ತುಟ್ಟಿ ಭತ್ತೆ ಹೆಚ್ಚಳಕ್ಕೆ ಕೇಂದ್ರ ಸರಕಾರ ತಡೆ

ಪಿಂಚಣಿದಾರರ ಭತ್ತೆಗೂ ತಡೆ, ಆರ್ಥಿಕ ಬಿಕ್ಕಟ್ಟಿನ ಕಾರಣ ಈ ನಿರ್ಧಾರ , ಸರಕಾರದ ಬೊಕ್ಕಸಕ್ಕೆ 37 ಸಾವಿರ ಕೋಟಿ ಉಳಿತಾಯ

Team Udayavani, Apr 24, 2020, 6:30 AM IST

ತುಟ್ಟಿ ಭತ್ತೆ ಹೆಚ್ಚಳಕ್ಕೆ ಕೇಂದ್ರ ಸರಕಾರ ತಡೆ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ 19 ಸೋಂಕಿನ ಬಳಿಕ ಆಗಿರುವ ಆರ್ಥಿಕ ಸಂಕಷ್ಟಗಳು ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ತೆ(ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಭತ್ತೆ ಮೇಲೂ ಪರಿಣಾಮ ಬೀರಿವೆ. ಈ ಎರಡೂ ಭತ್ತೆಗಳ ಹೆಚ್ಚಳಕ್ಕೆ ಕೇಂದ್ರ ಸರಕಾರ ಒಂದು ವರ್ಷದ ವರೆಗೆ ಬ್ರೇಕ್‌ ಹಾಕಿದೆ.

ಅಂದರೆ, ಮುಂದಿನ ವರ್ಷದ ಜು.1ರ ವರೆಗೆ ಕೇಂದ್ರ ಸರಕಾರ ತುಟ್ಟಿ ಭತ್ತೆ ಹೆಚ್ಚಿಸುವುದಿಲ್ಲ. ಅಷ್ಟೇ ಅಲ್ಲ, 2020ರ ಜನವರಿಯಿಂದ ಅನ್ವಯವಾಗುವಂತೆ ಮಾಡಬೇಕಾಗಿದ್ದ ತುಟ್ಟಿ ಭತ್ತೆ ಹೆಚ್ಚಳ ನಿರ್ಧಾರವನ್ನೂ ಕೈಬಿಡಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ದೇಶದ ಎಲ್ಲ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರು ಶೇ. 17 ರಂತೆಯೇ ತುಟ್ಟಿ ಭತ್ತೆ ಪಡೆಯಲಿದ್ದಾರೆ.

ಮಾರ್ಚ್‌ನಲ್ಲಷ್ಟೇ ಅಂದರೆ, ಲಾಕ್‌ಡೌನ್‌ ಶುರುವಾಗುವ ಮುನ್ನವೇ ಕೇಂದ್ರ ಸಂಪುಟ ಸಭೆಯಲ್ಲಿ ಶೇ. 4 ತುಟ್ಟಿ ಭತ್ತೆ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ನೌಕರರು ಮತ್ತು ಪಿಂಚಣಿದಾರರು 2020ರ ಜನವರಿಯಿಂದಲೇ ಶೇ. 21ರ ದರದಲ್ಲಿ ತುಟ್ಟಿ ಭತ್ತೆ ಪಡೆಯ ಬೇಕಾಗಿತ್ತು. ಆದರೆ ಕೇಂದ್ರ ಸರಕಾರ, ಗುರುವಾರ ತೆಗೆದುಕೊಂಡ ನಿರ್ಧಾರದಂತೆ ಮಾರ್ಚ್‌ನಲ್ಲಿ ಆದ ಸಂಪುಟ ತೀರ್ಮಾನವನ್ನೂ ಕೈಬಿಡಲಾಗಿದೆ.

