Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ.

Team Udayavani, May 17, 2023, 3:02 PM IST

Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

ಬೆಳಗಾವಿ: ಸಿಎ (ಚಾರ್ಟೆರ್ಡ್‌ ಅಕೌಂಟ್‌) ಮಾಡಿ ನೌಕರಿ ಹಿಡಿಯಬೇಕಿದ್ದ ಯುವತಿ ತಂದೆಯ ಸಾವಿನಿಂದಾಗಿ ಅರ್ಧಕ್ಕೆ ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡು ಒಂದು ಎಕರೆ ಜಮೀನಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಆದಾಯ
ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಈ ಯುವತಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ 26 ವರ್ಷದ ನಿಕಿತಾ ವೈಜು ಪಾಟೀಲ ಎಂಬ ಯುವತಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಒಂದು ಎಕರೆ ಜಮೀನಿನಲ್ಲಿ ಮೆಣಸಿಕಾಯಿ ಬೆಳೆದು ತಿಂಗಳಿಗೆ 5ರಿಂದ 6 ಲಕ್ಷ ರೂ. ಗಳಿಸುತ್ತಿದ್ದಾಳೆ. ಯುವತಿಯ ಈ ಸಾಧನೆಗೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ.

ಹೊಲದಲ್ಲಿ ಮನಸ್ಸು ಕೊಟ್ಟು ದುಡಿದರೆ ಭೂಮಿ ನಮ್ಮ ಕೈ ಬಿಡುವುದಿಲ್ಲ ಎಂದು ನಂಬಿರುವ ನಿಕಿತಾ ಮಾದರಿಯಾಗಿದ್ದಾಳೆ. ಇಂದಿನ ದಿನಮಾನದಲ್ಲಿ ಕೃಷಿ ಎಂದರೆ ಮೂಗು ಮುರಿಯುವ ಜನರಿಗೆ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಲ್ಲೂ ಸಿಗಲಾರದಷ್ಟು ಆದಾಯ ಯುವತಿ ನಿಕಿತಾ ಗಳಿಸುತ್ತಿದ್ದಾಳೆ.

ಚಿಂತೆಗೀಡಾಗಿದ್ದ ಕುಟುಂಬಕ್ಕೆ ಆಸರೆ: ಕಳೆದ ವರ್ಷ ಯುವತಿ ನಿಕಿತಾಳ ತಂದೆ ವೈಜು ಪಾಟೀಲ ಸ್ವಂತ ಹೊಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆ ನಡೆಸುತ್ತಿದ್ದ ಯಜಮಾನನೇ ಇಲ್ಲವಾದಾಗ ಇಡೀ ಕುಟುಂಬ ದಿಗ್ಭ್ರಾಂತಗೊಂಡು ಏನೂ ತೋಚದೇ ತಲೆಗೆ ಕೈಹಚ್ಚಿ ಕುಳಿತುಕೊಂಡಿತು.

ನಾಲ್ಕು ಎಕರೆ ಜಮೀನಿದ್ದರೂ ಅದನ್ನು ಮಾಡುವವರು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಿಕಿತಾ ಪಾಟೀಲ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿ ಭರತೇಶ ಕಾಲೇಜಿನಲ್ಲಿ ಸಿ.ಎ(ಚಾರ್ಟೆರ್ಡ್‌ ಅಕೌಂಟೆಂಟ್‌) ತರಬೇತಿಗೆ ಪ್ರವೇಶ ಪಡೆದಿದ್ದಳು. ದ್ವಿತೀಯ ವರ್ಷ ಸಿ.ಎ ಓದುತ್ತಿದ್ದಾಗಲೇ ತಂದೆ ವೈಜು ಸಾವಿಗೀಡಾದರು.

ಇನ್ನು ಸಿ.ಎ ಪೂರ್ಣಗೊಳಿಸಿ ಮುಗಿಸಿ ಬೆಂಗಳೂರು ಅಥವಾ ಪುಣೆಯಲ್ಲಿ ನೌಕರು ಮಾಡುವ ಮಹದಾಸೆ ಹೊಂದಿದ್ದಳು. ತಂದೆಯ ಸಾವು ನಿಕಿತಾಳ ಜೀವನದಲ್ಲಿ ಅತಿ ದೊಡ್ಡ ದುರಂತವಾಯಿತು. ಕೃಷಿ ಮಾಡಿ ನಿಕಿತಾಳನ್ನು ತಂದೆ ಓದಿಸಿದ್ದರು. ಇನ್ನು ಕುಟುಂಬ ನಡೆಯುವುದಾದರೂ ಹೇಗೆ ಎಂದು ನಿಕಿತಾ ಚಿಂತೆಗೀಡಾದಳು.

