![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 7, 2022, 7:25 AM IST
ಚೆನ್ನೈ: ಖದೀಮರು ಬೆಲೆಬಾಳುವ ವಸ್ತುಗಳನ್ನು ಕದಿಯಲು ಎಂತೆಂತಹಧ್ದೋ ವಿಚಿತ್ರ ಮಾರ್ಗಗಳನ್ನು ಅನುಸರಿಸಿದ್ದನ್ನು ಕೇಳಿರುತ್ತೀರಿ. ಅಂಥದ್ದೇ ಒಂದು ವಿಚಿತ್ರ ಘಟನೆ ಚೆನ್ನೈಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
ಅವತ್ತು ಈದ್ ಪ್ರಯುಕ್ತ ವ್ಯಕ್ತಿಯೊಬ್ಬರ ಮನೆಯಲ್ಲಿ ಹಬ್ಬ ನಡೆಯುತ್ತಿತ್ತು. ಅಲ್ಲಿಗೆ ಹೋಗಿದ್ದ 32 ವರ್ಷದ ವ್ಯಕ್ತಿ 1.45 ಲಕ್ಷ ರೂ. ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ಬಿರಿಯಾನಿ ಜತೆ ತಿಂದಿದ್ದಾನೆ!
ಮನೆಯಲ್ಲಿದ್ದ ಚಿನ್ನದ ಸರ, ವಜ್ರದ ನೆಕ್ಲೇಸ್, ವಜ್ರದ ಪೆಂಡೆಂಟ್ ಕಾಣಿಸುತ್ತಾ ಇಲ್ಲ ಎಂದು ಕಳವಳಗೊಂಡ ಮಹಿಳೆ, ತತ್ಕ್ಷಣ ವಿರುಗಾಂಬಕ್ಕಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಂಬಂಧಪಟ್ಟ ವ್ಯಕ್ತಿಯ ಮೇಲೆ ಸಂಶಯಗೊಂಡು ತನಿಖೆ ಮಾಡಿದ್ದಾರೆ. ಆತ ಆಭರಣಗಳನ್ನು ನುಂಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ದೇಹವನ್ನು ಸ್ಕ್ಯಾನ್ ಮಾಡಿಸಿದಾಗ ಆತ ಹೇಳಿದ್ದು ಸತ್ಯವೆಂದು ಖಚಿತವಾಗಿದೆ. ಮರಳಿ ಪಡೆದಿದ್ದು ಹೇಗೆ?: ಆಭರಣ ನುಂಗಿದ್ದ ವ್ಯಕ್ತಿಗೆ ಎನಿಮಾ ನೀಡಲಾಯಿತು. ಕೂಡಲೇ ಆತನಿಗೆೆ ಭೇದಿಯಾಗಿ ಆಭರಣಗಳು ಹೊರಬಂದಿದೆ! ಸದ್ಯ ಆತನ್ನು ಕಾನೂನಿನ ಅನ್ವಯ ವಶಕ್ಕೆ ಪಡೆಯಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.