Border Dispute: ಭಾರತದ ಗಡಿಯಲ್ಲಿ ಚೀನಾ ಹೊಸ ವಸಾಹತು ನಿರ್ಮಾಣ

 ಪ್ಯಾಂಗಾಂಗ್‌ ಲೇಕ್‌ ಬಳಿ 100 ಕಟ್ಟಡ, ಹೆಲಿಪ್ಯಾಡ್‌, ಉಪಗ್ರಹ ಆಧರಿತ ಚಿತ್ರದಿಂದ ಮಾಹಿತಿ ಬಹಿರಂಗ

Team Udayavani, Oct 15, 2024, 7:40 AM IST

china-Border

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಸಂಘರ್ಷದ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಗಡಿಯಲ್ಲಿರುವ ಪ್ಯಾಂಗಾಂಗ್‌ ಲೇಕ್‌ ಬಳಿ ಚೀನಾ ಹೊಸದಾಗಿ ಸೇನಾ ಬಳಕೆಗೆ ವಸಾಹತು ನಿರ್ಮಾಣ ಮಾಡುತ್ತಿದೆ.

2020ರಲ್ಲಿ ಚೀನಾ ಮತ್ತು ಭಾರತ ನಡುವೆ ಸಂಭವಿಸಿದ ಗಾಲ್ವಾನ್‌ ಸಂಘರ್ಷದ ಸ್ಥಳದಿಂದ 38 ಕಿ.ಮೀ. ದೂರದಲ್ಲಿ ಈ ವಸಾಹತು ನಿರ್ಮಾಣವಾಗುತ್ತಿದೆ. ಪ್ಯಾಂಗಾಂಗ್‌ ತ್ಸೋ ಲೇಕ್‌ ಜಗತ್ತಿನಲ್ಲೇ ಎತ್ತರ ಪ್ರದೇಶದಲ್ಲಿರುವ ಉಪ್ಪು ನೀರಿನ ಸರೋವರವಾಗಿದೆ. ಚೀನಾ ವಸಾಹತು ನಿರ್ಮಾಣ ಚಿತ್ರಗಳನ್ನು ಉಪಗ್ರಹದ ಮೂಲಕ ಸೆರೆ ಹಿಡಿಯಲಾಗಿದೆ.

ಸುಮಾರು 17 ಎಕರೆಯಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ವಸಾಹುತು ಮೂಲೆಯಲ್ಲಿ ಸುಮಾರು 150 ಮೀ. ಉದ್ದದ ಆಯತಾಕಾರದ ಸ್ಟ್ರಿಪ್‌ ಕೂಡ ನಿರ್ಮಾಣ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಹೆಲಿಕಾಪ್ಟರ್‌ಗೆ ಬಳಕೆಯಾಗಬಹುದು ಎಂದು ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಪ್ರೊಫೆಸರ್‌ ಆಗಿರುವ ವೈ ನಿತ್ಯಾನಂದಂ ಹೇಳಿದ್ದಾರೆ.

ಈ ವಸಾಹತು ನಿರ್ಮಾಣವನ್ನು 2024ರ ಏಪ್ರಿಲ್‌ನಲ್ಲಿ ಶುರು ಮಾಡಲಾಗಿದ್ದು, ಸರೋವರದ ಕಡೆಗೆ ಇಳಿಜಾರು ಇರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಡಳಿತಾತ್ಮಕ ಮತ್ತು ಕಾರ್ಯಾಚರಣೆಗಳಿಗಾಗಿ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುತ್ತವೆ ಸೇನಾ ಮೂಲಗಳು. ವಸತಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡಗಳು ಬಹುತೇಕ ಪೂರ್ಣಗೊಳ್ಳುವ ಹಂತವನ್ನು ತಲುಪಿವೆ ಎನ್ನಲಾಗುತ್ತಿದೆ.

ತೈವಾನ್‌ ದ್ವೀಪ ಸುತ್ತುವರಿದು ಚೀನಾ ಸೇನೆ ಸಮರಾಭ್ಯಾಸ
ತೈಪೆ: ಚೀನಾದ ರಕ್ಷಣಾ ಪಡೆಗಳು ಸೋಮವಾರ ಬೆಳಗ್ಗೆ 125ಕ್ಕೂ ಹೆಚ್ಚು ಯುದ್ಧ ವಿಮಾನಗಳು, ಯುದ್ಧ ನೌಕೆಗಳೊಂದಿಗೆ ತೈವಾನ್‌ ದ್ವೀಪವನ್ನು ಸುತ್ತುವರಿದು ಸಮರಾಭ್ಯಾಸ ನಡೆಸಿದೆ. ದಾಖಲೆ ಮಟ್ಟದ ಯುದ್ಧ ವಿಮಾನಗಳು, ಯುದ್ಧ ನೌಕೆಗಳ ಮೂಲಕ ತೈವಾನ್‌ನ ಪ್ರಮುಖ ಬಂದರುಗಳನ್ನು ಚೀನಾ ಮುಚ್ಚಿ ತೈವಾನ್‌ಗೆ ಎಚ್ಚರಿಕೆ ನೀಡಿದೆ.

ತಾವು ಚೀನಾದ ಭಾಗ ಎಂಬುದನ್ನು ಒಪ್ಪಿಕೊಳ್ಳದೇ, ಪ್ರತ್ಯೇಕತಾವಾದ ಅನುಸರಿಸಲು ಮುಂದಾದ ತೈವಾನ್‌ಗೆ ಎಚ್ಚರಿಕೆ ನೀಡಲು ಈ ಸಮರಾಭ್ಯಾಸ ನಡೆಸಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. 4 ದಿನಗಳ ಹಿಂದಷ್ಟೇ ತೈವಾನ್‌ ಅಧ್ಯಕ್ಷ ಲಾಯ್‌ ಚಿಂಗ್‌-ಟೆ “ತೈವಾನ್‌ ಅನ್ನು ಪ್ರತಿನಿಧಿಸಲು ಚೀನಾಗೆ ಹಕ್ಕಿಲ್ಲ’ ಎಂದಿದ್ದರು. ಈ ಹೇಳಿಕೆಗೆ ಇದು ಚೀನಾದ ಪ್ರತ್ಯುತ್ತರ ಎಂದು ಸ್ವತಃ ಚೀನಾ ಹೇಳಿದೆ.

ಟಾಪ್ ನ್ಯೂಸ್

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

2

Bilichukki Hallihakki kannada Movie: ಇದು ಹಳ್ಳಿ ಹಕ್ಕಿಯ ಬಿಳಿಚುಕ್ಕಿ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

salman

Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್‌ ಗ್ಯಾಂಗ್‌!

Chinnaswamy

India-New Zeland Test: ಚಿನ್ನಸ್ವಾಮಿ ಮೈದಾನಕ್ಕೆ 25ನೇ ಟೆಸ್ಟ್‌ ಪಂದ್ಯದ ಗರಿಮೆ

HAL

Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

salman

Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್‌ ಗ್ಯಾಂಗ್‌!

HAL

Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.