ಈ ಹಣ ಮುಂದೆ ಸಿಗುತ್ತಾ?
ಆರ್ಥಿಕ ದುಃಸ್ಥಿತಿ ಇರುವ ಕಾರಣ ತುಟ್ಟಿ ಭತ್ತೆ, ಪಿಂಚಣಿದಾರರ ಭತ್ತೆಯನ್ನು ಫ್ರೀಜ್‌ ಮಾಡಿದ್ದೇವೆ ಎಂದು ಹಣ ಕಾಸು ಇಲಾಖೆ ಹೇಳಿದೆ. ಅಂದರೆ ಇದು ರದ್ದು ಅಲ್ಲ, ತಡೆ ಅಷ್ಟೇ. 2021ರ ಜುಲೈ ಯಲ್ಲಿ ಪರಿಷ್ಕರಣೆ ನಡೆಸುವಾಗ ತುಟ್ಟಿ ಭತ್ತೆ ಹೆಚ್ಚಿಸುವ ಪ್ರಸ್ತಾವವನ್ನು ಮತ್ತೆ “ಪ್ರ„ಸ್‌ ಇಂಡೆಕÕ…’ ಕಡ್ಡಾಯವಾಗಿ ಮಾಡುತ್ತದೆ. ಆ ವೇಳೆ ಈಗ ತಡೆ ಹಿಡಿದಿರುವ ಭತ್ತೆಯನ್ನು ಸರಕಾರ ನೀಡಲೂಬಹುದು, ನೀಡದೆಯೂ ಇರಬಹುದು. ಇದು ಆ ಸಂದರ್ಭದ ಆರ್ಥಿಕ ಸನ್ನಿವೇಶವನ್ನು ಆಧರಿಸಿದೆ.

ಸರಕಾರಕ್ಕೆಷ್ಟು ಉಳಿತಾಯ?
ತುಟ್ಟಿಭತ್ತೆ ತಡೆಯಿಂದಾಗಿ 37,350 ಕೋಟಿ ರೂ. ಉಳಿತಾಯವಾಗಲಿದೆ. ರಾಜ್ಯ ಸರಕಾರಗಳೂ ಇದೇ ನೀತಿ ಯನ್ನು ಅನುಸರಿಸಿದರೆ, 82,566 ಕೋಟಿ ರೂ. ಉಳಿಸಬಹುದು.

ರಾಜ್ಯದಲ್ಲೇನು?
ಸಾಮಾನ್ಯವಾಗಿ ಕೇಂದ್ರ ಅನುಸರಿಸಿದ ನೀತಿಯನ್ನೇ ರಾಜ್ಯ ಸರಕಾರಗಳು ಪಾಲಿಸುತ್ತವೆ. ಆದರೆ ಇದು ಕಡ್ಡಾಯ ಆಗಿರುವುದಿಲ್ಲ. ರಾಜ್ಯಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅವಕಾಶವಿದೆ.

ಏನಿದು ತುಟ್ಟಿಭತ್ತೆ?
ಇದು ಸರಕಾರಿ ನೌಕರರಿಗೆ ವರ್ಷದಲ್ಲಿ 2 ಬಾರಿ ಸಿಗುವಂಥ ಸೌಲಭ್ಯ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಜೀವನ ವೆಚ್ಚ- ಇತ್ಯಾದಿಗಳನ್ನು ಆಧರಿಸಿ “ಪ್ರ„ಸ್‌ ಇಂಡೆಕ್ಸ್‌’ ವರ್ಷಕ್ಕೆ ಎರಡು ಸಲ ನಿರ್ದಿಷ್ಟ ಭತ್ತೆ ಹೆಚ್ಚಳದ ಪ್ರಸ್ತಾವವನ್ನು ಸರಕಾರದ ಮುಂದಿಡುತ್ತದೆ. ಪ್ರತಿ ವರ್ಷದ ಮಾರ್ಚ್‌, ಸೆಪ್ಟಂಬರ್‌ನಲ್ಲಿ ಈ ಪ್ರಕ್ರಿಯೆ ನಡೆಯುತ್ತಿತ್ತು. ಸರಕಾರ ಸಂಪುಟದ ಒಪ್ಪಿಗೆ ಮೇರೆಗೆ ಅದನ್ನು ಜಾರಿ ಮಾಡುತ್ತಿತ್ತು.

ಎಷ್ಟು ಮಂದಿ ಮೇಲೆ ಪರಿಣಾಮ?
ಪ್ರಸ್ತುತ 50 ಲಕ್ಷ ಕೇಂದ್ರ ಸರಕಾರಿ ನೌಕರರು, 65 ಲಕ್ಷ ಪಿಂಚಣಿ ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.