![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 24, 2020, 7:35 PM IST
ಬೆಳಗಾವಿ: ಲಾಕ್ಡೌನ್ದಿಂದಾಗಿ ಅದ್ಧೂರಿ ಮದುವೆಗೆ ಬ್ರೇಕ್ ಬಿದ್ದಿದ್ದರಿಂದ ನಗರದಿಂದ 10ಕಿ.ಮೀ. ದೂರದಲ್ಲಿರುವ ಮಂಡೋಳಿ ಗ್ರಾಮದಲ್ಲಿ ಸರ್ಕಾರದ ನಿಯಮದಂತೆ ಕಡಿಮೆ ಜನರ ಸಮ್ಮುಖದಲ್ಲಿ ರೈತನ ಮಕ್ಕಳು ರವಿವಾರ ಹಸೆಮಣೆ ಏರಿದ್ದು, ಹಳೆಯ ಕಾಲದ ಪದ್ಧತಿಯಂತೆ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಗ್ರಾಮಸ್ಥರ ಆಶೀರ್ವಾದ ಪಡೆದರು.
ಮಂಡೋಳಿ ಗ್ರಾಮದ ಮಂಗೇಶ ದಳವಿ ಹಾಗೂ ವಾಘವೋಡೆ ಗ್ರಾಮದ ವಿದ್ಯಾ ಪಾಟೀಲ ರವಿವಾರ ಮಾಸ್ಕ್ ಧರಿಸಿಕೊಂಡು ಪದ್ಧತಿಯಂತೆ ಸರಳವಾಗಿ ಅದ್ಧೂರಿ ಇಲ್ಲದೇ ಸಪ್ತಪದಿ ತುಳಿದರು. 50ಕ್ಕಿಂತ ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾದ ವಧು-ವರರು ಮಾಸ್ಕ್ ಧರಿಸಿಕೊಂಡಿದ್ದು ವಿಶೇಷವಾಗಿತ್ತು.
ಲಾಕ್ಡೌನ್ ಇದ್ದರೂ ನಿಗದಿಯಂತೆ ಮದುವೆ ಮುಹೂರ್ತ ಫಿಕ್ಸ್ ಆಗಿದ್ದು, ರವಿವಾರ ಸಂಪೂರ್ಣ ಲಾಕ್ಡೌನ್ದಿಂದಾಗಿ ಮದುವೆ ಸಮಾರಂಭಕ್ಕೆ ಅಡಚಣೆ ಉಂಟಾಯಿತು. ಮನೆಯಲ್ಲಿಯೇ ಸರಳ ವಿವಾಹವಾದ ವಧು-ವರರನ್ನು ಆಶೀರ್ವದಿಸಲು ಬಹಳಷ್ಟು ಜನ ಬರಲಿಲ್ಲ ಎಂಬ ಕಾರಣಕ್ಕೆ ಚಕ್ಕಡಿ ಏರಿ ಗ್ರಾಮಸ್ಥರ ಆಶೀರ್ವಾದ ಪಡೆದರು.
ಹಳೆಯ ಕಾಲದಲ್ಲಿ ಚಕ್ಕಡಿಯಲ್ಲಿ ಕುಳಿತು ಮೆರವಣಿಗೆ ಮಾಡುತ್ತಿದ್ದ ಪದ್ಧತಿ ಈಗ ಮತ್ತೆ ಮರುಕಳಿಸಿದ್ದು, ರೈತನ ಮಕ್ಕಳಾದ ಮಂಗೇಶ ಹಾಗೂ ವಾಘವೋಡೆಯ ವಿದ್ಯಾ ಚಕ್ಕಡಿಯಲ್ಲಿ ಕುಳಿತು ಗ್ರಾಮಸ್ಥರಿಗೆ ಕೈ ಮುಗಿದು ಆಶೀರ್ವಾದ ಪಡೆದುಕೊಂಡು ಧನ್ಯರಾದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.