By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

ನ್ಯಾಯಸಮ್ಮತ ಚುನಾವಣೆ ನಡೆಸಲು ಆಗ್ರಹ

Team Udayavani, Nov 8, 2024, 3:10 AM IST

DVS

ಬೆಂಗಳೂರು: ರಾಜ್ಯ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಬಳಸುವ ಪ್ರಯತ್ನ ನಡೆಸುತ್ತಿದ್ದು ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿ ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರು ಸಂಡೂರಿನಲ್ಲಿ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿಯಾಗಿದ್ದಾರೆ. ಅದೇ ರೀತಿ ವಕ್ಫ್ ಮಂಡಳಿ ನೋಟಿಸ್‌ ಮೂಲಕ ರೈತರ ಜಮೀನು ಕಬಳಿಸಲು ಯತ್ನಿಸುತ್ತಿರುವ ಸಚಿವ ಜಮೀರ್‌ ಶಿಗ್ಗಾವಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಚನ್ನಪಟ್ಟಣ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಗ್ಗೆ ಹೇಳುವುದೇ ಬೇಡ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಪಕ್ಷದ ಈ ಮೂವರು ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕು. ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ನಿಗಾ ಇಲ್ಲದಿದ್ದರೆ, ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ ಎಂದು ಆರೋಪಿಸಿದರು.

ಎಲ್ಲ ಕಡೆಯಿಂದ ಚಕ್ರವ್ಯೂಹವನ್ನು ಪ್ರವೇಶಿಸಿದ ರೀತಿಯಲ್ಲಿ ಕಾಂಗ್ರೆಸ್ಸಿಗರು ಈ ಬಾರಿಯ ಉಪ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕದ ಬೊಕ್ಕಸ ಲೂಟಿಯಲ್ಲಿ ನಿಸ್ಸೀಮರಾದ 3 ಜನ ಕಾಂಗ್ರೆಸ್ಸಿಗರು ಉಪ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಅವರು ಸಾಕಷ್ಟು ಹಣಬಲದಿಂದ ಚುನಾವಣೆ ಗೆಲ್ಲುವ ಮಾನಸಿಕತೆ ಉಳ್ಳವರು ಎಂದು ದೂಷಿಸಿದರು. ಬಿಜೆಪಿ ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಶ್ರೀನಾಥ್‌ ಯು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

“ಜನರು ಹಣದ ಪ್ರಭಾವಕ್ಕೆ ಒಳಗಾದರೆ, ರಾಜ್ಯದಲ್ಲಿ ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯ ಆಡಳಿತ ಮುಂದುವರಿಯುತ್ತದೆ. ಹಗರಣಗಳ ಸರ್ಕಾರ, ರೈತರ ಭೂಮಿ ಕಬಳಿಕೆ, ಮಳೆ ಹಾನಿಯ ಪರಿಹಾರ ಕೊಡಲಾಗದ ದಯನೀಯ ಸ್ಥಿತಿ ಮತ್ತೆ ಮುಂದುವರೆಯಲಿದೆ. ರಾಜ್ಯದಲ್ಲಿ 3ಕ್ಕೆ 3 ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಹಣದ ಪ್ರಭಾವವನ್ನು ನಿಲ್ಲಿಸಬೇಕಿದೆ. ಈ ಗೆಲುವಿನಿಂದ ರಾಜ್ಯದ ದುರಾಡಳಿತದ ವಿರುದ್ಧ ಒಂದು ಸಂದೇಶ ನೀಡಬೇಕಿದೆ.”
– ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

ಟಾಪ್ ನ್ಯೂಸ್

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

1-pin

Pinaka ವ್ಯವಸ್ಥೆಗೆ ರಾಕೆಟ್‌ ಖರೀದಿಗೆ 10,147 ಕೋಟಿ ಒಪ್ಪಂದಕ್ಕೆ ಸರಕಾರ‌ ಸಹಿ

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ

Karnataka ಬಿಟ್‌ ಕಾಯಿನ್‌: ಎಸ್‌ಐಟಿ ವಿಚಾರಣೆ ಎದುರಿಸಿದ ನಲಪಾಡ್‌

Karnataka ಬಿಟ್‌ ಕಾಯಿನ್‌: ಎಸ್‌ಐಟಿ ವಿಚಾರಣೆ ಎದುರಿಸಿದ ನಲಪಾಡ್‌

Karnataka Govt.,ಅತಿಥಿ ಶಿಕ್ಷಕರ ಸಂಭಾವನೆಗೆ 154.29 ಕೋ.ರೂ. ಬಿಡುಗಡೆ

Karnataka Govt.,ಅತಿಥಿ ಶಿಕ್ಷಕರ ಸಂಭಾವನೆಗೆ 154.29 ಕೋ.ರೂ. ಬಿಡುಗಡೆ

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

108 ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಇಳಿಕೆ: ಆಕ್ಷೇಪಣೆಗೆ ಅವಕಾಶ

108 ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಇಳಿಕೆ: ಆಕ್ಷೇಪಣೆಗೆ ಅವಕಾಶ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1-ssasss

Starlink; 120 ಉಪಗ್ರಹಗಳು ನಾಶ!

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.