ಸುಳ್ಳು ಸುದ್ದಿ ಹರಡಬೇಡಿ…ಜೈರಾಂ ರಮೇಶ್ ಗೆ ಮುಖ್ಯ ಚುನಾವಣ ಆಯುಕ್ತ ಕುಮಾರ್ ತರಾಟೆ
ಸೋಮವಾರ 7ಗಂಟೆಯೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ...
Team Udayavani, Jun 3, 2024, 6:04 PM IST
ನವದೆಹಲಿ: ಲೋಕಸಭೆ ಚುನಾವಣೆ ಮುಕ್ತಾಯವಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶಾದ್ಯಂತ ಸುಮಾರು 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿರುವುದಾಗಿ ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಗೆ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಯೊಬ್ಬರ ಬಗ್ಗೆಯೂ ಇಂತಹ ಊಹಾಪೋಹಗಳನ್ನು ಹಬ್ಬಿಸುವುದು ಒಳ್ಳೆಯದಲ್ಲ ಎಂದು ಹೇಳಿದರು.
ಇದನ್ನೂ ಓದಿ:Election: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ ಅಂತ್ಯದೊಳಗೆ ಮುಗಿಸುತ್ತೇವೆ: ಚುನಾವಣಾ ಆಯೋಗ
ಸೋಮವಾರ (ಜೂನ್ 03) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾರಾದರೂ ಜಿಲ್ಲಾಧಿಕಾರಿಗಳಿಗೆ, ರಿಟರ್ನ್ ಆಫೀಸರ್ ಗಳ ಮೇಲೆ ಪ್ರಭಾವ ಬೀರಿದ್ದಾರೆಯೇ? ಆ ರೀತಿ ಮಾಡಿದ್ದರೆ, ಅವರು ಯಾರು ಅಂತ ಹೇಳಿ, ನಾವು ಅವರಿಗೆ ಶಿಕ್ಷೆ ಕೊಡುತ್ತೇವೆ. ನೀವು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಜೈರಾಂ ರಮೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೂನ್ 2 ಸಂಜೆಯೊಳಗೆ ಉತ್ತರ ನೀಡುವಂತೆ ಚುನಾವಣ ಆಯೋಗ ನೋಟಿಸ್ ನೀಡಿತ್ತು.
ಮತ ಎಣಿಕೆ ಕಾರ್ಯದ ಪ್ರಕ್ರಿಯೆ ಪ್ರತಿಯೊಬ್ಬ ರಿಟರ್ನಿಂಗ್ ಆಫೀಸರ್ ಅವರ ಪವಿತ್ರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಹಿರಿಯ ವ್ಯಕ್ತಿಯಾಗಿ ಇಂತಹ ಹೇಳಿಕೆಯನ್ನು ಬಹಿರಂಗವಾಗಿ ಹೇಳುವುದು ಎಷ್ಟು ಸರಿ? ಹೀಗಾಗಿ ಅಮಿತ್ ಶಾ ಅವರು ಪ್ರಭಾವ ಬೀರಿರುವ 150 ಜಿಲ್ಲಾಧಿಕಾರಿಗಳ ವಿವರ ನೀಡಬೇಕೆಂದು ಜೈರಾಂ ರಮೇಶ್ ಗೆ ಆಯೋಗ ಬರೆದ ಪತ್ರದಲ್ಲಿ ತಿಳಿಸಿತ್ತು.
ಈವರೆಗೆ ಅಮಿತ್ ಶಾ ಅವರು ಸುಮಾರು 150 ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದಾರೆ. ಇದರಿಂದ ಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ. ಜೂನ್ 4ರ ಫಲಿತಾಂಶದಲ್ಲಿ ಮೋದಿ, ಶಾ, ಬಿಜೆಪಿಗೆ ಸೋಲಾಗಲಿದ್ದು, ಇಂಡಿಯಾ ಮೈತ್ರಿಕೂಟ ಜಯ ಗಳಿಸಲಿದೆ. ಚುನಾವಣ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಜೈರಾಂ ರಮೇಶ್ ದೂರಿದ್ದರು.
ಹೆಚ್ಚಿನ ಕಾಲಾವಕಾಶ ಕೊಡಲು ಆಯೋಗ ನಕಾರ:
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪುರಾವೆ ನೀಡಲು ಒಂದು ವಾರಗಳ ಕಾಲಾವಕಾಶ ಕೊಡಬೇಕೆಂಬ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರ ಮನವಿಯನ್ನು ಚುನಾವಣ ಆಯೋಗ ತಿರಸ್ಕರಿಸಿದೆ. ಸೋಮವಾರ 7ಗಂಟೆಯೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliment: ಸೆಂಗೋಲ್ ತೆರವುಗೊಳಿಸಿ ಎಂದ ಎಸ್ಪಿ ಸಂಸದ; ಬಿಜೆಪಿ ಆಕ್ಷೇಪ
Bihar ಮತ್ತೊಂದು ಸೇತುವೆ ಕುಸಿತ; ವಾರದೊಳಗೆ ನಾಲ್ಕನೇ ಘಟನೆ!
NEET-UG ಪ್ರಕರಣ: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು…
Miraculously Escapes: ರೀಲ್ಸ್ ಮಾಡಲು ಹೋಗಿ ಸಿಡಿಲಿನ ಆಘಾತದಿಂದ ಬಾಲಕಿ ಜಸ್ಟ್ ಎಸ್ಕೇಪ್…
Emergency ಅಸಾಂವಿಧಾನಿಕ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂಸತ್ ಜಂಟಿ ಅಧಿವೇಶನ
MUST WATCH
ಹೊಸ ಸೇರ್ಪಡೆ
India vs England ಸೆಮಿ ಪಂದ್ಯ; ನಿರೀಕ್ಷೆಯಂತೆ ಮಳೆಯಿಂದ ಟಾಸ್ ವಿಳಂಬ
Mundargi; ನೀರಾವರಿ ಇಲಾಖೆ ಕಚೇರಿ ಒಳಗೇ ಆತ್ಮಹತ್ಯೆಗೆ ಮುಂದಾದ ರೈತ
Kundapura: ಗೋಪಾಡಿ; ತಾಯಿಯ ಸಾವು ಸಹಜ ; ಮರಣೋತ್ತರ ಪರೀಕ್ಷೆ ವರದಿ
Parkala: ಚಾಲಕನಿಗೆ ಮೂರ್ಛೆ; ಹಿಮ್ಮುಖವಾಗಿ ಚಲಿಸಿದ ಬಸ್
Lakshmi Hebbalkar;ಅಂಗನವಾಡಿಗಳಿಗೆ ಕಳಪೆ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಕಠಿನ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.