![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 28, 2019, 9:08 PM IST
ಚಿತ್ರದುರ್ಗ: ನಗರದ ರೈಲು ನಿಲ್ದಾಣದಲ್ಲಿ ಟೀ ವ್ಯಾಪಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದ ಆರ್ ಪಿಎಫ್ ಅಧಿಕಾರಿ ಗುರುಸ್ವಾಮಿ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದಲ್ಲಿ ತಂಡ ಮಂಗಳವಾರ ದಾಳಿ ನಡೆಸಿದ್ದು, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಎಎಸ್ಐ ಗುರುಸ್ವಾಮಿ ಸಿಕ್ಕಿಬಿದ್ದಿದ್ದಾರೆ.
ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಟೀ ಮಾರುವವರ ಬಳಿ ಗುರುಸ್ವಾಮಿ ಲಂಚ ಪಡೆಯುತ್ತಿದ್ದರು ಎಂದು ದೂರು ಸಲ್ಲಿಕೆಯಾಗಿದೆ.
ಚಿತ್ರದುರ್ಗ ಮೊಳಕಾಲ್ಮೂರು ನಡುವೆ ಚಹಾ ಮಾರುವ ವ್ಯಾಪಾರಿಯೊಬ್ಬರು ದೂರು ನೀಡಿದ್ದರು.
ಇನ್ನೂ ಗುರುಸ್ವಾಮಿ ಟೀ ಅಂಗಡಿಯ ಶಿವಗಂಗಮ್ಮ ಎಂಬುವವರ ಜತೆ ಗುರುಸ್ವಾಮಿ ಮಾತನಾಡಿರುವ ಆಡಿಯೋ ಕೂಡಾ ಲಭ್ಯವಾಗಿದೆ.
ಸುಮಾರು 20 ಜನ ಸಿಬಿಐ ಅಧಿಕಾರಿಗಳ ತಂಡ ಚಿತ್ರದುರ್ಗಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಸಿಬಿಐ ಅಧಿಕಾರಿಗಳು ನಿರಾಕರಿಸಿದರು.
ಆಡಿಯೊ ಸಂಭಾಷಣೆ: ಬಹಳ ಕೆಟ್ಟ ಮಾತು ಮಾತ್ನಾಡಬೇಕಿತ್ತು, ಬಿಟ್ಟಿದ್ದಿನಿ.
ಮನುಷ್ಯತ್ವ ಇದೆಯಾ ನಿನಗೆ, ಸತ್ತೋಗಲಿ ಅದೆಲ್ಲಾ ಹೇಳಬೇಡ. 6 ಸಾವಿರ ಕೊಡು ಅಂದ್ರೆ, 4 ಸಾವಿರ ಕೊಟ್ಟಿದ್ದೀಯಾ. ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದ್ರೆ ವಾರೆಂಟ್ ಆಗುತ್ತೆ ಎಂದು ಬೆದರಿಕೆ ಹಾಕಿದ್ದ ಆರ್ ಪಿಎಫ್ ಅಧಿಕಾರಿ ಗುರುಸ್ವಾಮಿ ಲಂಚದ ಬೇಡಿಕೆ ಇಟ್ಟಿರುವುದು ಆಡಿಯೋದಲ್ಲಿದೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.