Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?


Team Udayavani, Aug 24, 2024, 6:29 PM IST

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

“ಭಾರತವನ್ನು ನೆಗೆಟಿವ್ ರೀತಿಯಲ್ಲಿ ಚಿತ್ರಿಸುವುದರ ಮೂಲಕ ಬಾಲಿವುಡ್ ಕೆಲವೊಂದು ಸಿನಿಮಾಗಳು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಸಂದರ್ಶನದ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರು ಹೇಳಿರುವ ಮಾತು ಇಂದು ಸಿನಿ ಪ್ರಪಂಚದಲ್ಲಿ ಒಂದಿಷ್ಟು ಬಿಸಿ ಬಿಸಿ ಚರ್ಚೆ ಗೆ ಎಡೆ ಮಾಡಿ ಕೊಟ್ಟಿದೆ ಅನ್ನುವುದು ಅಷ್ಟೇ ಸತ್ಯ. ಆದರೆ ಇಂತಹ ನೆಗೆಟಿವ್ ಚಿತ್ರ ವಸ್ತುಗಳಿಂದಲೇ ಬಾಲಿವುಡ್ ಇರಬಹುದು, ಹಾಲಿವುಡ್ ಇರಬಹುದು, ಸ್ಯಾಂಡಲ್ ವುಡ್ ಇರ ಬಹುದು ಈ ಎಲ್ಲಾ ವುಡ್ ಗಳ ಸಿನಿಮಾ ಬಾಕ್ಸ್ ತುಂಬುವುದೇ ಇಂತಹ ನೆಗಟಿವ್ ಕಥೆಗಳ ಮೂಲಕವೇ.

ಎಲ್ಲವನ್ನೂ ಸುಖಾಂತವಾಗಿ ತೇೂರಿಸಿದರೆ ಸಿನಿಮಾ ನೇೂಡುವರೇ ಬರಲಿಕ್ಕಿಲ್ಲ.ಈ ವಾಸ್ತವಿಕತೆಯನ್ನು ತಿಳಿದ ಚಿತ್ರ ನಿದೇ೯ಶಕರು, ತಯಾರಕರು ಕಥೆಗಾರರು ಪ್ರತಿ ಚಿತ್ರದ ಮೊದಲಿಗೆ ಒಂದಿಷ್ಟು ನೆಗೆಟಿವ್ ಭರಿತವಾದ ದುರಂತ ಮಯಾವಾದ ಸನ್ನಿವೇಶಗಳನ್ನು ತುಂಬಿಸಿ ಚಿತ್ರೀಕರಣ ಮಾಡುವುದು ಸಾಮಾನ್ಯವಾದ ಸನ್ನಿವೇಶವಾಗಿ ಬಿಟ್ಟಿದೆ..ಲೈಂಗಿಕ ಶೇೂಷಣೆ ಆರ್ಥಿಕ ಶೇೂಷಣೆ ಸಾಮಾಜಿಕ ಪಿಡುಗು..ಒಂದೇ ಎರಡೇ ..ಈ ಎಲ್ಲವನ್ನೂ ಚಿತ್ರದಲ್ಲಿ ತುಂಬಿಸಿದರೆ ಮಾತ್ರ ಅಂತಹ ಸಿನಿಮಾಗಳಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳು ಬರುವುದು ಅನ್ನುವ ಸತ್ಯ ಎಲ್ಲಾ ನಿಮಾ೯ಪಕರಿಗೂ ಗೊತ್ತಿರುವ ಸಂಗತಿ..

ಇದನ್ನೆ ಚಿತ್ರ ವಿಮರ್ಶಕರು ವಿಶ್ಲೇಷಿಸುವಾಗ “ಈ ಚಿತ್ರ ತುಂಬಾ ವಾಸ್ತವಿಕವಾದ ಸಿನಿಮಾ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ ಇದೆನ್ನೆಲ್ಲಾ ನೇೂಡಿ ನಮ್ಮ ಸಮಾಜ ಬದಲಾಗ ಬೇಕು..ಎಂದೆಲ್ಲಾ ಹೇಳಿ ತೀರ್ಪು ನೀಡುವುದು ಸರ್ವೆ ಸಾಮಾನ್ಯವಾದ ವಿಷಯವೂ ಹೌದು. ಬಹು ಹಿಂದೆ “ಸ್ಲಮ್ ಡಾಗ್ ಮಿಲೆನಿಯರ್” ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನವಾದಾಗ ಈ ಚಿತ್ರದ ಚಿತ್ರ ಕಥೆ ಭಾರತೀಯ ಮೂಲದ ಬಾಲಕಿಯ ಲೈಂಗಿಕ ಶೇೂಷಣೆಯ ಮೇಲೆ ಹೆಣೆದ ಕಥೆ..ಇದೇ ಸಿನಿಮಾಕ್ಕೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ರವರಿಗೂ ಸಂಗೀತಕ್ಕೆ ಪ್ರಶಸ್ತಿ ಬಂದಾಗ ಕೂಡಾ ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದು ಇನ್ನೂ ನೆನಪಿದೆ.

