೆ, ಸುಂದರವಾದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಇಲ್ಲಿವೆ. ನೂರಾರು ವರ್ಷಗಳ ಹಿಂದಿನ ಕೋಟೆ ಮತ್ತು ಕ್ಯಾಸೆಲ್‌ಗ‌ಳನ್ನು ಇಲ್ಲಿ ನೋಡಬಹುದು. ವೈನ್‌ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಸ್ಥಳೀಯವಾಗಿ ತಯಾರಾಗುವ ವಿವಿಧ ವೈನ್‌ಗಳ ರುಚಿ ನೋಡಬಹುದು. ಈ ರೀನ್‌ ನದಿಯಲ್ಲಿ ಪ್ರವಾಸಿಗರ ದೋಣಿ ವಿಹಾರಕ್ಕಾಗಿಯೇ ಸಿದ್ಧಪಡಿಸಿದ ಆಧುನಿಕ ಮತ್ತು ಸುಸಜ್ಜಿತ ದೋಣಿಗಳು ಇಲ್ಲಿವೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ದೋಣಿಯಲ್ಲಿ ಸುತ್ತಾಡಿ ಕಣಿವೆಯ ನಯನ ಮನೋಹರ ದೃಶ್ಯಗಳನ್ನು ಸವಿಯಬಹುದು. ನಮ್ಮ ಪ್ರವಾಸಿ ಗೈಡ್‌, ಇಲ್ಲಿನ ಹಲವಾರು ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮ್ಮನ್ನು ಸುತ್ತಾಡಿಸಿದ. ಎರಡು ದಿನದಲ್ಲಿ, ಎಷ್ಟು ಸಾಧ್ಯವಾಗಬಹುದೋ ಅಷ್ಟು ಸ್ಥಳಗಳನ್ನ ನೋಡಿ, ಸುಂದರವಾದ ನೆನಪುಗಳನ್ನು ಹೊತ್ತು ಜರ್ಮನಿಯಿಂದ ಮರಳಿದೆ.

*ಪಿ.ಎಸ್‌. ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

DKS

H.D.Kumaraswamy: ಅವರ ಮಾತು ಅವರಿಗೇ ಗೊತ್ತಿರುವುದಿಲ್ಲ: ಡಿ.ಕೆ.ಶಿವಕುಮಾರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

suicide (2)

Heart attack: ಕಚೇರಿಯಲ್ಲೇ 40 ವರ್ಷದ ಟೆಕ್ಕಿ ಸಾವು

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

police crime

Speed ತಗ್ಗಿಸಲು ಹೇಳಿದ್ದಕ್ಕೆ ಕಾರು ಹತ್ತಿಸಿ ಪೊಲೀಸ್‌ ಪೇದೆ ಹತ್ಯೆ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.