Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್

, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.

Team Udayavani, Jul 28, 2024, 12:30 PM IST

 Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್

ಪಾಟ್ನಾ: ನಾಲ್ಕು ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ 70ವರ್ಷದ ಮುದುಕನೊಬ್ಬ 25 ವರ್ಷದ ಯುವತಿ ಜೊತೆ ಮರುವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬಿಹಾರ ಗಯಾ ಜಿಲ್ಲೆಯ ಬೈಡಾ ಗ್ರಾಮದ ಮೊಹಮ್ಮದ್‌ ಸಲಿಮುಲ್ಲಾ ನೂರಾನಿ (70ವರ್ಷ) ಎಂಬಾತ ಹಂಝಾಪುರ್‌ ನ ಇಸ್ಲಾಮ್‌ ನಗರ ನಿವಾಸಿ ರೇಷ್ಮಾ ಪರ್ವಿನ್‌ (25ವರ್ಷ) ಎಂಬಾಕೆಯನ್ನು ವಿವಾಹವಾಗಿದ್ದು, ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ.

ಸಲಿಮುಲ್ಲಾ ಕೃಷಿಕರಾಗಿದ್ದು, ಇವರ ಪತ್ನಿ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಮನೆಯಲ್ಲಿ ಒಬ್ಬರೇ ಇರುವ ಸಲೀಮುಲ್ಲಾ ಇತ್ತೀಚೆಗೆ ಮರು ವಿವಾಹವಾಗಿರುವುದಾಗಿ ವರದಿ ವಿವರಿಸಿದೆ.

ನೋಯ್ಡಾ ಮೂಲದ ನ್ಯೂಸ್‌ ನೆಟ್‌ ವರ್ಕ್‌ ನ ಎಡಿಟರ್‌ ಇನ್‌ ಚೀಫ್‌ ಅನುರಾಗ್‌ ಚಡ್ಡಾ ಅವರ ಮಾಹಿತಿ ಪ್ರಕಾರ, ನೂರಾನಿಗೆ ಆರು ಹೆಣ್ಣು ಹಾಗೂ ಓರ್ವ ಮಗ ಸೇರಿದಂತೆ ಏಳು ಮಕ್ಕಳು ಇದ್ದಿರುವುದಾಗಿ ತಿಳಿಸಿದ್ದಾರೆ.

ಮತ್ತೊಂದು ವರದಿಯ ಪ್ರಕಾರ, ನೂರಾನಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ವಿವಾಹವಾಗಿದ್ದು, ಅವರು ನಗರದಲ್ಲಿ ವಾಸವಾಗಿದ್ದು, ಮನೆಯಲ್ಲಿ ನೂರಾನಿ ಒಬ್ಬರೇ ಇದ್ದಿದ್ದರಿಂದ ಮರು ವಿವಾಹವಾಗಿರುವುದಾಗಿ ವರದಿ ತಿಳಿಸಿದೆ.

ದಂಪತಿ ಇಸ್ಲಾಮ್‌ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು. ನೂರಾನಿ ವಿವಾಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಟೀಕೆ-ಟಿಪ್ಪಣಿ ವ್ಯಕ್ತವಾಗಿದೆ.‌

ಟಾಪ್ ನ್ಯೂಸ್

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.