ಈ “ಸ್ಲಮ್ ಡಾಗ್” ಕುರಿತಾಗಿ ಒಂದು ವಿಮರ್ಶೆಯನ್ನು ಅಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದು ನೆನಪಿದೆ. ಅಂದರೆ ಇಲ್ಲಿ ಇಂಗ್ಲೆಂಡಿನ ಸಿನಿಮಾ ನಿರ್ದೇಶಕ ಡಾನಿ ಬೈಲಿಯವರು ತ್ರಿಷ್ಣಾ ಅನ್ನುವ ಹೆಸರಿನ ಬಾಲಕಿಯನ್ನು ಚಿತ್ರದ ವಸ್ತುವಾಗಿ ರೂಪಿಸಿದ ಕಥೆಯಾಗಿತ್ತು..ಮತ್ತೆ ಚರ್ಚೆ ಎಲ್ಲಿಯವರೆಗೆ ಮುಂದುವರಿಯಿತು ಕೇಳಿದರೆ ರಾಜಸ್ಥಾನ ಓವ೯ ಬಡ ಕುಟುಂಬದ ಬಾಲಕಿಯ ಶೇೂಷಣೆಯ ವಾಸ್ತವಿಕ ಕಥೆ ಅನ್ನುವ ಮಟ್ಟಿಗೆ ವಾದ ವಿವಾದ ಚಚೆ೯ ನಡೆದಿತ್ತು.

ಹಾಗಾದರೆ ಇಂತಹ ನೆಗೆಟಿವ್ ವಿಷಯಗಳಿಗೆ ಭಾರತವೇ ಉದಾಹರಣೆಯಾಗಬೇಕೇ? ಅದು ಒಬ್ಬ ವಿದೇಶಿ ನಿರ್ದೇಶಕನ ಕೈಯಲ್ಲಿ ಭಾರತೀಯ ಹೆಣ್ಣು ಮಕ್ಕಳ ದುರಂತಮಯ ಕಥೆ ಚಿತ್ರೀಕರಣಗೊಳ್ಳಬೇಕೆ? ಇದು ನಮ್ಮ ಸಿನಿಮಾ ಕಥೆಗಳ ಒಂದು ಮುಖವಾದರೆ ನಮ್ಮ ಭಾರತೀಯ ಸಿನಿಮಾ ಕಥೆಗಳು ಇಂತಹ ನೆಗೆಟಿವ್ ಅಂಶಗಳನ್ನು ಬಿಟ್ಟು ಚಿತ್ರ ಕಥೆ ಕಾದಂಬರಿ ಸಿನಿಮಾ ತಯಾರಿಸಲು ಸಾಧ್ಯವೇ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ರಿಷಬ್ ಶೆಟ್ಟಿಯವರು ಈ ಬಾಲಿವುಡ್ ಕೆಲವು ಚಿತ್ರಗಳು ಭಾರತವನ್ನು ಅತ್ಯಂತ ನೆಗೆಟಿವ್ ಆಗಿ ಕಾಣುವ ರೀತಿಯಲ್ಲಿ ಚಿತ್ರೀಕರಿಸಿ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅನ್ನುವ ಹೇಳಿಕೆಯ ಮೇಲೆ ಕೆಲವರು ನೇರವಾಗಿ ಕಾಂತಾರ ಚಿತ್ರವನ್ನೆ ಉದಾಹರಣೆಯಾಗಿಟ್ಟುಕೊಂಡು ಅದರಲ್ಲೂ ಕೂಡಾ ಸಾಕಷ್ಟು ನೆಗೆಟಿವ್ ಸನ್ನಿವೇಶಗಳು ಇದ್ದವು ಅನ್ನುವುದನ್ನು ಬೊಟ್ಟು ಮಾಡಿ ತೇೂರಿಸಿದ್ದಾರೆ.. ಹಾಗಂತ ಈ ಟೀಕೆಗಳನ್ನು ಅಲ್ಲಗಳೆಯುವಂತೆಯೂ ಇಲ್ಲ..ಈ ಎಲ್ಲಾ ನೆಗೆಟಿವುಗಳಿಗೆ ಸೆಡ್ಧು ಹೊಡೆದು ನಿಂತಹ ಕೊನೆಯ ಕ್ಷಣ ಪಂಜುರ್ಲಿಯ ಪವಾಡವೇ ಇಡಿ ಚಿತ್ರಕ್ಕೆ ಪ್ರಶಸ್ತಿ ಪ್ರದಾನಿಸಿದೆ ಅನ್ನುವುದು ಸತ್ಯ. ಅದು ಕಾರಂತರ ಚೇೂಮನ ದುಡಿಯಲ್ಲೂ ಅಷ್ಟೇ ..ಇದೇ ರೀತಿಯಲ್ಲಿ ನೆಗೆಟಿವ್ ನಿಂದ ಪೊಸಿಟಿವ್ ಗೆ ಬಂದ ಕಾರಣ ಅದಕ್ಕೂ ಪ್ರಶಸ್ತಿ ಬಂತು..ಇನ್ನೂ ಅದೆಷ್ಟೋ ಚಿತ್ರಗಳ ಉದಾಹರಣೆ ನಮ್ಮ‌ ಮುಂದಿದೆ.

