Cast Away: ಫೆಸಿಪಿಕ್‌ ಮಹಾಸಾಗರದೊಳಗಿನ ಜೀವನ ಕಥಾನಕದ ಚಿತ್ರ “ಕಾಸ್ಟ್‌ ಅವೇ”

ಅವನನ್ನು ಕಂಡು ಗುರುತು ಹಚ್ಚುವುದೇ ಸವಾಲಾಗುತ್ತದೆ.

Team Udayavani, Jul 15, 2024, 1:00 PM IST

Cast Away: ಫೆಸಿಪಿಕ್‌ ಮಹಾಸಾಗರದೊಳಗಿನ ಜೀವನ ಕಥಾನಕದ ಚಿತ್ರ “ಕಾಸ್ಟ್‌ ಅವೇ”

ಇದು ಮತ್ತೊಂದು ಅದಮ್ಯ ಆತ್ಮವಿಶ್ವಾಸದ ಚಿತ್ರ. ಕಾಸ್ಟ್‌ ಅವೇ ಹಾಲಿವುಡ್‌ ಸಿನಿಮಾ. 2000 ದಲ್ಲಿ ರೂಪಿತವಾದದ್ದು. ರಾಬರ್ಟ್‌
ಜೆಮಿಕಿಸ್‌ ನಿರ್ದೇಶಿಸಿ ನಿರ್ಮಿಸಿದ ಚಿತ್ರ. 90 ದಶಲಕ್ಷ ಡಾಲರ್‌ ಗಳಲ್ಲಿ ನಿರ್ಮಾಣವಾದ ಚಿತ್ರ ಸುಮಾರು 429 ಮಿಲಿಯನ್‌ ಡಾಲರ್‌ಗಳನ್ನು ಗಳಿಸಿ ದಾಖಲೆ ಮಾಡಿದ ಸಿನಿಮಾವಿದು.

ಕಥೆ ಎಷ್ಟು ಸಮರ್ಥವಾಗಿತ್ತೋ ಅಷ್ಟೇ ಅರ್ಥಪೂರ್ಣವಾಗಿ ಪಾತ್ರಕ್ಕೆ ಜೀವ ತುಂಬಿದವರು ಪ್ರಸಿದ್ಧ ನಟ ಟಾಮ್‌ ಹಾಂಕ್ಸ್‌. ಕಾರ್ಗೋ ಕಂಪೆನಿಯೊಂದರ ವ್ಯವಹಾರದ ಅನಾಲಿಸ್ಟ್‌ ಆಗಿ ವಿಶ್ವಾದ್ಯಂತ ವಿವಿಧ ನಗರಗಳಿಗೆ ಸೇವೆ ಒದಗಿಸಲು ಹೋಗುತ್ತಿರುತ್ತಾನೆ ಕಥಾ ನಾಯಕ.

ಕಾರ್ಯತಲ್ಲೀನತೆಗೆ ಹೆಸರಾದ ಕಥಾ ನಾಯಕ, ಅಂಥದೊಂದು ಟ್ರಿಪ್‌ ಗೆ ಸಜ್ಜಾಗುತ್ತಾನೆ. ತನ್ನ ಪ್ರಿಯತಮೆಯ ಮನವೊಲಿಸಿ ಆ ಟ್ರಿಪ್‌ಗೆ ಹೊರಡುವ ಕಥಾ ನಾಯಕ, ಪ್ರಯಾಣದ ಮಧ್ಯೆ ಕಾರ್ಗೋ ವಿಮಾನ ಆಪಘಾತಕ್ಕೀಡಾಗುತ್ತದೆ. ಕಥಾನಾಯಕನನ್ನು ಹೊರತುಪಡಿಸಿ ಬೇರಾರೂ ಬದುಕುಳಿಯುವುದಿಲ್ಲ. ಕಥಾ ನಾಯಕನೂ ಫೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಬೀಳುತ್ತಾನೆ.

