![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 27, 2024, 3:11 AM IST
ಬೆಂಗಳೂರು: ಸಿದ್ದರಾಮಯ್ಯನವರೇ ನಿಮಗೆ ದಿಲ್ಲಿಯ ಕೇಜ್ರಿವಾಲ್ ಮಾದರಿಯೋ? ಕರುನಾಡಿನ ರಾಮಕೃಷ್ಣ ಹೆಗಡೆಯವರು ಮಾದರಿಯೋ? ಆಯ್ಕೆ ನಿಮಗೇ ಬಿಟ್ಟಿದ್ದು. ಭಂಡತನದ ಎಲ್ಲೇ ಮೀರಿದ ನಿಮ್ಮ ಮಾತುಗಳಿಗೆ ರಾಜ್ಯದ ಜನ ಕಿಮ್ಮತ್ತು ನೀಡುವ ಕಾಲ ಈಗ ಮುಗಿದು ಹೋಗಿದೆ. ಸ್ವಪಕ್ಷೀಯರೇ ಮುಜುಗರ ತಪ್ಪಿಸಲು ರಾಜೀನಾಮೆ ಕೊಡಿ ಎಂದು ಹೇಳುತ್ತಿ ದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪ್ರಧಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಆಡಿದ ಮಾತುಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ “ಎಕ್ಸ್’ ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿಯವರ ಹೆಸರು ಬಳಸಿ ತಳ ಬುಡವಿಲ್ಲದ ಹೋಲಿಕೆಗಳನ್ನು ಮಾಡಿಕೊಂಡು ರಾಜೀನಾಮೆ ನೀಡುವುದಿಲ್ಲ ಎಂಬ ವಿತಂಡ ನಿಲುವು ತಳೆದಿದ್ದೀರಿ. ಭ್ರಷ್ಟತೆಯಿಂದ ಹರಿದು ಹೋಗಿರುವ ನಿಮ್ಮ ಗೌರವಕ್ಕೆ ತೇಪೆ ಹಚ್ಚಿಕೊಂಡು ಅಧಿಕಾರಕ್ಕೆ ಜೋತು ಬೀಳುವ ಹಠಮಾರಿತನ ಪ್ರದರ್ಶಿಸುತ್ತಿದ್ದೀರಿ, ರಾಜ್ಯದ ಘನತೆಯನ್ನು ಉಳಿಸುವ ದೃಷ್ಟಿಯಿಂದಲಾದರೂ ಮುಖ್ಯಮಂತ್ರಿ ಸ್ಥಾನ ತೊರೆಯಿರಿ ಎಂದಿದ್ದಾರೆ.
ನೀವು ಚಾಪೆ ಕೆಳಗೆ ನುಸುಳಿದರೆ ಈ ನೆಲದ ಕಾನೂನಿಗೆ ರಂಗೋಲಿಯೊಳಗೆ ನುಸುಳಿ ಯಾದರೂ ಭ್ರಷ್ಟರಿಗೆ ಶಿಕ್ಷಿಸುವ ಸಾಮರ್ಥ್ಯವಿದೆ. ಅಂತಹ ಸಂವಿಧಾನ ರಚಿಸಿಕೊಟ್ಟ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡಿ ಎಂದು ಕಿವಿ ಮಾತು ಹೇಳಿದ್ದಾರೆ.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.