ಕೋವಿಡ್‌ 19 ಮಾನಸಿಕ ಸಮಸ್ಯೆ ಹೆಚ್ಚುವ ಆತಂಕ


Team Udayavani, Apr 23, 2020, 12:15 PM IST

ಕೋವಿಡ್‌ 19 ಮಾನಸಿಕ ಸಮಸ್ಯೆ ಹೆಚ್ಚುವ ಆತಂಕ

ಮಣಿಪಾಲ: ಕೋವಿಡ್‌-19 ಬಂದ ಬಳಿಕ ಎಲ್ಲರೂ ಮನೆಗೇ ಸೀಮಿತವಾಗಿದ್ದಾರೆ. ಏಕಾಏಕಿ ಜನರಲ್ಲಿ ಆತಂಕಕಾರಿಯಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗ ವಿಶ್ವದ ಯಾವುದೇ ಭಾಗವೂ ಸುರಕ್ಷಿತ ವಲ್ಲ ಎನ್ನುವ ಅಭಿಪ್ರಾಯ ಸೃಷ್ಟಿಸಿದೆ.

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಇದು ಕೇವಲ ದೈಹಿಕ ಸಮಸ್ಯೆಯಾಗಿ ಕಾಡುತ್ತಿಲ್ಲ. ಕೋವಿಡ್ ಭೀತಿ, ಕೆಲಸದ ಒತ್ತಡ, ಉದ್ಯೋಗ ಕಳೆದುಕೊಳ್ಳುವ ಭೀತಿಯ ನಡುವೆ ಜನರು ಬದುಕುತ್ತಿದ್ದಾರೆ. ನಾಳೆ ಏನಾಗಲಿದೆ ಎಂಬುದು ಯಾರೂ ಊಹಿಸಲಾದ ಪರಿಸ್ಥಿತಿ.

ಲಾಕ್‌ ಡೌನ್‌ ಆಗಿರುವುದರಿಂದ ಸಾಮಾಜಿಕ ಅಂತರದ ಜತೆಗೆ ಮನೆಯÇÉೇ ಇರುವಂತೆ ಸರಕಾರಗಳು ಸೂಚಿಸಿವೆ. ಸದಾ ಓಡಾಡುತ್ತ ಇದ್ದವರಿಗೆ ಕೈ ಕಟ್ಟಿ ಹಾಕಿದ ಅನುಭವ. ಜಗತ್ತಿನ ಬಹುತೇಕ ಮಂದಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಭಾರತೀಯ ಸೈಕಿಯಾಟ್ರಿ ಸೊಸೈಟಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಜಗತ್ತಿನಲ್ಲೂ ಇದೇ ಸ್ಥಿತಿ.

ನಮ್ಮ ದಿನಚರಿ ಸಂಪುರ್ಣ ಬದಲಾಗಿದೆ. ಬಹುತೇಕ ಜನರಿಗೆ ದಿನಚರಿಯೇ ಇಲ್ಲ. ಕೋವಿಡ್‌-19 ವಿರುದ್ಧ ಸಮರ ಸಾರಲು ಲಾಕ್‌ಡೌನ್‌ ಒಳ್ಳೆಯ ಕ್ರಮವಾದರೂ ದುಷ್ಪರಿಣಾಮವೂ ಇದೆ. ಸಾಂಕ್ರಾಮಿಕ ರೋಗವು ಕೆಲವು ವಾರಗಳಲ್ಲಿ ಜೀವನಶೈಲಿ, ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಆಗಾಧ ಪರಿಣಾಮ ಬೀರಿದೆ.

ಭಾರತದಲ್ಲಿಯೂ ಸಹ, ವಿವಿಧ ವಯೋಮಾನದ ಜನರು ಅತಿಯಾದ ಒತ್ತಡ, ಆತಂಕ, ಭೀತಿ ಮತ್ತು ಖನ್ನತೆಯನ್ನು ಎದುರಿಸುತ್ತಿದ್ದಾರೆ. ಅದರ ಜತೆಗೆ ಈ ಕೋವಿಡ್ ವೈರಸ್‌ ಸೋಂಕು ಹರಡುವಿಕೆಯ ಭಯವು ಸಾಮೂಹಿಕ ಉನ್ಮಾದ, ಎನ್ಸೋಫೋಬಿಯಾ ಮತ್ತು ರೋಗ ಹರಡುವ ಭೀತಿಯನ್ನು ಹೆಚ್ಚಿಸಿವೆ.

