Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ

Team Udayavani, Jul 10, 2023, 4:14 PM IST

Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಚೇಳು ಬಹಳ ವಿಶಿಷ್ಠವಾದ ಪ್ರಾಣಿ. ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಹಾಗೇ ಬದುಕಬಲ್ಲದು. ಹಾಗೆಯೇ, ನೀರಲ್ಲೂ, ನೀರ ಹೊರಗೆ, ಬಿಲಗಳಲ್ಲೂ ಇದು ನಿರಾತಂಕವಾಗಿ ಜೀವಿಸುತ್ತದೆ. ಅಂದ ಹಾಗೇ, ಚೇಳಿನ ಕಣ್ಣುಗಳು ಇರುವುದು ಬೆನ್ನ ಮೇಲೆ.

ಚೇಳನ್ನು ನೋಡಿದ್ದೀರಿ? ಇದರ ಕುಟುಕುವಿಕೆಯಿಂದಲೇ ಜಗತ್‌ಪ್ರಸಿದ್ಧಿ ಪಡೆದಿದೆ. ಅದರ ಬಾಲದ ತುದಿಯಲ್ಲಿರುವ ಮೊನಚು ಕೊಂಡಿಯಿಂದ ಚುಚ್ಚಿದರೆ ಪ್ರಾಣಾಂತಿಕವಲ್ಲದಿದ್ದರೂ ಸಾಕಷ್ಟು ನೋವು, ಉರಿ ಅನುಭವಿಸಬೇಕಾಗುತ್ತದೆ. ಧ್ರುವಪ್ರದೇಶದ ಹೊರತು ಮರುಭೂಮಿಯೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ಚೇಳನ್ನು ಕಾಣಬಹುದು. ಬ್ರೆಜಿಲಿನ ಕಾಡುಗಳು, ಉತ್ತರ ಕೆರೊಲಿನಾ, ಹಿಮಾಲಯಗಳಲ್ಲಿ ಅದರ ಸಂತತಿ ಅಧಿಕವಾಗಿದೆ. ಸೊನ್ನೆ ಡಿಗ್ರಿ ಶೈತ್ಯಾಂಶದಲ್ಲಿ ಬದುಕಿರಬಲ್ಲ ಚೇಳು 68ರಿಂದ 99 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶದಲ್ಲೂ ಸಾಯುವುದಿಲ್ಲ. ಹೀಗಾಗಿಯೇ ನಮ್ಮ ಗುಲ್ಬರ್ಗ, ರಾಯಚೂರುಗಳ ಕಡೆ ಚೇಳುಗಳಿವೆ. ನೀವು, ಎರಡು ದಿನಗಳ ವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಈ ಚೇಳುಗಳು ಬದುಕಿರುತ್ತವೆ. ಅತ್ಯಂತ ಕಡಿಮೆ ಆಮ್ಲಜನಕ ಬಳಸುವ ಗುಣ ಇರುವುದರಿಂದ ಮಣ್ಣಿನೊಳಗೆಯೂ ಚೇಳು ಬದುಕಬಲ್ಲದು.

ಆಹಾರ ಇಲ್ಲದೆಯೂ ಬದುಕುತ್ತೆ
ಒಂದು ವರ್ಷ ಆಹಾರ ಇಲ್ಲದಿದ್ದರೂ ಚೇಳು ಹಸಿವಿನಿಂದ ಸಾಯುವುದೇ ಇಲ್ಲ. ಅದರ ಗರಿಷ್ಠ ಜೀವಿತ ಅವಧಿ 25ರಿಂದ 38 ವರ್ಷಗಳು. ಬಿಲಗಳು, ಕಲ್ಲುಗಳ ಸಂದಿ, ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ. ರಾತ್ರಿ ಸಂಚಾರ ಅದಕ್ಕೆ ಇಷ್ಟ. ಚೇಳಿಗೆ ಪ್ರತಿದೀಪಕ ಶಕ್ತಿಯಿರುವುದರಿಂದ ರಾತ್ರಿ ಅದರ ಮೇಲೆ ಬೆಳಕು ಹರಿಸಿದರೆ ಕಪ್ಪಗಿರುವ ಚೇಳಿನ ಬಣ್ಣ ಬದಲಾಗುತ್ತದೆ. 6 ಸೆಂ.ಮೀ.ಯಿಂದ ಆರಂಭಿಸಿ 20 ಸೆ. ಮೀ.ವರೆಗೆ ಗಾತ್ರವಿರುವ ಚೇಳುಗಳಲ್ಲಿ ಹಲವು ಜಾತಿಗಳಿವೆ. ಪ್ರಮುಖವಾಗಿ 13 ಕುಟುಂಬಗಳನ್ನು ಗುರುತಿಸಲಾಗಿದೆ. ಸಮುದ್ರ ಚೇಳು 8 ಅಡಿ ಉದ್ದವಿರುತ್ತದೆ.

