![BJP 2](https://www.udayavani.com/wp-content/uploads/2024/07/BJP-2-1-415x252.jpg)
By Election: ಸಚಿವ ಜಾರಕಿಹೊಳಿ ಮುಂದೆಯೇ ಶಿಗ್ಗಾವಿ ಟಿಕೆಟ್ ಕಿತ್ತಾಟ
ಪ್ರವಾಸಿ ಮಂದಿರದ ಕಿಟಕಿ, ಬಾಗಿಲಿನ ಗಾಜುಗಳು ಧ್ವಂಸ
Team Udayavani, Jul 3, 2024, 11:41 PM IST
![Congress-Symbol](https://www.udayavani.com/wp-content/uploads/2024/07/Congress-Symbol-620x372.jpg)
ಶಿಗ್ಗಾವಿ: ಉಪಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನ ಎರಡು ಬಣಗಳು ಸಚಿವ ಸತೀಶ ಜಾರಕಿಹೊಳಿ ಎದುರೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಬುಧವಾರ ಸಚಿವ ಸತೀಶ ಜಾರಕಿಹೊಳಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಲು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ಅಜ್ಜಂಪೀರ ಖಾದ್ರಿ ಕುಳಿತಿದ್ದ ಕೊಠಡಿಗೆ ಯಾಸೀರ್ ಖಾನ್ ಪಠಾಣ, ಸೋಮಣ್ಣ ಬೇವಿನ ಮರದ ನೇತೃತ್ವದ ಬಣದವರು ಹೋಗಿ ಕುಳಿತಿದ್ದಾರೆ.ಈ ವೇಳೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಅನಂತರ ಅಜ್ಜಂಪೀರ್ ಖಾದ್ರಿ ರಸ್ತೆಯಲ್ಲೇ ಕುರ್ಚಿ ಹಾಕಿಕೊಂಡು ತಮ್ಮ ಬಣದೊಂದಿಗೆ ಕುಳಿತರು. ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪ್ರವಾಸಿ ಮಂದಿರದ ಕಿಟಕಿ ಮತ್ತು ಬಾಗಿಲಿನ ಗಾಜುಗಳನ್ನು ಒಡೆದಿದ್ದಾರೆ. ಈ ವೇಳೆ ಗಲಾಟೆ ನಿಲ್ಲಿಸಿ
ಸಭೆಗೆ ಬರುವಂತೆ ಅವರನ್ನು ಮನವೊಲಿಸಲು ಸತೀಶ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಸಮಯ ರಸ್ತೆಯಲ್ಲೇ ನಿಂತ ಘಟನೆಯೂ ನಡೆಯಿತು.
ಟಾಪ್ ನ್ಯೂಸ್
![BJP 2](https://www.udayavani.com/wp-content/uploads/2024/07/BJP-2-1-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.