ವಯಸ್ಸಾದ ತಾಯಿ ಅಂಜನಾ ಪಾಟೀಲ, ಹಿರಿಯ ಸಹೋದರ ಅಭಿಷೇಕಗೆ ಕೃಷಿ ಮಾಡುವುದು ಆಗದ ಮಾತು ಎಂದು ಅರಿತ ನಿಕಿತಾ ತಂದೆ ತೀರಿ ಹೋದ ಆರೇ ತಿಂಗಳಲ್ಲಿ ಸಿ.ಎ. ಓದನ್ನು ಅರ್ಧಕ್ಕೆ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಳು. ಆಗ ನಿಕಿತಾಳ ನಿರ್ಧಾರದಿಂದ ಕುಟುಂಬ ಆಶ್ಚರ್ಯಗೊಂಡಿತು. ವಯಸ್ಸಿಗೆ ಬಂದ ಮಗಳು ಕೃಷಿಯಲ್ಲಿ ತೊಡಗಿಕೊಂಡರೆ ಹೇಗೆ ಎಂದು ಚಿಂತಿತರಾದರು. ಆಗ ತಾಯಿ ಹಾಗೂ ಅಣ್ಣನ ಮನವೊಲಿಸಿದ ನಿಕಿತಾ ಸಿ.ಎ. ಓದುವುದನ್ನು ಬಿಟ್ಟು ಕೃಷಿಕಳಾದಳು.

ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ: ಚಿಕ್ಕಂದಿನಿಂದಲೂ ನಿಕಿತಾಗೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಂದೆಯ 4 ಎಕರೆ ಜಮೀನಿನಲ್ಲಿ ಮೊದಲಿಗೆ ಒಂದು ಎಕರೆಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿಕಾಯಿಯನ್ನು ಮೂರು
ಭಾಗಗಳಾಗಿ ಹಚ್ಚಿದಳು. ಗಿಡಗಳನ್ನು ಹಚ್ಚುವಾಗ ಅಂತರ ಹೆಚ್ಚಿಸಿಕೊಂಡು ಪೈಪ್‌ ಮೂಲಕ ಹನಿ ನೀರಾವರಿ ಅಳವಡಿಸಿದಳು.

ಸುಮಾರು 3ರಿಂದ 4 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಗಿಡಗಳಲ್ಲಿ ಹುಲುಸಾಗಿ ಮೆಣಸಿಕಾಯಿ ಬೆಳೆದವು. ಮೊದಲ ಬಾರಿಗೆ ಮೆಣಸಿನಕಾಯಿ ತೆಗೆಯುವಾಗ ನಾಲ್ಕು ಟನ್‌ಗೂ ಅಧಿಕ ಮೆಣಸಿಕಾಯಿ ಬಂತು. 10 ಕೆ.ಜಿ. ಮೆಣಸಿನಕಾಯಿಗೆ 500 ರೂ. ವರೆಗೂ ದರ ಇದೆ. ಸರಿಸುಮಾರು 2 ಲಕ್ಷ ರೂ. ಗೂ ಹೆಚ್ಚು ದರ ಬಂತು.

ತಿಂಗಳಿಗೆ 6 ಲಕ್ಷ ರೂ ಆದಾಯ: ಹೊಲದಲ್ಲಿ ಮೆಣಸಿನಕಾಯಿ ಕೀಳುವಾಗ 10-15 ಮಹಿಳೆಯರೇ ಕೆಲಸಕ್ಕೆ ಇದ್ದಾರೆ. 10-12 ದಿನಕ್ಕೊಮ್ಮೆ ಮೆಣಸಿನಕಾಯಿ ತೆಗೆಯಲಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಮೂರು ಭಾಗ ಮಾಡಿರುವುದರಿಂದ ಒಂದು ಭಾಗದಲ್ಲಿಯ ಮೆಣಸಿನಕಾಯಿ ಕೀಳಲು 4-5 ದಿನ ಬೇಕಾಗುತ್ತದೆ. ಗಿಡಗಳ ಆರೈಕೆ, ನೀರು ಪೂರೈಸುವುದು, ಕಸ ತೆಗೆಯುವುದು ಸೇರಿ ಮತ್ತೆ 10-12 ದಿನಕ್ಕೆ ಎರಡನೇ ಭಾಗದಲ್ಲಿ ಮೆಣಸಿನಕಾಯಿ ತೆಗೆಯಲಾಗುತ್ತದೆ.

35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ. ಒಮ್ಮೆ ಮೆಣಸಿನಕಾಯಿ ತೆಗೆದರೆ 4ರಿಂದ 4.50 ಟನ್‌ ಮೆಣಸಿನಕಾಯಿ ಬರುತ್ತದೆ. ಸುಮಾರು 2ರಿಂದ 2.30 ಲಕ್ಷ ರೂ. ವರೆಗೆ ದರ ಬರುತ್ತದೆ. 10-15 ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಾರೆ. ದಿನಗೂಲಿ, ಔಷಧ ಸಿಂಪಡಣೆ, ನಿರ್ವಹಣೆ, ವಿದ್ಯುತ್‌ ಬಿಲ್‌ ಸೇರಿ ಖರ್ಚು ವೆಚ್ಚ ತೆಗೆದು ತಿಂಗಳಿಗೆ ಆರು ಲಕ್ಷ ರೂ. ವರೆಗೆ ಆದಾಯ ಸಿಗುತ್ತಿದೆ. ಜನೇವರಿಯಲ್ಲಿ ಗಿಡಗಳನ್ನು ಹಚ್ಚಿ ಏಪ್ರಿಲ್‌ ಮೊದಲ ವಾರದಿಂದ ಇಳುವರಿ ಆರಂಭವಾಗಿದೆ. ಈವರೆಗೆ ಒಟ್ಟು ಸುಮಾರು 8 ಲಕ್ಷಕ್ಕೂ ಅಧಿ ಕ ಆದಾಯ ನಿಕಿತಾಳಿಗೆ ಸಿಕ್ಕಿದೆ.

