ಮಂಗಳೂರು: ನಾಳೆ 2 ತಾಸು ಬಂದ್‌ಗೆ ಕಾಂಗ್ರೆಸ್‌ ಕರೆ


Team Udayavani, Mar 8, 2023, 7:22 AM IST

ಮಂಗಳೂರು: ನಾಳೆ 2 ತಾಸು ಬಂದ್‌ಗೆ ಕಾಂಗ್ರೆಸ್‌ ಕರೆ

ಮಂಗಳೂರು: ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ನ ನಿರ್ಧಾರದಂತೆ ದ.ಕ. ಜಿಲ್ಲೆಯಲ್ಲಿಯೂ ಮಾ. 9ರಂದು ಬೆಳಗ್ಗೆ 9ರಿಂದ 11ರ ವರೆಗೆ ಎರಡು ಗಂಟೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮತ್ತು ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ಬಲವಂತದ ಬಂದ್‌ ಮಾಡುವುದಿಲ್ಲ. ಬಸ್‌ ಬಂದ್‌ ಮಾಡುವುದಿಲ್ಲ. ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ವಾಗಿ ಮುಚ್ಚುವಂತೆ ಕರೆ ನೀಡಿದ್ದೇವೆ. ನಗರದಲ್ಲಿರುವ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸ ಲಾಗುವುದು ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇನ್ನೆಷ್ಟು ಪುರಾವೆ ಬೇಕು?
ರಾಜ್ಯ ಬಿಜೆಪಿ ಸರಕಾರದ ಶೇ.40 ಕಮಿಷನ್‌ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಯವರು ಪುರಾವೆ ಕೇಳುತ್ತಿದ್ದಾರೆ. ತನಿಖಾಧಿಕಾರಿಗಳನ್ನು ನೇಮಿಸಿದರೆ ಅವರಿಗೆ ಪುರಾವೆ ಕೊಡಬಹುದು. ಪಿಎಸ್‌ಐ, ಅಧ್ಯಾಪಕರು, ಮೆಸ್ಕಾಂ ಅಧಿಕಾರಿಗಳು, ವೈಸ್‌ ಚಾನ್ಸಲರ್‌ ನೇಮಕದಲ್ಲಿ ಭ್ರಷಾcಚಾರ ಬೆಳಕಿಗೆ ಬಂದಿದೆ. ಮಾಡಾಳು ಪ್ರಶಾಂತ್‌ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಸಾಲ ದ್ವಿಗುಣವಾಗಿದೆ. ಬಿಜೆಪಿಗೆ ಮುಂದೆ ವಿಜಯೋತ್ಸವ ಮಾಡುವ ಅವಕಾಶ ಇಲ್ಲ. ಹಾಗಾಗಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿದೆ. ಬಿಜೆಪಿಯವರಿಗೆ ಇನ್ನು ಎರಡು ತಿಂಗಳ ಅವಕಾಶವಿದೆ. ಧಮ್‌ ಇದ್ದರೆ ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲಿ ಎಂದು ಹರೀಶ್‌ ಕುಮಾರ್‌ ಹೇಳಿದರು.

ಗ್ಯಾರಂಟಿಗೆ ಆಧಾರ್‌ ಕೇಳಿಲ್ಲ
“ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಣೆ ಸಂದರ್ಭ ಆಧಾರ್‌ ಕಾರ್ಡ್‌ ಕೇಳಿದೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಆತಂಕವಿದೆ’ ಎಂದು ಶಾಸಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ನೀಡುವಾಗ ಆಧಾರ್‌ ಕಾರ್ಡ್‌ ಕೇಳಿಲ್ಲ. ರೇಷನ್‌ ಕಾರ್ಡ್‌ ಮಾತ್ರ ಕೇಳಿದೆ. ಒಂದು ವೇಳೆ ಆಧಾರ್‌ ಕಾರ್ಡ್‌ ಕೇಳಿದ್ದರೂ ಅದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ಬಿಜೆಪಿ ಹತಾಶವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಹರೀಶ್‌ ಕುಮಾರ್‌ ಹೇಳಿದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಶುಭೋದಯ ಆಳ್ವ, ಪ್ರಚಾರ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

Sagara: ಭೂತನೋಣಿ ಧರೆ ಕುಸಿತ: 3 ಗಂಟೆ ರಾಣೇಬೆನ್ನೂರು – ಬೈಂದೂರು ಹೆದ್ದಾರಿ ಸಂಚಾರ ಬಂದ್

Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್

Udupi: ಮಿಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ

Udupi: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.