ಗಾಯಗಳಿಂದ ಜರ್ಝರಿತಗೊಂಡು ಆಘಾತಕ್ಕೊಳಗಾಗುತ್ತಾನೆ. ಜನ ವಸತಿಯಿಲ್ಲದ ಪ್ರದೇಶ. ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂಬುದು ತೋಚದೇ ಕಂಗಾಲಾಗುತ್ತಾನೆ. ಹೇಗಾದರೂ ಮಾಡಿ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಹೋಗುವ ಎಲ್ಲ
ಪ್ರಯತ್ನಗಳನ್ನೂ ಮಾಡಿದರೂ ವಿಫ‌ಲನಾಗುತ್ತಾನೆ. ಕಡೆಗೆ ಅನಿವಾರ್ಯವಾಗಿ ಪರಿಸ್ಥಿತಿಗೆ ಹೊಂದಿ ಬದುಕುವುದನ್ನು ಅಭ್ಯಾಸ
ಮಾಡಿಕೊಳ್ಳತೊಡಗುತ್ತಾನೆ.

ಕೊನೆಗೂ ಹಲವು ತಿಂಗಳುಗಳ ನಂತರ ಮತ್ತೊಂ ದು ಕಂಪೆನಿಯ ಸಹಕಾರದಿಂದ ಕಥಾನಾಯಕ ಬದುಕುಳಿದು ತನ್ನ ಊರಿಗೆ ವಾಪಸಾಗುತ್ತಾನೆ. ಅವನ ವೇಷವೇ ಬದಲಾಗಿರುತ್ತದೆ. ಅವನನ್ನು ಕಂಡು ಗುರುತು ಹಚ್ಚುವುದೇ ಸವಾಲಾಗುತ್ತದೆ. ಬಳಿಕ ತನ್ನ ವೃತ್ತಿಯನ್ನು ಮತ್ತಷ್ಟು ಪ್ರೀತಿಸತೊಡಗುತ್ತಾನೆ.

ಅನಿಶ್ಚಿತ ಸಂದರ್ಭವೊಂದು ಒದಗಿಸುವ ಬದುಕನ್ನು ಅರ್ಥ ಮಾಡಿಕೊಳ್ಳುವಂಥ ಅವಕಾಶವನ್ನು ತಪ್ಪಿಸಿಕೊಳ್ಳದ ಕಥಾ ನಾಯಕ ಹೊಸ ಮನುಷ್ಯನಾಗಿಯೇ ರೂಪುಗೊಳ್ಳುತ್ತಾನೆ. ಬದುಕಿನ ಎಲ್ಲ ಸವಾಲುಗಳನ್ನು ಗೆದ್ದು ಬೀಗುವವನ ಕಥೆ.

ಇಡೀ ಸಿನಿಮಾ ಆರಂಭದಲ್ಲಿ ಕೊಂಚ ಮಂದಗತಿ ಎನಿಸಿದರೂ, ಬಳಿಕ ಒಳಗೊಳ್ಳುತ್ತದೆ. ನಮ್ಮೊಳಗೆ ಸಾಹಸ ಪ್ರವೃತ್ತಿಯನ್ನು
ಉದ್ದೀಪನಗೊಳಿಸುವಂಥ ಚಿತ್ರ. 20 ಸೆಂಚುರಿ ಫಾಕ್ಸ್‌ ಬಿಡುಗಡೆಗೊಳಿಸಿದ ಚಿತ್ರ ಆ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಮೂರು ಚಿತ್ರಗಳಲ್ಲಿ ಒಂದಾಗಿತ್ತು. ಟಾಮ್‌ ಹಾಂಕ್ಸ್‌ರ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಹಾಗೂ ಆಸ್ಕರ್‌ ಪ್ರಶಸ್ತಿಯೂ ಅವರ ಅತ್ಯುತ್ತಮ ನಟನೆಗೆ ಸಂದಾಯವಾಗಿತ್ತು.

*ಅಪ್ರಮೇಯ

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.