ಬಾಲದಲ್ಲಿ ವಿಷ
ಹುಳಗಳು, ಕೀಟಗಳು, ಇಲಿ-ಹೆಗ್ಗಣಗಳು, ಹಕ್ಕಿಗಳು, ಹಲ್ಲಿಗಳು ಅದರ ಆಹಾರ. ಮುಂಭಾಗದಲ್ಲಿರುವ ಇಕ್ಕಳದಂತಹ ಕೊಂಬುಗಳಿಂದ ಬೇಟೆಯನ್ನು ಹಿಡಿದು ಬಾಲದಲ್ಲಿರುವ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯಲ್ಲಿ ನ್ಯೂರೋಟಾಕ್ಸಿನ್‌ ಎಂಬ ವಿಷವಿದೆ. ಅದು ಎದುರಾಳಿಯ ದೇಹ ಸೇರಿದಾಗ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಬಳಿಕ ಕೊಂಬುಗಳಲ್ಲಿರುವ ಅರದಂತಹ ಹಲ್ಲುಗಳಿಂದ ಅರೆದು ಬೇಟೆಯ ದೇಹದ ರಸವನ್ನು ಮಾತ್ರ ಸೇವಿಸಿ ಎಲುಬು, ಚರ್ಮಗಳನ್ನು ಬಿಸುಡುತ್ತದೆ. ಒಮ್ಮೆ ಹೊಟ್ಟೆ ತುಂಬಿದರೆ ಒಂದು ವರ್ಷವಾದರೂ ಹಸಿವಿನ ಭಯವಿಲ್ಲ.

ಡ್ಯಾನ್ಸು ಮಾಡುತ್ತೆ
ಗಂಡು ಚೇಳು ಹೆಣ್ಣನ್ನು ಒಲಿಸಿಕೊಳ್ಳಲು ಅದರ ಮುಂದೆ ತನ್ನದೇ ಶೈಲಿಯಲ್ಲಿ ವಿಶಿಷ್ಟವಾಗಿ ನರ್ತಿಸುತ್ತದೆ. ಚೇಳಿನ ಮೊಟ್ಟೆಗಳು ಒಡೆದು ಮರಿಗಳಾದ ಕೂಡಲೇ ತಾಯಿ ಚೇಳಿನ ಮೈಮೇಲೇರಿಕೊಂಡು ಅದರ ಜೊತೆಗೆ ಸಾಗುತ್ತವೆ. ಇದರಿಂದಾಗಿ ಚೇಳಿನ ಬೆನ್ನನ್ನು ಒಡೆದು ಮರಿಗಳು ಹೊರಗೆ ಬರುತ್ತವೆಂಬ ತಪ್ಪು ಕಲ್ಪನೆಯೂ ಇದೆ. ಚೇಳಿನ ಕಣ್ಣು ಅದರ ಬೆನ್ನಿನ ಮೇಲಿರುತ್ತದೆ. ಮನುಷ್ಯನಿಗೆ ಸಾವು ತರುವಷ್ಟು ಪ್ರಮಾಣದ ವಿಷ ಚೇಳಿನಲ್ಲಿ ಇಲ್ಲ. ಐವತ್ತು ಚೇಳುಗಳ ವಿಷ ಒಟ್ಟಾದರೆ ಮಾತ್ರ ಪ್ರಾಣಾಂತಿಕವಾಗಬಹುದು.

ತಿಂಡಿ ತಯಾರಿಕೆ
ಪ್ರೈಡ್‌ ಜಾತಿಯ ಚೇಳುಗಳನ್ನು ಚೀನೀಯರು ಖಾದ್ಯ ತಯಾರಿಸಿ ತಿನ್ನುತ್ತಾರೆ. ಅದರಿಂದ ವೈನ್‌ ತಯಾರಿಸುತ್ತಾರೆ. ಚೇಳಿನ ಅಂಗಾಂಶಗಳಿಂದ ಕ್ಯಾನ್ಸರ್‌, ಮಲೇರಿಯಾ, ಸಂಧಿವಾತಗಳಿಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಮಹತ್ವದ ಹಂತ ತಲುಪಿದ್ದಾರೆ. ಚೇಳು ಅಂದರೆ ಭಯವೂ ಇದೆ. ಚೇಳಿನಿಂದ ಅಭಯವೂ ಇದೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

1-dsdsadsa

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

When will American astronauts return from space?

NASA; ಅಂತರಿಕ್ಷದಲ್ಲೇ ಅತಂತ್ರ! ಬಾಹ್ಯಾಕಾಶದಿಂದ ಅಮೆರಿಕದ ಗಗನಯಾತ್ರಿಗಳು ಮರಳೋದು ಯಾವಾಗ?

Bajaj Bruzer is the world’s first CNG bike

Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

Ajit Doval is India’s James Bond!

Spy Master; ಅಜಿತ್‌ ದೋವಲ್‌ ಭಾರತದ ಜೇಮ್ಸ್‌ಬಾಂಡ್‌!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1-asdsad

Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.