ಪ್ರತಿ ದಿನ ಅಥವ ವಾರಕ್ಕೆ ಒಮ್ಮೆ ಮದ್ಯಪಾನ, ತಂಬಾಕು ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದವರೂ ಅವುಗಳ ಅಲಭ್ಯತೆಯಿಂದ ಖನ್ನತೆಗೆ ಒಳಗಾಗು ತ್ತಿದ್ದಾರೆ. ಇತ್ತೀಚೆಗೆ ಆಲ್ಕೋಹಾಲ್‌ ಅಂಶ ಇರುವ ಸ್ಯಾನಿಟೈಸರ್‌ ಅನ್ನು ವ್ಯಕ್ತಿಯೊಬ್ಬರು ಸೇವಿಸಿ ಮೃತ ಪಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶೇಷವಾಗಿ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಬೆರೆತಿದ್ದವರು ಇಂದು ಮನೆಗೆ ಸೀಮಿತರಾಗಿದ್ದಾರೆ. ಆಟವಾಡಲೂ ಹೊರಗೆ ಹೋಗುವಂತಿಲ್ಲ. ಪಾರ್ಕ್‌, ಆಟಿಕೆ ಮತ್ತು ದೈಹಿಕ ವ್ಯಾಯಾಮಗಳನ್ನು ಒದಗಿಸುವಂಥ ಕ್ರೀಡೆ ಗಳತ್ತ ಅವರು ಹೆಚ್ಚು ಆಕರ್ಷಿತರಾಗಿರುತ್ತಾರೆ. ಲಾಕ್‌ಡೌನ್‌ ಪರಿಸ್ಥಿತಿ ಆ ಅವಕಾಶವನ್ನು ತಪ್ಪಿಸಿದೆ. ಇದರಿಂದ ಮಕ್ಕಳು ಶುದ್ಧ ಗಾಳಿಯಿಂದ ವಂಚಿತರಾಗುತ್ತಿದ್ದಾರೆ ಎಂಬುದು ಲಂಡನ್ನಿನ ವೈದ್ಯರ ಅಭಿಪ್ರಾಯ.

ಮಕ್ಕಳಿಗಾಗಿ ಲಾಕ್‌ಡೌನ್‌ ಸಡಿಲಿಕೆ
ಕೋವಿಡ್‌ -19 ಹರಡುವುದನ್ನು ತಡೆಯುವ ಕಠಿಣ ಕ್ರಮಗಳಡಿ ಮಾರ್ಚ್‌ 14 ರಿಂದ ಸ್ಪೇನ್‌ನಲ್ಲಿ ಮಕ್ಕಳನ್ನು ಮನೆಯಲ್ಲಿ ಇರಬೇಕು ಎಂದು ಸರಕಾರ ವಿಶೇಷ ಆದೇಶ ಪ್ರಕಟಿಸಿತ್ತು. ಈಗ ಸರಕಾರ ಏಪ್ರಿಲ್‌ 27 ರ ಬಳಿಕ ನಿಯಮವನ್ನು ಸಡಿಲಿಸುವ ಸೂಚನೆ ನೀಡಿದೆ‌. ಇಂತಹ ಕ್ರಮಗಳಿಂದ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಸ್ಪ್ಯಾನಿಷ್‌ ಮಕ್ಕಳ ಹಕ್ಕುಗಳ ಒಕ್ಕೂಟವು ಎಚ್ಚರಿಸಿತ್ತು. ಡೆನ್ಮಾರ್ಕ್‌ನಂತಹ ಇತರ ದೇಶಗಳು 11 ವರ್ಷದೊಳಗಿನವರಿಗೆ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದರೆ, ನಾರ್ವೆ ಶಿಶುವಿಹಾರಗಳನ್ನು ಮತ್ತೆ ತೆರೆಯಲು ಸಜ್ಜಾಗಿದೆ. ಮೇ 4ರಂದು ಜರ್ಮನಿ ಕೆಲವು ಶಾಲೆಗಳನ್ನು ಮತ್ತೆ ತೆರೆಯಲಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.