ಒಂದಂತೂ ಸತ್ಯ ಇಂತಹ ಶೇೂಷಣೆ ಅನ್ಯಾಯ ..ಇದನ್ನೆಲ್ಲಾ ನಮ್ಮೆಲ್ಲರ ನೆಲದಲ್ಲಿ ನಾವು ನೇೂಡುವಾಗ ಇದೆಲ್ಲವೂ ನೆಗೆಟಿವ್ ಅನ್ನಿಸುದಿಲ್ಲ..ಬೆಳವಣಿಗೆ ಸುಧಾರಣೆಗೆ ಅಭಿವೃದ್ಧಿಯಾಗಿಯೇ ಕಾಣುತ್ತದೆ ಆದರೆ ಇದನ್ನೇ ವಿದೇಶಿಯ ನೆಲದಲ್ಲಿ ನಿಂತು ನೇೂಡಿದಾಗ ನೆಗೆಟಿವ್ ಆಗಿ ನಮ್ಮ ಸಮಾಜವನ್ನು ನೇೂಡಿದ ಹಾಗೆ ಮುಜುಗುರ ಅನ್ನಿಸುವುದು ಸಹಜ ಕೂಡ..ನಮ್ಮ ಮನೆಯ ಕಥೆಯ ವ್ಯಥೆಯನ್ನು ಬೇರೆಯವರ ಮನೆಯ ಅಂಗಳದಲ್ಲಿ ನೇೂಡಿ ಕುಶಿ ಪಡಲು ಯಾರ ಮನಸ್ಸು ಒಪ್ಪುತ್ತದೆ ಹೇಳಿ.

ಅದೇ ರೀತಿ ಇದು ಕೂಡಾ ..ಇವೆಲ್ಲವನ್ನೂ ನಮ್ಮ ಸಮಾಜದ ಬದಲಾವಣೆಗಾಗಿ ಮಾಡಿಕೊಂಡ ಸಿನಿಮಾಗಳು ಆಗ ಬೇಕೇ ಹೊರತು ಪರದೇಶಿಗರ ಮುಂದೆ ಪ್ರದರ್ಶನಕ್ಕಾಗಿಯೊ ಪ್ರಶಸ್ತಿಗಾಗಿಯೊ ಪ್ರದರ್ಶನಕ್ಕಿಡುವ ಸಿನಿಮಾ ವಸ್ತುಗಳಾಗ ಬಾರದು..ಅಷ್ಟೇ..ಅಲ್ವೇ?

ವಿಶ್ಲೇಷಣೆ :ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Mandya-VC

Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ

1-budget

Stupid self-confidence: ಲೋಕಸಭೆ ಭಾಷಣದ ಬಗ್ಗೆ ರಾಹುಲ್ ವಿರುದ್ಧ ನಿರ್ಮಲಾ ವಾಗ್ದಾಳಿ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Gudibande-Suside

Gudibande: ಮೈಕ್ರೋ ಫೈನಾನ್ಸ್ ಹಾವಳಿ; ಸಾಲದ ಸುಳಿಗೆ ಸಿಲುಕಿ ಕೂಲಿ ಕಾರ್ಮಿಕ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Mandya-VC

Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.