Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್
ಮಹಿಳೆಯರೂ ಸೇರಿ ನೂರಾರು ಮಂದಿಯಿಂದ ರೈಲಿಗೆ ಅದ್ಧೂರಿ ಸ್ವಾಗತ
Team Udayavani, Oct 13, 2024, 12:14 AM IST
ಭಟ್ಕಳ: ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಕಲ್ಪಿಸಿ ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ರೈಲ್ವೆ ಹಿತರಕ್ಷಣಾ ಸಮಿತಿಯ ಎಸ್.ಎಸ್. ಕಾಮತ್ ಹೇಳಿದರು.
ಮುರ್ಡೇಶ್ವರದಲ್ಲಿ ಶನಿವಾರ ಸಂಜೆ 3.30ಕ್ಕೆ ಆರಂಭವಾದ ತಿರುಪತಿ ರೈಲಿನ ಇಂಜಿನ್ಗೆ ಹೂ, ಬಾಳೆಕಂಬ ಕಟ್ಟಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಕರಾವಳಿಯಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ರೈಲು ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪರಿಶ್ರಮವೇ ಸಾಕ್ಷಿ. ಈ ಭಾಗದಿಂದ ಅತೀ ಹೆಚ್ಚು ಜನ ತಿರುಪತಿ ಯಾತ್ರೆ ಮಾಡುತ್ತಿದ್ದು ಅವರಿಗೆ ನೇರ ಸಂಪರ್ಕದ ರೈಲು ಅನುಕೂಲವಾಗಲಿದೆ ಎಂದರು. ರೈಲು ಆರಂಭಕ್ಕೆ ಸಹಕರಿಸಿದ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ರೈಲ್ವೇ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಸೇರಿ ರೈಲಿಗೆ ಸ್ವಾಗತ ಕೋರಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ರೈಲ್ವೇ ಹಿತರಕ್ಷಣಾ ಸಮಿತಿಯ ರಾಜೀವ ಗಾಂವಕರ್, ಮುರ್ಡೇಶ್ವರದ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್.ಎನ್.ಎಸ್. ಆಸ್ಪತ್ರೆಯ ವ್ಯವಸ್ಥಾಪಕ ಶಿವಾನಂದ, ಪ್ರಮುಖರಾದ ಫಿಲಿಫ ಅಲ್ಮೇಡಾ, ಸುಬ್ರಾಯ ನಾಯ್ಕ ಕಾಯ್ಕಿಣಿ, ಹೋಟೆಲ್ ಉಧ್ಯಮಿ ಗಜಾನನ ನಾಯ್ಕ, ಸುಂದರ ಕಾಮತ್, ಕೃಷ್ಣಾ ನಾಯ್ಕ, ಜಟ್ಟಪ್ಪ ನಾಯ್ಕ, ಸತೀಶ ಶೇಟ್, ರೈಲ್ವೇ ಸ್ಟೇಶನ್ ಮಾಸ್ಟರ್ ಗಣಪತಿ ದೇವಾಡಿಗ, ವಾಣಿಜ್ಯ ಅಧಿಕಾರಿ ರವಿ ದೇವಾಡಿಗ ಸೇರಿ ನೂರಾರು ಜನರು ಉಪಸ್ಥಿತರಿದ್ದರು.
ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
ಭಟ್ಕಳ: ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿಯಾಗಿರುವ ಮುರ್ಡೇಶ್ವರ- ತಿರುಪತಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ರೈಲಿಗೆ ಶಾಸ್ತ್ರೋಕ್ತ ಪೂಜೆ ಸಲ್ಲಿಸಿ ಕೇಂದ್ರ ಸರಕಾರ ಹಾಗೂ ರೈಲ್ವೇ ಸಚಿವರಿಗೆ ಅಭಿನಂದನಾ ಘೋಷಣೆ ಕೂಗಿದರು.
ಮುರ್ಡೇಶ್ವರ ತಿರುಪತಿ ರೈಲು ಪ್ರತಿ ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಹೊರಡುತ್ತಿದ್ದು ಕಾಚಿಗುಡದಿಂದ ಮಂಗಳವಾರ ಮತ್ತು ಶುಕ್ರವಾರ ಹೊರಡಲಿದೆ. ಶನಿವಾರ ಸಂಜೆ ಮುರ್ಡೇಶ್ವರದಿಂದ ಹೊರಟ ರೈಲು ಭಟ್ಕಳಕ್ಕೆ ತಲುಪುತ್ತಿದ್ದಂತೆ ನೂರಾರು ಸಾರ್ವಜನಿಕರು ಸೇರಿ ರೈಲಿಗೆ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ಪಾಂಡುರಂಗ ನಾಯ್ಕ, ಬಾಬಾನಂದ ಪೈ, ವಿನಾಯಕ ಪೈ, ಉದಯ ಪ್ರಭು, ಜಗದೀಶ ನಾಯ್ಕ, ಶೇಷಗಿರಿ ನಾಯ್ಕ ಸೇರಿ ಸಾರ್ವಜನಿಕರು, ರೈಲ್ವೇ ಹೋರಾಟ ಸಮಿತಿ ಸದಸ್ಯರು, ರೈಲ್ವೇ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನವರಾತ್ರಿ ಉತ್ಸವದಲ್ಲಿ ಗಮನಸೆಳೆದ ಕಾಂತಾರ ಖ್ಯಾತಿಯ ಮಾನಸಿ ನೇತೃತ್ವದ ಸಾಂಸ್ಕೃತಿಕ ಕಾರ್ಯಕ್ರಮ
Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ
Sirsi ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆಗೆ ಮನವಿ
Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ
Dandeli: ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಕೃಷ್ಣ ಭಾಗವತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.