CM Siddaramaiah: ಮುಡಾದಲ್ಲಿ ಮಾಡಿದ ಪಾಪ ಅಳಿಸಿ ಹೋಗುತ್ತದೆಯೇ: ಸಿ.ಟಿ.ರವಿ

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ

Team Udayavani, Aug 28, 2024, 12:28 AM IST

CT-Ravi

ಬೆಂಗಳೂರು: ಕಾಂಗ್ರೆಸಿಗರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ತಮ್ಮ ಜವಾಬ್ದಾರಿಯ ಅರಿವಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಯುವುದು ಸಹಜ. ಆದರೆ, ಇವರು ಭ್ರಷ್ಟಾಚಾರದ ಸಮರ್ಥನೆಗಾಗಿ ಜೋರು ಬಾಯಿ ಮಾಡಲು ಹೊರಟಿದ್ದಾರೆ. ಹಾಗೆ ಮಾಡಿದಾಕ್ಷಣ ಮುಡಾದಲ್ಲಿ ಇವರು ಮಾಡಿದ ಪಾಪ ಅಳಿಸಿ ಹೋಗುತ್ತದೆಯೇ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ 40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯರಿಂದ ಮಾತ್ರ ಇಂತಹ ಸಮರ್ಥನೆಗಳು ಸಾಧ್ಯ. ಎಲ್ಲ ನಿಯಮ ಮೀರಿ ನಿವೇಶನ ಪಡೆದು, ಅದು ಸರಿ ಎಂದು ವಾದಿಸಿ ದಕ್ಕಿಸಿಕೊಳ್ಳಲು ಬೇರೆ ಯಾರಿಗಾದರೂ ಸಾಧ್ಯವೇ? 2005ರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪಡೆದ ಭೂಮಿಗೆ 62 ಕೋಟಿ ರೂ. ಕೇಳಲು ಅವರನ್ನು ಬಿಟ್ಟು ಇನ್ಯಾರಿಗಾದರೂ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಸರ್ಫ್‌ ಎಕ್ಸೆಲ್‌, ಏರಿಯಲ್‌ ಹಾಕಿದರೂ ಕಪ್ಪು ಹೋಗಲ್ಲ
ಅಧಿವೇಶನದಲ್ಲಿ ಮುಡಾ ಹಗರಣದ ಚರ್ಚೆಗೆ ಏಕೆ ಬೆದರಿದರು? ಸದನದಲ್ಲಿ ದಾಖಲೆಗಳನ್ನು ಬಿಚ್ಚಿಟ್ಟಿದ್ದರೆ ನಿರುತ್ತರರಾಗಬೇಕಾಗುತ್ತದೆ. ಯಾವ ಸರ್ಫ್‌ ಎಕ್ಸೆಲ್‌, ಏರಿಯಲ್‌ ಕೂಡ ಇವರ ಕಪ್ಪು ತೊಳೆಯಲಾಗಲ್ಲ. ವೈಟ್ನರ್‌ ಹಚ್ಚಿ ಕಪ್ಪು ಕಾಣದಂತೆ ಮಾಡಬಹುದಷ್ಟೆ. ಸಂವಿಧಾನದ ಮೇಲೆ ನಂಬಿಕೆ ಇದ್ದಿದ್ದರೆ ರಾಜಭವನ ಚಲೋ ಮಾಡುವ ಘೋಷಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಡುತ್ತಿರಲಿಲ್ಲ ಎಂದು ಟೀಕಿಸಿದರು.

ಕೆಂಪಣ್ಣ ಆಯೋಗದ ವರದಿ ಮಂಡಿಸಿ
ಅರ್ಕಾವತಿ ಬಡಾವಣೆಯ ರೀ ಡೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರು ಮುಂದಿಟ್ಟು ಚರ್ಚಿಸಲು ನಿರ್ಧರಿಸಿದ್ದೇವೆ. ಎಕರೆಗೆ 15 ಕೋಟಿ ರೂ. ಎಂದರೂ 840 ಎಕರೆಗೆ 10-12 ಸಾವಿರ ಕೋಟಿ ರೂ. ಹಗರಣವಿದು. ಇಷ್ಟೆಲ್ಲ ಮಾಡಿಯೂ ಕಾಂಗ್ರೆಸಿಗರಲ್ಲಿ ಯಾರೂ ಭ್ರಷ್ಟರಿಲ್ಲ, ಇವರೆಲ್ಲ ಪ್ರಾಮಾಣಿಕರು.

ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ಧ ಆರೋಪ ಬಂದಾಗ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ನೇಮಿಸಿದ ಕೆಂಪಣ್ಣ ಆಯೋಗದ ವರದಿ ಪಡೆದುಕೊಂಡರು. ಅದನ್ನು ಇದುವರೆಗೆ ಸದನದಲ್ಲಿ ಮಂಡಿಸಿ, ಕ್ರಮ ವಹಿಸಿಲ್ಲ. ಸ್ವತ್ಛವಾಗಿದ್ದರೆ ಭಯ ಬೀಳುವುದರಲ್ಲಿ ಅರ್ಥವಿಲ್ಲ. ನಿಮ್ಮ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಓರೆಗೆ ಹಚ್ಚಲು ಇದು ಸುಸಮಯ. ಇಲ್ಲದಿದ್ದರೆ, ನಿಮ್ಮ ಮೇಲೆ ನಂಬಿಕೆ ಬರುವುದೇ ಇಲ್ಲ ಎಂದು ಸಿ.ಟಿ. ರವಿ ಹೇಳಿದರು.


ಜಿಂದಾಲ್‌ಗೆ ಭೂಮಿ ಮರು ಪರಿಶೀಲಿಸಿ: ಸಿ.ಟಿ. ರವಿ ಆಗ್ರಹ
ನಿಮಗೂ, ನಿಮ್ಮ ಹೈಕಮಾಂಡ್‌ಗೂ ಕಿಕ್‌ಬ್ಯಾಕ್‌ ಸಿಕ್ಕಿದೆಯೇ?
ಜಿಂದಾಲ್‌ ಸಂಸ್ಥೆಗೆ 3677 ಎಕರೆ ಭೂಮಿಯನ್ನು ಶುದ್ಧಕ್ರಯಕ್ಕೆ ಕೊಡುವ ನಿರ್ಧಾರವನ್ನು ಪುನರ್‌ ಪರಿಶೀಲನೆ ಮಾಡಬೇಕು ಹಾಗೂ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ ಎಂಬುದರ ಜಾಬ್‌ ಆಡಿಟ್‌ ಮಾಡಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

ಬಿಜೆಪಿ ಆಡಳಿತದಲ್ಲಿದ್ದಾಗಲೇ ಈ ಪ್ರಸ್ತಾವನೆ ಬಂದಿತ್ತು. ಸಂಪುಟ ಸಭೆಯೊಳಗೆ ನಾವೆಲ್ಲರೂ ವಿರೋಧಿಸಿದ್ದೆವು. ಬಹಿರಂಗವಾಗಿ ಕಾಂಗ್ರೆಸ್‌ ವಿರೋಧಿಸಿತ್ತು. ಇದರಲ್ಲಿ ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್‌ ಬಂದಿದೆ, 1.20 ಲಕ್ಷ ರೂಪಾಯಿಗೇ ಭೂಮಿ ಕೊಡುವುದು ಎಂದರೇನರ್ಥ ಎಂದೆಲ್ಲ ಕಾಂಗ್ರೆಸ್‌ ಆರೋಪಿಸಿತ್ತು. ಅಂದು ವಿರೋಧಿಸಿ, ಇಂದು ಕೊಡುತ್ತಿದ್ದೀರಿ ಎಂದರೆ ನಿಮಗೂ ನಿಮ್ಮ ಹೈಕಮಾಂಡ್‌ಗೂ ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್‌ ಸಂದಾಯ ಆಗಿರಬಹುದು ಎಂದು ಆರೋಪಿಸಿದರು.

ಇದೆಲ್ಲ ಬಿಜೆಪಿ ಆಡಳಿತದಲ್ಲೇ ನಿರ್ಧಾರ ಆಗಿತ್ತು ಎನ್ನುವ ಸಚಿವ ಎಂ.ಬಿ. ಪಾಟೀಲ್‌, ಅಂದು ನೀವೇ ವಿರೋಧಿಸಿದ್ದನ್ನು ಇಂದೇಕೆ ಅನುಷ್ಠಾನಕ್ಕೆ ತಂದಿರಿ ಎಂಬುದಕ್ಕೆ ಉತ್ತರಿಸಿ. ಅಂದು ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಪತ್ರ ಬರೆದು ವಿರೋಧಿಸಿದ್ದ ಎಚ್‌.ಕೆ. ಪಾಟೀಲರು ಇಂದು ಸಂಪುಟ ಸಭೆಯ ನಿರ್ಣಯವನ್ನು ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.

ಟಾಪ್ ನ್ಯೂಸ್

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kaljiga-1

Film Release: ಬಹುನಿರೀಕ್ಷಿತ “ಕಲ್ಜಿಗ’ ಸಿನೆಮಾ ಬಿಡುಗಡೆ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

State Govt;ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ: 43 ಮಂದಿ ಜೈಲು ಅಧಿಕಾರಿ, ಸಿಬಂದಿ ವರ್ಗಾವಣೆ

State Govt;ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ: 43 ಮಂದಿ ಜೈಲು ಅಧಿಕಾರಿ, ಸಿಬಂದಿ ವರ್ಗಾವಣೆ

Exam ಅಕ್ಟೋಬರ್‌ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ

Exam ಅಕ್ಟೋಬರ್‌ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.