ಹೆಗಲಿಗೆ ಹೆಗಲು ಕೊಟ್ಟ ಅಣ್ಣ-ಚಿಕ್ಕಪ್ಪ
ಸಿ.ಎ. ಓದುತ್ತಿದ್ದ ನಿಕಿತಾ ತಂದೆಯ ನಿಧನಾ ನಂತರ ಕೃಷಿಯಲ್ಲಿ ತೊಡಗಿಕೊಂಡು ಬೆಳಗಾವಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ನೌಕರಿ ಹಿಡಿದು ಸಂಬಳ ಪಡೆಯುವುದಕ್ಕಿಂತ 10-15 ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾಳೆ. ದಿನಗೂಲಿ ಮಹಿಳೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಆತ್ಮೀಯವಾಗಿ ತಾನೂ ಕೆಲಸ ಮಾಡುತ್ತಾಳೆ.

ಈಕೆಗೆ ಸಹೋದರ ಅಭಿಷೇಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾನೆ. ನಿಕಿತಾಳ ಚಿಕ್ಕಪ್ಪ ತಾನಾಜಿ ಪಾಟೀಲ ನಿಕಿತಾಗೆ ಕೃಷಿ ಸಲಹೆ ನೀಡುತ್ತಾರೆ. ಒಂದೆಡೆ ಅಣ್ಣ ಅಭಿಷೇಕ, ಇನ್ನೊಂದೆಡೆ ಚಿಕ್ಕಪ್ಪ ತಾನಾಜಿಯ ಮಾರ್ಗದರ್ಶನದಲ್ಲಿ ಕೈ ತುಂಬ ಆದಾಯ ಗಳಿಸುತ್ತಿದ್ದಾಳೆ.

ಮೆಣಸಿನಕಾಯಿಗೆ ಭಾರೀ ಬೇಡಿಕೆ
ಜಾಫರವಾಡಿಯ ಹೊಲದಲ್ಲಿ ನಿಕಿತಾ ಬೆಳೆಯುತ್ತಿರುವ ಮೆಣಸಿನಕಾಯಿಗೆ ಭಾರೀ ಬೇಡಿಕೆ ಇದೆ. 3ರಿಂದ 5 ಇಂಚು ಬೆಳೆಯುವ ಈ ಮೆಣಸಿನಕಾಯಿಗೆ ದರವೂ ಹೆಚ್ಚಿದೆ. ಮೆಣಸಿನಕಾಯಿ ಕತ್ತಿಸಿದ ಬಳಿಕ ಮನೆಯಲ್ಲಿಯೇ 10 ಕೆ.ಜಿ. ತೂಕ ಮಾಡಿ ಚೀಲದಲ್ಲಿ ಹಾಕಿ ನೇರವಾಗಿ ಎಪಿಎಂಸಿಗೆ ಕಳುಹಿಸುತ್ತಾಳೆ. ತರಕಾರಿ ಮಾರುಕಟ್ಟೆಗೆ ಹೋದ ಬಳಿಕ ತೂಕದಲ್ಲಿ ಮೋಸ ಎಂಬ ಮಾತೇ ಇಲ್ಲ. ಈ ಮೆಣಸಿನಕಾಯಿ ಗೋವಾ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತದೆ.

ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ಬಹಳ ಆಸಕ್ತಿ. ತಂದೆ ಕೃಷಿಯಲ್ಲಿ ಬಂದ ಆದಾಯದಲ್ಲಿ ನನ್ನನ್ನು ಓದಿಸಿದ್ದಾರೆ. ತಂದೆಯ ಸಾವು ನನ್ನ ಜೀವನದಲ್ಲಿ ಸಿಡಿಲು ಬಡಿದಂತಾಯಿತು. ಸಿ.ಎ. ಓದುವುದನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ
ತೊಡಗಿಕೊಂಡೆ. ಮೆಟ್ರೋ ಪಾಲಿಟನ್‌ ಸಿಟಿಯಲ್ಲಿ ನೌಕರಿ ಮಾಡುವುದಕ್ಕಿಂತ ಇದೇ ಲೇಸು. ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿನಕಾಯಿ ಗಿಡ ಹಚ್ಚಿ ಉತ್ತಮ ಆದಾಯ ಪಡೆಯುತ್ತಿದ್ದೇನೆ.
∙ನಿಕಿತಾ ಪಾಟೀಲ,ಕೃಷಿ ಸಾಧಕಿ

*ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belagavi: Rpe, mrder have increased due to the court system: Muthalik

Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್

Belagavi: Return to public life in two weeks: Minister Lakshmi Hebbalkar

Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.